ರಾಜಕೀಯ ಆರೋಪ-ಪ್ರತ್ಯಾರೋಪ ಅವಾಚ್ಯ ಶಬ್ದಗಳ ಬಳಕೆಯಿಂದ ಜಿಲ್ಲೆಗೆ ಕೆಟ್ಟ ಹೆಸರು : ಅನೀಲಗೌಡ
ಇಂಡಿ: ವಿಜಯಪೂರ ಜಿಲ್ಲೆಯಲ್ಲಿ ಜ್ಞಾನದಾಸೋಹಿ ಸಿದ್ದೇಶ್ವರ ಸ್ವಾಮೀಜಿಗಳು, ವಿಶ್ವಗುರು ಬಸವಣ್ಣನವರು, ತ್ರಿವಿಧ ದಾಸೋಹಿ ಬಂಥನಾಳದ ಸಂಗನಬಸವ ಮಹಾಸ್ವಾಮೀಗಳು, ವಚನ ಪಿತಾಮಹ ಫ.ಗು. ಹಳಕಟ್ಟಿರವರು ಈ ಜಿಲ್ಲೆಯನ್ನು ಸಂಸ್ಕಾರದಿಂದ ಕಟ್ಟಿದ್ದಾರೆ. ಆದರೆ ಇಂದಿನ ರಾಜಕಾರಣಿಗಳ ಮಿತಿ ಮೀರಿದ ಆರೋಪ-ಪ್ರತ್ಯಾರೋಪ ಅವಾಚ್ಯ ಶಬ್ದಗಳ ಬಳಕೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುವ ಕಾಲ ಸನ್ನಿಹಿತವಾಗಿದೆ. ರಾಜಕಾರಣ ಗಳು ಸಂಸ್ಕಾರದ ವರ್ತನೆಯ ಜೊತೆಗೆ ಜಿಲ್ಲೆಯ ಅಭಿವೃಧ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ರಾಜಕೀಯ ಹಿತಚಿಂತಕರ ವೇದಿಕೆಯ ಮುಖಂಡ ಅನೀಲಗೌಡ ಬಿರಾದಾರ ಆಗ್ರಹಿಸಿದ್ದಾರೆ.
ಗುರುವಾರ ಪಟ್ಟಣದ ಖಾಸಗಿ ಸಂಸ್ಥೆಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಎಲ್ಲರು ಒಂದಾಗಿ ನಮ್ಮ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ವೃಥಾ ಆರೋಪ-ಪ್ರತ್ಯಾರೋಪ ಮಾಡುವ ಬದಲು ನೀರಾವರಿ ಕಡೆ ಗÀಮನ ಹರಿಸಿ ನಮ್ಮ ಜಿಲ್ಲೆ ನೀರಾವರಿ ಮಾಡಿದ್ದರೆ. ನಮ್ಮ ಭಾಗದ ಜೀವಂತ ದೇವರು ತಾವಾಗಿರುತ್ತಿದ್ದೀರಿ ಎಂದ ಅವರು ವಿದ್ವಾಂಸರು, ಸಾಹಿತಿಗಳು, ಹೋರಾಟಗಾರರು, ಈ ಜಿಲ್ಲೆಯನ್ನು ಸರ್ವವಿಧದಲ್ಲಿ ಶ್ರೀಮಂತಗೊಳಿಸಿದ್ದಾರೆ. ಐತಿಹಾಸಕವಾಗಿ ಭೌಗೋಳಿಕವಾಗಿ, ಆಧ್ಯಾತ್ಮಕವಾಗಿ ಜಿಲ್ಲೆ ನಾಡಿನಲ್ಲಿ ಪ್ರತಿನಿಧಿಸುತ್ತಾರೆ. ಅಂದರೆ ಅವರು ನಮ್ಮ ನಾಯಕರು, ನಮ್ಮನ್ನಾಳುವವರು. ಅವರ ವರ್ತನೆ, ನಡತೆ, ಮಾತು, ಕೃತಿಗಳು ಎಲ್ಲವೂ ಮಾದರಿಯಾಗಿರಬೇಕಲ್ಲವೇ? ಅವುಗಳು ನಮ್ಮ ಘನತೆಯನ್ನು ಹೆಚ್ಚಿಸಬೇಕಲ್ಲವೇ? ಆದರೆ ಈಗ ಜಿಲ್ಲೆಯಲ್ಲಿ ನಡೆಯಿತ್ತಿರುದೇನು? ಆತ್ಮವಿಮರ್ಶೆ ಆಗಬೇಕಲ್ಲವೇ?
ತಾಯಿಯಂತೆ ಮಗಳು, ತಂದೆಯAತೆ ಮಗ, ಗುರುವಿನಂತೆ ಸಮಾಜ, ಪ್ರತಿನಿಧಿಗಳಂತೆ ಪ್ರಜೆಗಳು ಹೀಗೆ ಪ್ರತಿಯೋಬ್ಬರೂ ಇಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಅನುಸರಿಸುತ್ತಾರೆ. ನಾವು ಮತಕೊಟ್ಟು ಆರಿಸಿಕಳಿಸಿದವರ ನಡತೆ ಮಾದರಿಯಾಗಿರಬೇಕು ಎನ್ನುವುದು ಪ್ರತಿಯೋಬ್ಬ ಪ್ರಜೆಯ ಆಶಯವಾಗಿರುತ್ತದೆ. ಈಗಿನ ಜಿಲ್ಲೆಯ ನಾಯಕರ ಕಿತ್ತಾಟದಿಂದ ಜಿಲ್ಲೆಯ ಜನತೆಗೆ ಮುಜುಗರ ಆಗುತ್ತದೆ.
ಆಲಮಟ್ಟಿ ಅಣ್ಣೆಕಟ್ಟುನ್ನು ಎತ್ತರವನ್ನು ೫೧೯ ರಿಂದ ೫೨೪ ವರಗೆ ಹೆಚ್ಚಿಸಿ ನಮ್ಮ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಒಂದಾಗಿ ಆಲಮಟ್ಟಿ ಅಣ್ಣೆಕಟ್ಟನ್ನು ಎತ್ತರಿಸಿ ನಮ್ಮ ಜಿಲ್ಲೆಯ ಭೀಕರ ಬರಗಾಲವನ್ನು ಹೊಡೆದೋಡಿಸಿ, ಅನ್ನದಾತರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು.
ನೆರೆಯ ಕಲರ್ಬುಗಿ-ಯಾದಗಿರಿ ಜಿಲ್ಲೆಯ ಎಲ್ಲ ಪಕ್ಷದ ಪ್ರತಿನಿಧಿಗಳು ಒಂದಾಗಿ ಹೋರಾಟ ಮಾಡಿ ೩೭೧ ಜೆ (ಕಲಂ) ಪಡೆದರು ಅವರ ಮಕ್ಕಳ ಭವಿಷ್ಯ ರೂಪಿಸಿವಲ್ಲಿ ಯಶಸ್ವಿಯಾದರು, ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳು ಯಾವಾಗ ಒಂದಾಗುತ್ತಿರಿ? ನೆರೆಯ ಬಾಗಲಕೋಟ ಜಿಲ್ಲೆಯ ಕೃಷ್ಣ ಯೋಜನೆಯಿಂದ ಭಾವಿತರಾದ್ದರು ರೈತರು ಕೃಷ್ಣ ಪುನರ್ವಸತಿ ಯೋಜನೆ ಹೋರಾಟ ಮೂಲಕ ಯಶಸ್ವಿ ಕಂಡರು. ಜಿಲ್ಲೆಯ ಜನ ಪ್ರತಿನಿಧಿಗಳು ಯಾವಾಗ ಒಂದಾಗುತ್ತಿರಿ? ನೆರೆಯ ಧಾರವಾಢ ಹುಬ್ಬಳಿ ಕಳಸಾ ಬಂಡೂರಿ ವiಹದಾಯಿ ಯೋಜನೆ ಜಲ ವಿವಾದ ಸುಮಾರು ೫ ದಶಕಗಳಿದ ಈ ಯೋಜನೆ ನೆನಗುದ್ದಿಗೆ ಬಿದ್ದಿದ್ದು ಜಿಲ್ಲೆಯ ಎಲ್ಲಾ ಪಕ್ಷದ ಪ್ರತಿನಿಧಿಗಳು ಒಂದಾಗಿ ಪಕ್ಷಾತೀತವಾಗಿ ಹೋರಾಟ ಮಾಡಿ ತಮ್ಮ ಪಾಲಿನ ಹಕ್ಕಿನ ನೀರು ಪಡೆದಿದ್ದರು. ಜಿಲ್ಲೆಯ ಜನ ಪ್ರತಿನಿಧಿಗಳು ಯಾವಾಗ ಒಂದಾಗುತ್ತೀರಿ ಎಂದು ರಾಜಕೀತಯ ಯುವ ವೇದಿಕೆಯ ಮುಖಂಡರು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಾಳು ಮುಳಜಿ, ವಿಜಯಕುಮಾರ ರಾಠೋಡ, ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಮಂಜುನಾಥ ದೇವರ, ಈರಣಗೌಡ ಪಾಟೀಲ, ಶ್ರೀಕಾಂತ ಬಡಿಗೇರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ರಾಜಕೀಯ ಹಿತಚಿಂತಕರ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಠೀಯಲ್ಲಿ ಅನೀಲಗೌಡ ಬಿರಾದಾರ ಮಾತನಾಡಿದರು.


















