2024 – 25 ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ:ಶಾಸಕ ಎಂ.ಆರ್. ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು: ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಆವರಣದಲ್ಲಿ ಒಟ್ಟು 147 ಪಲಾನುಭವಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ರವರು ವಿತರಣೆ ಮಾಡಿದರು.
ಸುಧಾರಿತ ಉಪಕರಣಗಳ ಸರಬರಾಜು ಕಾರ್ಯಕ್ರಮದಡಿ ಪೆಡ್ಲಿಂಗ್ ಹೊಲಿಗೆ ಯಂತ್ರ ಜೊತೆಗೆ ಮೋಟರ್ ಸುಧಾರಿತ ಉಪಕರಣಕ್ಕಾಗಿ ಪರಿಶಿಷ್ಟಜಾತಿ ಉಪ ಯೋಜನೆಯಡಿ ಪರಿಶಿಷ್ಟಜಾತಿಯ 26, ಪರಿಶಿಷ್ಠ ಪಂಗಡ 10, ಸಾಮಾನ್ಯ 100, ಅಲ್ಪಸಂಖ್ಯಾತರು 8, ವಿಕಲಚೇತನರು 3, ಒಟ್ಟು 147 ಪಲಾನುಭವಿಗಳು ಆಯ್ಕೆಗೊಂಡಿದ್ದು ಈ ಎಲ್ಲಾ ಫಲಾನುಭವಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ರವರು ಉಚಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ ಪುಷ್ಪಲತಾ, ತಹಸಿಲ್ದಾರ್ ಗುರುಪ್ರಸಾದ್, ತಾ.ಪಂ ಇ.ಓ. ಉಮೇಶ್ ಚಾಮೂಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ ಮುಖಂಡರುಗಳಾದ ,ಚಿಣ್ಣವೆಂಕಟ್,ಗೋಪಾಲ್ ನಾಯಕ,ಗೋವಿಂದ,ವೆಂಕಟೇಶ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.


















