ತಂಗಡಗಿ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಶೀಘ್ರ ಆರಂಭಕ್ಕೆ ಆಗ್ರಹ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮಕ್ಕೆ ಮಂಜೂರಾದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಇದೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಗೊಳಿಸಲು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ತಾಲ್ಲೂಕಾ ಅಧ್ಯಕ್ಷ ಸಂಗಯ್ಯ ಸಾರಂಗಮಠ ಅವರು ಸೋಮವಾರ ಡಿಡಿಪಿಐ ಟಿ.ಎಸ್. ಕೊಲ್ದಾರ ಅವರಿಗೆ ಮನವಿ ಸಲ್ಲಿಸಿದ್ದಾರೆ. 2022ರ ಸೆ.9 ರಂದೇ ಆದೇಶ ಹೊರಡಿಸಿರುವ ಸರ್ಕಾರ ತಂಗಡಗಿ ಸೇರಿ ಜಿಲ್ಲೆಯ ಮೂರು ಸ್ಥಳ ಗಳಲ್ಲಿ 2023ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಆರಂಭಿಸಬೇಕೆನ್ನುವ ನಿರ್ದೇಶನ ಇನ್ನೂ ಈಡೇರಿಲ್ಲ. ತಂಗಡಗಿಯಲ್ಲಿ ಪಿಯುಸಿ ಕಾಲೇಜು ಆರಂಭಿಸಿದಲ್ಲಿ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮದ ಮಕ್ಕಳಿಗೆ ಅನುಕೂಲವಾಗಲಿದೆ. ಪಿಯುಸಿ ಕಲಿಯಲೆಂದೇ ಅಂದಾಜು 15 ಕಿಮೀ ದೂರದ ಮುದ್ದೇಬಿಹಾಳಕ್ಕೆ ಹೋಗುವುದನ್ನು ತಪ್ಪಲಿದೆ ಎಂದು ತಿಳಿಸಿದರು.