ವಿಜಯಪುರ | ಸೌರಶಕ್ತಿ ಆಧಾರಿತ ಜೀವನೋಪಾಯಕ್ಕೆ ಅನುಕೂಲವಾಗುವ ಸ್ವಉದ್ಯೋಗದ ಕಾರ್ಯಗಾರ
ವಿಜಯಪುರ : ಮಹಿಳಾ ಸದಸ್ಯರು ಹೆಚ್ಚು ಸ್ವ ಉದ್ಯೋಗ, ಆರ್ಥಿಕ ಬೆಳವಣಿಗೆಗೆ ಸ್ಥಳೀಯ ಸರ್ಕಾರದ ಸೌಲಭ್ಯಗಳು ಬಳಕೆ ಮಾಡಿಕೊಂಡು ಮಾದರಿ ಜೀವನವನ್ನು ನಿರ್ವಹಿಸಬೇಕೆಂದು ವಿಜಯಪುರ ಏ ಆರ್ ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕರು ರವಿ ಕಿತ್ತೂರ್ ಕರೆ ನೀಡಿದರು.
ಜಿಲ್ಲೆಯ ಆದರ್ಶ ನಗರದಲ್ಲಿ ಎಮ್.ಪಿ.ಐ ಮಣಿಪಾಲ ಪೇಮೆಂಟ್ ಮತ್ತು ಐಡೆಂಟಿಟಿ ಸೆಲ್ಯೂಷನ್ ಲಿಮಿಟೆಡ್ ರ ಪ್ರಯೋಜಿಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಸಮರ್ಪಣ ಅಭಿವೃದ್ಧಿ ಸಂಸ್ಥೆಯ ಹಾಗೂ ಸೆಲ್ಕೋ ಸೋಲಾರ್ ಲೈಟ್ ರ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಸ್ವಸಾಯ ಸಂಘದ ಆಸಕ್ತ ಮಹಿಳೆಯರಿಗೆ ಸೌರಶಕ್ತಿ ಆಧಾರಿತ ಜೀವನೋಪಾಯಕ್ಕೆ ಅನುಕೂಲವಾಗುವ ಸ್ವಉದ್ಯೋಗದ ಕಾರ್ಯಗಾರ ಹಮ್ಮಿಕೊಂಡಿದ್ದು ಕಾರ್ಯಾಗಾರದಲ್ಲಿ ಮಾತನಾಡಿದರು.
ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು ರಾಮದಾಸ್ ಅವರು ಮಾತನಾಡಿ, ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಇಲಾಖೆಗಳು ನೀಡುವ ಸಹಕಾರವನ್ನು ಬಳಕೆ ಮಾಡಿಕೊಳ್ಳಬೇಕು, ನಮಗೆ ಅನುಕೂಲಕರವಾದ ಉದ್ಯೋಗವನ್ನು ಆಯ್ಕೆ ಮಾಡಿ ಆಸಕ್ತಿ ಅಭಿರುಚಿ ಹೊಂದಿ ಕಾರ್ಯಯೋನ್ಮುಖರಾಗಬೇಕೆಂದು ಕರೆ ನೀಡಿದರು.
ಶಿವಕುಮಾರ್ ಕೆ ಮಾತನಾಡಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕೌಶಲ್ಯಧಾರಿತ ಉದ್ಯೋಗಗಳ ಸೃಷ್ಟಿಗೆ ಯುವಕರು/ಮಹಿಳೆಯರು ಹೆಚ್ಚು ಆಸಕ್ತಿ ವಹಿಸಬೇಕು, ಸೌರ ತಂತ್ರಜ್ಞಾನದ ಮುಖೇನ ಸ್ವ ಉದ್ಯೋಗ ಮಾಡುವುದರ ಜೊತೆಗೆ ಉದ್ಯಮಿದಾರರಾಗಿ ಮಾದರಿ ಗ್ರಾಮ ಮತ್ತು ನಗರ ಸೃಷ್ಟಿಗೆ ಅವಕಾಶವಾಗುತ್ತದೆ ಅಲ್ಲದೆ ಸೌರಶಕ್ತಿ ಆಧಾರಿತ ಜೀವನೋಪಾಯದ ಉಪಕರಣಗಳನ್ನು ಅಳವಡಿಕೆ ಮಾಡುವುದರ ಮೂಲಕ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಅದರಲ್ಲಿ ಆಹಾರ ಉತ್ಪನ್ನಗಳ ತಯಾರಿಕೆಯಾದ ಚಿಪ್ಸ್ ಚಕ್ಕಲಿ,ಶಾವಿಗೆ ಕಾರಕುಟ್ಟುವುದು ರೊಟ್ಟಿ ತಯಾರಿಕೆ, ಜೆರಾಕ್ಸ್ ಬೀದಿಬದಿಯ ವ್ಯಾಪಾರ, ಕೃಷಿ ಕ್ಷೇತ್ರದಲ್ಲಿ ಮೌಲ್ಯಧಾರಿತ ತಂತ್ರಜ್ಞಾನ ಮತ್ತಿತರ ಸ್ವ ಉದ್ಯೋಗಕ್ಕೆ ಸಹಾಯವಾಗಿ ಸೌರ ತಂತ್ರಜ್ಞಾನ ಆಧಾರಿತ ಉಪಕರಣಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದ್ದಲ್ಲಿ ಉದ್ಯೋಗಸೃಷ್ಟಿಯಾಗುತ್ತದೆ ಅಲ್ಲದೇ ಸ್ವ ಉದ್ಯೋಗದಲ್ಲಿ ವಿದ್ಯುತ್ ಶಕ್ತಿಯ ಅಭಾವ ಮತ್ತು ಅವಲಂಬನೆ ಕಡಿಮೆಯಾಗುತ್ತದೆ, ಇಂದಿನ ದಿನಮಾನಗಳಲ್ಲಿ ಯುವಕ ಯುವತಿಯರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲು ಸೌರಶಕ್ತಿಯ ತಂತ್ರಜ್ಞಾನ ಆಧಾರಿತ ಉಪಕರಣಗಳು ಹೆಚ್ಚಿನ ಆದ್ಯತೆ ನೀಡುತ್ತಿದೆ ಹಾಗಾಗಿ ಸೌರ ತಂತ್ರಜ್ಞಾನ ಬಳಕೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮಾದರಿ ಯಶಸ್ವಿ ಉದ್ದಿಮೆದಾರರಾಗ ಬೇಕೆಂದು ಕರೆ ನೀಡಿದರು.
ಆರ್ಥಿಕ ಸಾಕ್ಷರತಾ ಸಂಯೋಜಕರು ಕೆನರಾ ಬ್ಯಾಂಕ್ ಈರೇಶ ಡಂಗಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ 436 ರೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ, 20 ರೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಯನ್ನು ಅಳವಡಿಕೆ ಮಾಡಬೇಕು ಆ ಮೂಲಕ ತಮ್ಮ ಕುಟುಂಬದ ಸಹಚಾರರಿಗೆ ಭದ್ರತೆ ಒದಗಿಸಲು ಅನುಕೂಲವಾಗುತ್ತದೆ, ಅಲ್ಲದೆ ಬ್ಯಾಂಕಿನಲ್ಲಿ ವಿಶೇಷ ಸಾಲ ಸೌಲಭ್ಯಗಳು ಸಿಗುತ್ತದೆ, ಸಬ್ಸಿಡಿ ಸ್ಕೀಮ್ಗಳನ್ನು ಬಳಕೆ ಮಾಡಿಕೊಂಡು ಸ್ವ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕಾಗಿ ಕರೆ ನೀಡಿದರು.
ವಿಜಯಕುಮಾರ್ ಕಾಂಬ್ಳೆ ಸರ್ ಅವರು ಮಾತನಾಡಿ ಸ್ವ ಸಹಾಯ ಸಂಘದ ಮಹಿಳೆಯರು ಒಗ್ಗಟ್ಟಾಗಿ ವಿಭಿನ್ನ ಬಗೆ ಉದ್ಯೋಗ ಮಾಡಿದ್ದಲ್ಲಿ ಗ್ರಾಮ ನಗರ ಕುಟುಂಬ ಅಭಿವೃದ್ಧಿಗೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಕೋಳಿ ಸಂತೋಷ್ ಕಾಂಬ್ಳೆ, ರೇವಣಸಿದ್ದ ಆಲ ಶೆಟ್ಟಿ, ಅನಿತಾ ಕುಂಬಾರ್, ಸವಿತಾ ಹೊನ್ನಾಕಟ್ಟಿ ಮತ್ತಿತರ ಕಾರ್ಯಕರ್ತರು ಹಾಗೂ 50ಕ್ಕೂ ಹೆಚ್ಚು ಸ್ವಉದ್ಯೋಗ ಆಸಕ್ತ ಮಹಿಳಾ ಸದಸ್ಯರು, ಸಮರ್ಪಣ ಅಭಿವೃದ್ಧಿ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದು ತರಬೇತಿ ಕಾರ್ಯಗಾರವು ಯಶಸ್ವಿಯಾಗಿ ಪೂರ್ಣಗೊಂಡಿತು.


















