ಮುದ್ದೇಬಿಹಾಳ ;ಸುರಿವ ಮಳೆಯನ್ನು ಲೆಕ್ಕಿಸದೆ ತಿರಂಗಾ ಯಾತ್ರೆಯನ್ನು ನಿಲ್ಲಿಸದೇ ರಾಷ್ಟ್ರಧ್ವಜ ಹಿಡಿದುಕೊಂಡು ಮುದ್ದೇಬಿಹಾಳ ಪಟ್ಟಣದ ನಾಗರಿಕರು ಮಾಜಿ ಸೈನಿಕರು ದೇಶಾಭಿಮಾನಿಗಳು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರೊಂದಿಗೆ ತಿರಂಗಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಸುರಿವ ಮಳೆಯಲ್ಲಿ ನೂರಾರು ಜನರು ರಾಷ್ಟ್ರಧ್ವಜ ಹಿಡಿದು ಭಾರತ ಮಾತಗೆ ವೀರ ಸೈನಿಕರಿಗೆ ಜಯ ಘೋಷಣೆ ಹಾಕುತ್ತಾ ಸಾಗಿದರು . ತಿರಂಗಾ ಯಾತ್ರೆಯ ಮೂಲಕ ದೇಶ ಭಕ್ತಿ ಜಾಗೃತಗೊಳಿಸುವ ಕೆಲಸ ಮಾಡಲಾಯಿತು.
ಪಾಕ್ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಿದ ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕುಟುಂಬದ ಸದ್ಯಸರಿಗೆ ಸನ್ಮಾನಿಸುವ ದೇಶಭಕ್ತಿಯ ಕಾರ್ಯಕ್ರಮ ಪಕ್ಷಾತೀತ ಜಾತ್ಯಾತೀತ ಧರ್ಮಾತೀತವಾಗಿ ಹಮ್ಮಿಕೊಳ್ಳಲಾಗಿತ್ತು ಮಂಗಳವಾರ ಪಟ್ಟಣದ ಬಜಾರ್ ಹನುಮಾನ್ ಮಂದಿರದದ ಆರಂಭವಾದ ತಿರಂಗಾ ಯಾತ್ರೆ ಮಳೆಯಲ್ಲೂ ಯಶಸ್ವಿಯಾಗಿ ನಡೆಸಲಾಯಿತು. ಬಸವೇಶ್ವರ ವೃತ್ತದಿಂದ ವಿಜಯ ಮಹಾಂತೇಶ ಮಂಗಲ ಭವನದ ವರಗೆ ವಿಜಯ ತಿರಂಗಾ ಯಾತ್ರೆ ನಡೆಸಲಾಯಿತು
ಆಪರೇಷನ್ ಸಿಂದೂರ ಮೂಲಕ ದಿಟ್ಟ ಉತ್ತರ ನೀಡಿದ ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ಸೈನ್ಯದಲ್ಲಿ ಸೇವೆ ಸಲ್ಲಿಸುವ ಸೈನಿಕರ ಪರಿವಾರದ ಸದಸ್ಯರಿಗೆ , ವೀರ ನಾರಿಯರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಎ.ಎಸ್ ಪಾಟೀಲ್ ನಡಹಳ್ಳಿ ದೇಶ ಉಳಿದರೆ ನಾವು ಉಳಿಯುತ್ತೇವೆ ದೇಶವನ್ನು ಉಳಿಸುವ ದೇಶವನ್ನು ರಕ್ಷಿಸುವ ಕೆಲಸವನ್ನು ದೇಶದ ವೀರ ಸೈನಿಕರು ಮಾಡುತ್ತಿದ್ದಾರೆ ಸೈನಿಕರು ಇದ್ದರೆ ನಾವು ದೇಶ ಸದೃಡವಾಗಿದ್ದರೆ ನಾವುಗಳು ಸದೃಡವಾಗಿರಲು ಸಾಧ್ಯ ದೇಶದ ಶಾಂತಿಗೆ ಹಸನಾದ ಬದುಕ ಕಟ್ಟಿದವರು ಸೈನಿಕರು ರಾಷ್ಟ್ರದ ರಕ್ಷಣೆ ಮಾಡುವ ಸೈನಿಕರಿಗೆ ಈ ಮೂಲಕ ಅಭಿನಂದಿಸೋಣ ದೇಶದ ರಕ್ಷಣೆಗಾಗಿ ಸೈನಿಕರನ್ನು ಹೆತ್ತ ತಂದೆತಾಯಿಗಳನ್ನು ಸೈನಿಕರ ಪರಿವಾರವನ್ನು ಸನ್ಮಾನಿಸಿ ಗೌರವಿಸುವ ಕೆಲಸವನ್ನು ನಾವೆಲ್ಲರೂ ಈ ಕಾರ್ಯಕ್ರಮದ ಮೂಲಕ ಮಾಡುತ್ತಿದ್ದೇವೆ ಎಂದರು.
ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಎಂಬ ಧ್ಯೇಯದೊಂದಿಗೆ ಪಹಲ್ಗಾಮ್ ದಾಳಿ ನಂತರ ಭಾರತ ಪಾಕಿಸ್ತಾನ ಉಗ್ರರಿಗೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದೆ. ಸೈನಿಕರ ಧೈರ್ಯ, ದೃಢತೆ, ಆತ್ಮಸ್ಥೈರ್ಯ, ತ್ಯಾಗವನ್ನು ನಾವೆಲ್ಲ ಮೆಚ್ಚಬೇಕು. ದೇಶ ಸೈನಿಕರಿಗೆ ಅಭಿನಂದನೆ ಹಾಗೂ ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂಬ ಸಂದೇಶ ರವಾನಿಸಲು ತಿರಂಗ ರ್ಯಾಲಿ ಪಕ್ಷಾತೀತ ಜಾತ್ಯಾತೀತವಾಗಿ ಹಮ್ಮಿಕೊಳ್ಳಲಾಗಿತ್ತು 2047 ಹೊತ್ತಿಗೆ ಭಾರತ ವಿಶ್ವದ ನಂ೧ ರಾಷ್ಟ್ರವಾಗಲಿದೆ.
ಇವತ್ತಿನ ಪಾಕ್ ಭಾರತ ಯುದ್ದ ಮೀಸೈಲ್ ಗಳ ಯುದ್ದವಾಗಿತ್ತು ಆಧುನಿಕ ಯುದ್ದ ಕೌಶಲ್ಯತೆಯಲ್ಲಿ ಭಾರತ ತನ್ನ ಶಕ್ತಿ ಸಾಮರ್ಥ್ಯ ತೋರಿಸಿದೆ ಈ ಸಂದರ್ಭದಲ್ಲಿ ಮೀಸೈಲ್ ಗಳ ಪಿತಾಮಹ ಎಪಿಜೆ ಅಬ್ದುಲ್ ಕಲಾಂ ಅವರನ್ನು ಸ್ಮರಿಸಬೇಕು ದೇಶದ ರಕ್ಷಣೆಗೆ ಬ್ರಹ್ಮೂಸ್ ನಿಂದ ಹಿಡಿದು ಅನೇಕ ಶಕ್ತಿಶಾಲಿ ಮೀಸೈಲ್ ಗಳನ್ನು ದೇಶಕ್ಕೆ ನೀಡಿದ್ದಾರೆ ಭಾರತದ ಮೇಲೆ ಅನೇಕ ಡ್ರೋನ್ ಗಳ ಮೂಲಕ ಬಾಂಬ್ ಹಾಕಲು ಯತ್ನಿಸಿದ ಶತ್ರುಗಳ ಯತ್ನ ನಾಶಮಾಡಿದ್ದು ಭಾರತದ ಅಣು ವಿಜ್ಞಾನಿಗಳು ಎಂದರು.
ಕಾರ್ಯಕ್ರಮದಲ್ಲಿ ವೀರ ಸೈನಿಕರ ಪರಿವಾರದ ಸದಸ್ಯರಿಗೆ ತಂದೆ ತಾಯಿಗಳಿಗೆ ಹಾಗೂ ವೀರ ನಾರಿಯರಿಗೆ ಸನ್ಮಾನಿಸಿ ದೇಶದ ಸೈನಿಕರಿಗೆ ಸ್ಥೈರ್ಯ ತುಂಬಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರದ ಸ್ಮರಣಿಕೆ ನೀಡಲಾಯಿತು .
ಕಾರ್ಯಕ್ರಮದಲ್ಲಿ ಡಾ.ವಿರೇಶ ಪಾಟೀಲ್, ಮಾಜಿ ಸೈನಿಕ ಬಿ ಹೆಚ್ ನಾಗರಬೆಟ್ಟ, ಬಸವ ಇಂಟರ್ನ್ಯಾಷನಲ್ ಶಾಲೆಯ ಪ್ರಭಾ ಚಿನಿವಾರ, ಲಯನ್ಸ್ ಶಾಲೆಯ ಆಡಳಿತ ಅಧಿಕಾರಿ ದೀಪಾ ದೇಸಾಯಿ, ನಾಲತವಾಡ ಕಾಲೇಜಿನ ಪ್ರಾಚಾರ್ಯ ಬಿ ಬಿ ಹೂಗಾರ ಮಾತನಾಡಿ ಸೈನಿಕರಿಗೆ ನುಡಿ ನಮನ ಸಲ್ಲಿಸಿದರು.
ಪಹಲ್ಗಾಮ್ ದಾಳಿಯಲ್ಲಿ ಮಡಿದ ಹಾಗೂ ಭಾರತ ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು,ಪಟ್ಟಣದ ಗಣ್ಯರು ಹಿರಿಯರು ದೇಶಪ್ರೇಮಿಗಳು , ಪಕ್ಷಾತೀತ ಜಾತ್ಯಾತೀತ ಧರ್ಮಾತೀತವಾಗಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ಗೋಪಾಲ ಹೋಗಾರ ನಿರೂಪಿಸಿ ವಂದಿಸಿದರು