ಸಿಡಿಲಿಗೆ ಮೃತಪಟ್ಟ ರೈತ ಕುಟುಂಬಕ್ಕೆ 5 ಲಕ್ಷ ರೂ.ವಿತರಣೆ : ಶಾಸಕ ಎಂ.ವೈ.ಪಾಟೀಲ್ ಸಾಂತ್ವನ
ರೈತರ ಜತೆ ಕಾಂಗ್ರೆಸ್ ಸರ್ಕಾರ ಇದೆ
ವರದಿ : ಉಮೇಶ್ ಅಚಲೇರಿ, ಅಫಜಲಪುರ ಕಲ್ಬುರ್ಗಿ ಜಿಲ್ಲೆ
ಅಫಜಲಪುರ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ರೈತರ ಪರವಾಗಿ ಇದೆ.ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸಿಡಿಲಿಗೆ ಮೃತ ಪಟ್ಟಿರುವ ರೈತನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ನೀಡಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.
ತಾಲೂಕಿನ ಕರಜಗಿ ಗ್ರಾಮದಲ್ಲಿ ಮೇ 20ರಂದು ಸಿಡಿಲಿಗೆ ಮೃತಪಟ್ಟಿರುವ ರೈತ ನಬಿಲಾಲ್ ಚೌಧರಿ ಕುಟುಂಬಕ್ಕೆ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿ ಮಾತನಾಡಿದ ಅವರು,ಹೋದ ಜೀವ ಮರಳಿ ಯಾವತ್ತೂ ಬರುವುದಿಲ್ಲ,ಆದರೆ ಕುಟುಂಬಸ್ಥರು ಧೈರ್ಯವಾಗಿದ್ದು ಮುಂದಿನ ಆಗು ಹೋಗುಗಳ ಬಗ್ಗೆ ನೋಡಿಕೊಳ್ಳಬೇಕು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ನಿರಂತರವಾಗಿ ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.ಅಲ್ಲದೇ ಮೃತ ರೈತನ ಕುಟುಂಬಕ್ಕೆ ಮುಂದೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಶ್ರೀಮಂತ ಬಿರಾದಾರ, ಇರ್ಫಾನ್ ಜಮಾದಾರ,ಕೈಲಾಸಯ್ಯ ಹಿರೇಮಠ,ಭೀಮಾಶಂಕರ ಭ್ಯೂಯಾರ,ಶರಣು ಈಶ್ವರಗೊಂಡ,ಮಲ್ಲು ಕೀಣಗಿ,ದಸ್ತಗೀರ ಚೌಧರಿ, ಸುರೇಶ್ ಉಪ್ಪಿನ, ಉಸ್ಮಾನ್ ಚೌಧರಿ,ಖಾಜಾಭಾಯಿ ಚೌಧರಿ,ಲಾಲ ಅಹ್ಮದ್ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮೃತ ರೈತ ನಬಿಲಾಲ ಚೌಧರಿ ಕುಟುಂಬಸ್ಥರಿಗೆ ಶಾಸಕ ಎಂ.ವೈ.ಪಾಟೀಲ್ ಅವರು 5 ಲಕ್ಷ ರೂ.ಚೆಕ್ ವಿತರಣೆ ಮಾಡಿದರು.ತಹಶೀಲ್ದಾರ್ ಸಂಜೀವಕುಮಾರ ದಾಸರ ಉಪಸ್ಥಿತರಿದ್ದರು



















