ಶೈಕ್ಷಣಿಕ ಅಭಿವೃದ್ದಿ ನನ್ನ ಗುರಿ- ಯಶವಂತರಾಯಗೌಡ
ಇಂಡಿ : ನನ್ನ ವಿಧಾನಸಭಾ ಕ್ಷೇತ್ರವನ್ನು ಶೈಕ್ಷಣ ಕವಾಗಿ ಅಭಿವೃದ್ದಿಪಡಿಸುವದರೊಂದಿಗೆ ಇಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಅವರ ಸ್ವಂತ ಜೀವನ ರೂಪಿಸಿಕೊಂಡರೆ ಅದೇ ನನಗೆ ಹಾಗೂ ಈ ಕ್ಷೇತ್ರಕ್ಕೆ ಮತ್ತು ಪೋಷಕರಿಗೆ ನೀಡುವ ಕೊಡುಗೆ ಗೌರವ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳೊಡುವ ಸಮಾರಂಭ ಹಾಗೂ ವಿವಿಧ ಘಟಕಗಳ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿಯೇ ಇಂಡಿಗೆ ಜಿಟಿಟಿಸಿ ಕಾಲೇಜು ಆರಂಭಮಾಡಲಾಗುತ್ತಿದೆ. ಇಂತಹ ಹತ್ತಾರು ಶೈಕ್ಷಣ ಕ ಕಾರ್ಯಗಳು ಇಂಡಿಯಲ್ಲಿ ನಡೆದಿವೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಲು ಪ್ರಯತ್ನಿಸಬೇಕು. ತಂದೆ ತಾಯಿ ಋಣ ತೀರಿಸಿ ಉತ್ತಮ ಸಂಸ್ಕಾರವAತರಾಗಲು ಕೇಳಿಕೊಂಡರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರೊ ಗುರುದೇವ ಬಳುಂಡಗಿ, ಪ್ರಾಚಾರ್ಯ ಆರ್.ಎಚ್.ರಮೇಶ ಮಾತನಾಡಿ ವಿದ್ಯಾರ್ಥಿಗಳ ಅನುಕೂಲಕ್ಕೆ ಮುಂದಿನ ವರ್ಷಗಳಲ್ಲಿ ಸ್ನಾತಕೋತ್ತರ ತರಗತಿ ಪ್ರಾರಂಭವಾಗಲಿವೆ. ಅಲ್ಲದೆ ಪ್ರಧಾನಮಂತ್ರಿ ಉಷಾ ಯೋಜನೆಗೆ ಕಾಲೇಜು ಆಯ್ಕೆಯಾಗಿ ರೂ ೫ ಕೋಟಿ ಅನುದಾನವು ಸಿಗಲಿದೆ ಎಂದರು. ರವಿಕುಮಾರ ಅರಳಿ, ನಂದಕುಮಾರ ಬಿರಾದಾರ, ಸುರೇಖಾ ರಾಠೋಡ, ಎಸ್.ಜೆ. ಮಾಡ್ಯಾಳ ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣ , ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಜಟ್ಟೆಪ್ಪ ರವಳಿ ಡಾ. ವಿಜಯಮಹಾಂತೇಶ ದೇವರ, ತಿಪ್ಪಣ್ಣ ವಾಗ್ದಾಳ, ಸಂಗಮೇಶ ಹಿರೇಮಠ, ಪಿ.ಎಸ್.ದೇವರ ವೇದಿಕೆಯ ಮೇಲೆ ಇದ್ದರು. ಪಹಲ್ಗಾಮನಲ್ಲಿ ಮರಣ ಹೊಂದಿದ ಹಾಗೂ ಅಪರೇಷನ್ ಸಿಂಧೂರನಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಸಂತಾಪ ಸೂಚಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳೊಡುವ ಸಮಾರಂಭದಲ್ಲಿ ಶಾಸಕ ಯಶವಂತರಾAiÀiಗೌಡ ಪಾಟೀಲರು ಮಾತನಾಡಿದರು.


















