ರಸ್ತೆಗಳ ಸುಧಾರಣೆಗೆ ಕ್ರಮ – ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ : ತಾಲೂಕಿನ ಅನೇಕ ರಸ್ತೆಗಳು ಸುಧಾರಣೆಯಾಗದೆ ಹಾಗೆ ಉಳಿದಿದ್ದವು , ಲೋಕೋಯೋಗಿ ಇಲಾಖೆ ಸಚಿವರು ನನ್ನ ಮತಕ್ಷೇತ್ರಕ್ಕೆ ರಸ್ತೆಗಳ ಸುಧಾರಣೆಗೆ ವಿಶೇಷ ಅನುಧಾನ ನೀಡಿರುವದರಿಂದ್ದ ರಸ್ತೆಗಳ ಸುಧಾರಣೆಗೆ ಕ್ರಮ ಕೈಕೊಳ್ಳಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು. ಪಡನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಪಡನೂರ ಗ್ರಾಮಕ್ಕೆ ವಿವಿಧ ಯೋಜನೆಗಳಾದ ಭೀಮಾನದಿಗೆ ಬ್ರೀಜ್, ರಸ್ತೆಗಳ ಸುಧಾರಣೆ, ದೇವಾಲಯಗಳ ಜೀರ್ಣೋಧಾರ ಕೆಲಸಗಳು ಮಾಡುತ್ತಿರುವೆ ಮತಕ್ಷೇತ್ರದ ಜನರು ನೀಡಿದ ಅಧಿಕಾರ ನನ್ನ ಅನುಭವ ತಾಲೂಕಿಗೆ ಸಂಪೂರ್ಣ ಧಾರೆ ಏದರೆದಿರುವೆ ಎಂದರು. ದಿವ್ಯಸಾನಿಧ್ಯ ವಿರೂಪಾಕ್ಷ ಮಹಾಸ್ವಾಮಿಗಳು,ಕೆಂಚಪ್ಪ ಪೂಜಾರಿ ಸಾನಿಧ್ಯವಹಿಸಿ, ಲೋಕೋಪಯೋಗಿ ಎಇಇ ದಯಾನಂದ ಮಠ ಮಾತನಾಡಿದರು. ಗುತ್ತಿಗೆದಾರ ಎಲ್.ಎಂ ಮಡಗೊಂಡ ವೇದಿಕೆಯಲ್ಲಿದ್ದರು.
ಎಂ.ಆರ್ ಪಾಟೀಲ, ಕಲ್ಲನಗೌಡ ಬಿರಾದಾರ, ಬಾಬುಸಾಹುಕಾರ ಮೇತ್ರಿ, ಜೆಟ್ಟೆಪ್ಪ ರವಳಿ,ಜೀತಪ್ಪ ಕಲ್ಯಾಣ , ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ಮುಸ್ತಾಕ ಇಂಡಿಕರ್, ಜಾವೇದ್ ಮೋಮಿನ್, ಪಂಚಾಕ್ಷರಿ ಅರವತ್ತು, ಧಾನಪ್ಪ ಸಿಂಗಾರಿ, ಹಣಮಂತ್ರಾಯಗೌಡ ಅರವತ್ತು, ಸಾತಪ್ಪ ಲಿಗಾಡೆ, ಪುಂಡಲಿಕ ಅರವತ್ತು, ಭೀಮಾಶಂಕರ ಅರವತ್ತು, ಶಿವಾನಂದ ಸಿಂಗಾರಿ , ಎ.ಪಿ ಕಾಗವಾಡಕರ್ ಮತ್ತಿತರಿದ್ದರು. .
ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಭೂಮಿ ಪೂಜೆ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.


















