2025 : ರಕ್ಷೀತಾ SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸಮಾಜದ ಮುಖಂಡರಿಂದ ಸನ್ಮಾನ
ಇಂಡಿ : ತಾಲೂಕಿಗೆ ಸಮಗಾರ ಹರಳಯ್ಯ ಸಮುದಾಯದ ಹೆಮ್ಮೆಯ ಪುತ್ರಿ ಕುಮಾರಿ ರಕ್ಷಿತಾ ಪಂಡಿತ ಕೊಡಹೊನ್ನ ಇವಳು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625 ಕ್ಕೆ 620 ಅಂಕ ಪಡೆದು ಇಂಡಿ ತಾಲೂಕಿಗೆ ಪ್ರಥಮ ವಿಧ್ಯಾರ್ಥಿನಿಯಾಗಿ ಯಶಸ್ಸು ಸಾಧಿಸಿದ್ದಾಳೆ, ಅವಳಿಗೆ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದ್ದರು.
ಈ ವಿಧ್ಯಾರ್ಥಿನಿಯ ಸಾಧನೆ ಸಮುದಾಯದ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಪ್ರಸ್ತುತ ಸಂದರ್ಭದಲ್ಲಿ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ತುಂಬಾ ಹಿಂದುಳಿದಿದೆ. ಇಂತಹ ಸಂದರ್ಭದಲ್ಲಿ ಈ ವಿಧ್ಯಾರ್ಥಿನಿಯ ಸಾಧನೆ ಸಮಾಜಕ್ಕೆ ಹೆಮ್ಮೆ ಹಾಗೂ ಗೌರವ ತಂದಿದೆ… ಜೊತೆಗೆ ಸಮಾಜದ ಇನ್ನಿತರ ವಿಧ್ಯಾರ್ಥಿಗಳು ಶೇ 90% ಕ್ಕಿಂತಲೂ ಹೆಚ್ಚಿಗೆ ಅಂಕ ಪಡೆದಿದ್ದಾರೆ ಅಂತಹ ವಿಧ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಗುವುದು. ಸಮಾಜದ ಮುಖಂಡ ಮಹೇಶ ಶಿವಪ್ಪ ಹೊನ್ನಬಿಂದಗಿ, ರಾಯಪ್ಪ ಹರಳಯ್ಯ, ರಾಯಗೊಂಡ ರಗಟೆ, ಕಾಶಿನಾಥ ಹೊಸಮನಿ, ಜಗನ್ನಾಥ ಕೊಡತೆ, ಶ್ರೀನಿವಾಸ ಶಹಾಪುರ ವಿಜಯಪುರ, ಸೋಮು ಹೊನ್ನಕಟ್ಟಿ, ಪಂಡಿತ ಕೊಡಹೊನ್ನ ಇದ್ದರು.
ಒಳ ಮೀಸಲಾತಿ ಜಾತಿಗಣತಿ
ಸಮುದಾಯದ ಎಲ್ಲ ಬಾಂಧವರು ಒಳ ಮೀಸಲಾತಿ ಕುರಿತು ಜಾತಿ ಸಮೀಕ್ಷೆ ನಡದಿದೆ ಕಾರಣ ತಾವೆಲ್ಲರೂ ಜಾಗೃತವಹಿಸಿ 93 ಕೋಡ ನಂಬರನ ಸಮಗಾರ ಜಾತಿ ಅಂತಾ ನಮೂದಿಸಬೇಕು ಕುಲಕಸಬು ಕೇಳಿದ್ರೆ ಚರ್ಮಗಾರಿಕೆ ಅಥವಾ ಪಾದರಕ್ಷೆ ತಯಾರಿಸುವುದು ಅಂತಾ ನಮೂದಿಸಿ….. ಕಡ್ಡಾಯವಾಗಿ ಗಣತಿದಾರರು ಬರದೇ ಇದ್ದರೆ ಹುಡುಕಿ ಹೋಗಿ ನಮ್ಮ ಹಟ್ಟಿಗಳಿಗೆ ಕರೆತಂದು ಸಮುದಾಯದ ಎಲ್ಲರ ಮಾಹಿತಿ ಸಲ್ಲಿಸಿ…..