ಇಂಡಿ | ಪುರಸಭೆಯಲ್ಲಿ ಸದಸ್ಯರ ಗಮನಕ್ಕೆ ತರದೇ ಹಣ ತೆಗೆಯುತ್ತಿದ್ದಾರೆ : ಸದಸ್ಯರ ಆರೋಪ
ಇಂಡಿ: ಪುರಸಭೆಯಲ್ಲಿ ಸದಸ್ಯರ ಗಮನಕ್ಕೆ ತರದೇ ಪುರಸಭೆ ಅಧ್ಯಕ್ಷ ಹಣ ತೆಗೆಯುತ್ತಿದ್ದಾರೆ. ಯಾವದೇ ಹಣ ತೆಗೆಯುವ ಮುನ್ನ ಸದಸ್ಯರ ಸಭೆಯಲ್ಲಿ ಚರ್ಚೆ ಮಾಡಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು.
ಬುಧವಾರ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.
ಸಭೆಯನ್ನು ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸ್ವಾಗತಿಸಿದರು.
2೦25-26 ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನ ₹ 2 ಕೋಟಿ 24 ಲಕ್ಷ ಕ್ರಿಯಾ ಯೋಜನೆ ತಯಾರಿಸಿ ಎಲ್ಲ 23 ವಾರ್ಡುಗಳಿಗೆ ಸಮರ್ಪಕವಾಗಿ ಹಂಚಬೇಕೆಂದು ಸದಸ್ಯ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಇಸ್ಮಾಯಿಲ್ ಅರಬ, ಅಯೂಬ ಬಾಗವಾನ, ಉಮೇಶ ದೇಗಿನಾಳ ಒತ್ತಾಯಿಸಿದರು.
ಸಭೆಯಲ್ಲಿ ಒಳ ಚರಂಡಿ ನೀರು ಶುದ್ಧಿಕರೀಸಿ ಹಳ್ಳಕ್ಕೆ ಬಿಡುವ ಬಗ್ಗೆ ಮತ್ತು ಸ್ವಚ್ಛತೆಗಾಗಿ ಅವಶ್ಯವಿರುವ ಹೊಸ ಮಶೀನು ಖರೀದಿಗೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚೆರ್ಚೆ ನಡೆಯಿತು.
ಪಟ್ಟಣದಲ್ಲಿ ಸಾರ್ವಜನಿಕರು ಒಳಚರಂಡಿ ಸಂಪರ್ಕ ಕಲ್ಪಿಸಲು ಪ್ರತಿ ವರ್ಷ ₹ 2೦೦ ವಾಣಿಜ್ಯಗೆ ₹ 1೦೦೦ ರೂ ಎಂದು ಅನುಮೊದನೆ ನೀಡಲಾಯಿತು.
ಸನ್ 2025-26 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಹಂಚಿಕೆಯಾದ ಅನುದಾನ ರೂ 11ಲಕ್ಷ ರೂ, ಎಸ್.ಸಿ, ಸಿ.ಎಸ್.ಪಿ ಯೋಜನೆ ಯಡಿ ಹಂಚಿಕೆಯಾದ ಅನುದಾನ 7 ಲಕ್ಷ ರೂ ಕ್ರೀಯಾ ಯೋಜನೆ ತಯಾರಿಸುವ ಕುರಿತು ಚರ್ಚೆ ನಡೆಯಿತು.
ಪುರಸಭೆಯಲ್ಲಿ 95 ನೌಕರರು ದಿನಗೂಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದರಲ್ಲಿ 7೦ ನೌಕರರು ಮಾತ್ರ ಬರುತ್ತಾರೆ. ಇನ್ನೂಳಿದವರು ಬರುವದೇ ಇಲ್ಲ. ಆದರೂ ಅವರಿಗೆ ಸಂಬಳ ನೀಡುತ್ತಿದ್ದಾರೆ. ಅವರು ಬರುವ ಹಾಗೆ ಮಾಡಬೇಕು ಇಲ್ಲವೆ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಸದಸ್ಯರು ಒತ್ತಾಯ ಮಾಡಿದರು.
ಅದಕ್ಕೆ ಎಲ್ಲಾ ಸದಸ್ಯರು ಠರಾವು ಪಾಸ ಮಾಡಬೇಕೆಂದು ಪಟ್ಟುಹಿಡಿದರು ಅದಕ್ಕೆ ಮುಖ್ಯಾಧಿಕಾರಿ ಅವರು ಠರಾವು ಪಾಸ ಮಾಡುದ್ದಾಗಿ ಬರವಸೆ ನೀಡಿದರು.
ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸದಸ್ಯರಾದ ಸಂಗೀತಾ ಕರಿಕಟ್ಟಿ, ಸೈಪನ ಪವಾರ, ಮುಸ್ತಾಕ್ ಇಂಡೀಕರ್, ಇಸ್ಮಾಯಿಲ್ ಅರಬ, ವಿಜಯ ಮೂರಮನ, ಜಹಾಂಗೀರ ಸೌದಾಗರ, ರೇಣುಕಾ ಉಟಗಿ, ಬನ್ನೆಮ್ಮ ಹದರಿ, ಶೈಲಜಾ ಪೂಜಾರಿ, ಸುಜಾತಾ ಪಾಟೀಲ, ಭಾಗೀರತಿ ಕುಂಬಾರ, ಜ್ಯೋತಿ ರಾಠೋಡ ಮತ್ತಿತರರಿದ್ದರು.
ಕಳೆದ 15 ದಿನಗಳಿಂದ ಕಸದ ವಾಹನ ಬರುತ್ತಿಲ್ಲ. ಕೇಳಿದರೆ ವಾಹನ ರಿಪೇರಿ ಇದೆ ಎಂಬ ಸಬೂಬ್ ಹೇಳುತ್ತಿದ್ದಾರೆ. ಹಾಗಾದರೆ ಆ ವಾರ್ಡದಲ್ಲಿ ಸ್ವಚ್ಚತೆ ಮತ್ತು ಆ ವಾರ್ಡ ಜನರ ಪರಿಸ್ಥಿತಿ ಏನಾಗಬಾರದು ಹೇಳಿ..?
ಸಂಗೀತಾ ಸುಧೀರ ಕರಕಟ್ಟಿ, ಅಧ್ಯಕ್ಷರು ಸ್ಥಾಯಿ ಸಮೀತಿ ಪುರಸಭೆ ಇಂಡಿ.
ಪುರಸಭೆ ವ್ಯಾಪ್ತಿಯಲ್ಲಿ ಎಲ್ಇಡಿ ಬಲ್ಪ್ ಹಾಕುವ ಗುತ್ತಿಗೆದಾರರ ಟೆಂಡರ್ ಅವದಿ ಮುಗಿದಿದೆ. ಸುಮಾರು ದಿನಗಳು, ತಿಂಗಳಗಳು ಗತಿಸಿದರೂ, ಮರು ಟೆಂಡರ್ ಮಾಡದೇ ಕಾರಣವೇನು..? ಈಗೀರುವ ಅಥವಾ ಅವರನ್ನೆ ಮುಂದುವರೆಸುವ, ಇಬ್ಬರ ಮದ್ಯ ಇರುವ ಗೊಂದಲಕ್ಕೆ ತೆರೆ ಎಳಿದು, ಸರಕಾರದ ಆದೇಶದ ನಿಯಾಮನುಸಾರ ಟೆಂಡರ್ ಮಾಡಬೇಕು. ಇಸ್ಮಾಯಿಲ್ ಅರಬ ಸದಸ್ಯ ಪುರಸಭೆ
ಇಂಡಿ: ಪುರಸಭೆಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.



















