ಮುದ್ದೇಬಿಹಾಳ ;ಸಂವಿದಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ತಾಣಗಳನ್ನು ಪಂಚತೀರ್ಥಗಳಾಗಿ ಗುರುತಿಸಿ ಅಭಿವೃದ್ಧಿ ಮಾಡುವ ಮೂಲಕ ಪ್ರತಿಯೊಬ್ಬ ಭಾರತೀಯರು ಅಂಬೇಡ್ಕರ್ ಅವರ ಬಗ್ಗೆ ಅರಿಯುವಂತೆ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ರೈತ ಮೋರ್ಚಾ ರಾಜಾಧ್ಯಕ್ಷ್ಯ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು ಅವರು ಸೋಮವಾರ ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದ ಜೊತೆ ಮಾತನಾಡಿದರು .
140 ಕೋಟಿ ಭಾರತೀಯರಿಗೆಲ್ಲಾ ಒಂದೇ ಸಮಾನದ ಹಕ್ಕನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ನೀಡಿದ್ದಾರೆ ನಾವೆಲ್ಲರೂ ಭಾರತೀಯರು ನಮ್ಮ ಮೈಯಲ್ಲಿ ಹರಿಯುತ್ತಿರುವುದು ಭಾರತೀಯ ರಕ್ತವಾಗಿದೆ ನಮ್ಮ ರಾಷ್ಟ್ರನಿರ್ಮಾಣಕ್ಕೆ ನಮ್ಮನ್ನು ನಾವು ಅರ್ಪಿಸಿಕೂಳ್ಳೂಣವೆಂದು ಕರೆ ನೀಡಿದರು.
ಈ ವೇಳೆ ಹರೀಶ ನಾಟಿಕಾರ, ಜಗದೀಶ್ ಪಂಪಣ್ಣನವರ, ಮಲ್ಲಿಕಾರ್ಜುನ ತಂಗಡಗಿ,ಪ್ರೇಮಸಿಂಗ್ ಚವ್ಹಾಣ, ಪರಶುರಾಮ ನಾಲತವಾಡ,ರವೀಂದ್ರ ಬಿರಾದಾರ, ನಾಗೇಶ ಕವಡಿಮಟ್ಟಿ ಸಂಜು ಬಾಗೇವಾಡಿ,ಶೇಖರ ಢವಳಗಿ, ಎಸ್ ಆರ್ ಕಟ್ಟಿಮನಿ,ಶೇಖರ ಆಲೂರ, ಸಂಗನಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.