ಇಂಡಿಯಲ್ಲಿ ಉಗ್ರವಾದ ಪ್ರತಿಭಟನೆ ಎಚ್ಚರಿಕೆ ನೀಡಿದ ಕರವೇ ಅಧ್ಯಕ್ಷ ಬಾಳು..ಕಾರಣ ಏನು ಗೊತ್ತಾ..?
ಇಂಡಿ: ತೊಗರಿ ಬೆಳೆ ವಿಮೆ ಕಟ್ಟಿ ಪರಿಹಾರ ಬಾರದ ರೈತರು ಸರಕಾರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ವಿಮೆ ಕಂಪನಿಗಳ ಕಡೆ ಬೆರಳು ಮಾಡುತ್ತಿದ್ದಾರೆ. ಇನ್ನೊಂದೆಡೆ ವಿಮೆ ಕಂಪನಿ ಅಧಿಕಾರಿಗಳನ್ನು ಕೇಳಿದರೆ ಸರಕಾರಿ ಅಧಿಕಾರಿಗಳ ಕಡೆ ತೋರಿಸುತ್ತಿದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದು ಕರವೆ ಅಧ್ಯಕ್ಷ ಬಾಳು ಮುಳಜಿ ಹೇಳಿದರು.
ಸೋಮವಾರ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಬೆಳೆ ವಿಮೆ ಮೂಲಕ ರೈತರು ಸ್ಥಿರ ಆದಾಯ ಪಡೆದುಕೊಳ್ಳಲಿ ಎಂದು ಕೇಂದ್ರ ಸರಕಾರ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ಇನ್ನೂ ತಾಲೂಕಿನಾದ್ಯಂತ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವಿಮೆ ಹಣ ಬಂದಿಲ್ಲ.
ಪಕ್ಕದ ಕಲರ್ಬುಗಿ ಜಿಲೆಯಲ್ಲಿ ತೊಗರಿ ಇನ್ಸೂರೆನ್ಸ ಹಣ ಬಂದಿದೆ. ಆದರೆ ನಮ್ಮ ವಿಜಯಪುರ ಜಿಲೆಯ ರೈತರಿಗೆ ಇನ್ನೂ ತೊಗರಿ ಇನ್ಸೂರೆನ್ಸ್ ಹಣ ಬಂದಿಲ್ಲ ಎಂಬುದು ತಾಲೂಕಿನಾದ್ಯಂತ ಹಳ್ಳಿಗಳ ರೈತರ ನೋವಿನ ಮಾತಾಗಿದ್ದು. ಸರಕಾರ ಈ ಬಗ್ಗೆ ಗಮನಹರಿಸಬೇಕಿದೆ.
ನಿಂಬೆ ನಾಡು ಬರದ ಬೇಗೆಯಲ್ಲಿ ಬೆಂದಿದೆ. ಬೆಳೆಗಳಿಂದ ನಿರೀಕ್ಷಿತ ಫಸಲು ಬಂದಿಲ್ಲ ಎಂಬುದು ಎಲ್ಲರ ಕಣ ್ಣಗೂ ಕಾಣುವ ಸತ್ಯವಾಗಿದೆ. ರಾಜ್ಯ ಸರಕಾರ, ರೈತರ ತೊಗರಿ ಬೆಳೆ ಇನ್ಸೂರೆನ್ಸ್ ನೀಡದೆ ಇದ್ದರೆ ಏ.೭ರಂದು ಇಂಡಿ ಬಸವೇಶ್ವರ ವೃತ್ತದಲ್ಲಿ ಧರಣ ಸತ್ಯಾಗ್ರಹ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ ಹೂಗಾರ, ಧನರಾಜ ಸಾಲೋಟಗಿ, ಮಂಜು ದೇವರ, ಅರವಿಂದ ಪಾಟೀಲ, ಸಚಿನ ನಾವಿ, ಭಾಗ್ಯಶ್ರಿ ಮಲಗಣ, ಬಿ.ಎ.ಮೇಡೆದಾರ ಸೇರಿದಂತೆ ಅನೇಕರು ಇದ್ದರು.
ಇಂಡಿ: ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಾಳು ಮುಳಜಿ ಮಾತನಾಡಿದರು.



















