ಸಂಘದ ಏಳಿಗೆಗಾಗಿ ₹ ೨೫ ಸಾವಿರ ಧನ ಸಹಾಯ ನೀಡುವ ಭರವಸೆ : ಎಸ್ ಆರ್ ರುದ್ರವಾಡಿ
ಇಂಡಿ: ತಾಲ್ಲೂಕು ನಿವೃತ್ತ ನೌಕರರ ಸಂಘದ ಯಾವದೇ ಸದಸ್ಯ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದಿಷ್ಟು ಧನ ಸಹಾಯ ನೀಡುವ ಬಗ್ಗೆ ಸೋಮವಾರ ನಡೆದ ಸಂಘದ ಸಭೆಯಲ್ಲಿ ನಿರ್ಣಯಿಸಲಾಯಿತು. ಆ ಧನ ಎಷ್ಟು ಎನ್ನುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಪೋಲ ಹೇಳಿದರು.
ಸೋಮವಾರ ಆಯೋಜಿಸಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಸಭೆಗೆ ಸನ್ಮಾನಿತರಾದ ಎಸ್.ಆರ್.ರುದ್ರವಾಡಿ ಮಾತನಾಡಿ, ಸಂಘದ ಸದಸ್ಯನಾಗಿ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತೇನೆ. ನಿವೃತ್ತಿ ಜೀವನ ಸುಖಮಯವಾಗಿರುವ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ಪಾಲಿಸುತ್ತೇನೆ ಎಂದು ಹೇಳಿದ ಅವರು ನಿವೃತ್ತ ನೌಕರರ ಸಂಘದ ಏಳಿಗೆಗಾಗಿ ೨೫೦೦೦ ರೂ, ಧನ ಸಹಾಯ ಮಾಡುವದಾಗಿ ಭರವಸೆ ನೀಡಿದರು. ಬಿ.ವೈ.ಬಿರಾದಾರ, ಬಿ.ಎಂ.ಹೊಟಗಾರ ಮಾತನಾಡಿದರು.
ಹೊಸದಾಗಿ ನಿವೃತ್ತಿ ಹೊಂದಿ ಸಂಘದ ಸದಸ್ಯತ್ವ ಪಡೆದುಕೊಂಡಿರುವ ಎಇಇ ಬಿ.ವೈ.ಬಿರಾದಾರ, ಎಇಇ ಎಸ್.ಆರ್.ರುದ್ರವಾಡಿ, ಎಇಇ ಬಿ.ಎಂ.ಹೊಟಗಾರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಇಇ ಯಾಗಿ ಪದೋನ್ನತಿ ಹೊಂದಿರುವ ಪಿ.ಬಿ.ತಳವಾರ ಅವರನ್ನೂ ಕೂಡಾ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಸ್.ಆರ್.ಪೋಲ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಎಸ್.ವಿ.ಹೂಗಾರ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ವಿ.ಪಾಟೀಲ ವಂದಿಸಿದರು.
ಇಂಡಿ: ತಾಲ್ಲೂಕು ನಿವೃತ್ತ ನೌಕರರ ಸಂಘದ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಸಂಘಕ್ಕೆ ಸೇರ್ಪಡೆಯಾದ ಬಿ.ಎಂ.ಹೊಟಗಾರ, ಎಸ್.ಆರ್.ರುದ್ರವಾಡಿ, ಬಿ.ವೈ.ಬಿರಾದಾರ ಹಾಗೂ ಪದೋನ್ನತಿ ಹೊಂದಿರುವ ಪಿ.ಬಿ.ತಳವಾರ ಅವರನ್ನು ಸನ್ಮಾನಿಸಲಾಯಿತು



















