ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತ ಸಂಘಗಳ ಉದ್ಘಾಟನೆ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ತಾಲೂಕಿನ ಬಸಪ್ಪನ ದೊಡ್ಡಿ ಗ್ರಾಮ ಘಟಕ ರೈತ ಸಂಘ,ಮಂಚಾಪುರ ಗ್ರಾಮ ಘಟಕ ರೈತ ಸಂಘ ಹಾಗೂ ಗಂಗನದೊಡ್ಡಿಯಲ್ಲಿ ಮಹಿಳ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು.
ಈ ಸಮಾರಂಭದಲ್ಲಿ ರಾಜ್ಯ ಸಮಿತಿಯ ಮಹೇಶ್ ಕುಮಾರ್ . ಹೆಬ್ಸುರ್ ಬಸವಣ್ಣ ,ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಅಮ್ಜಾದ್ ಖಾನ್ ,ಜಿಲ್ಲಾ ಉಪಾಧ್ಯಕ್ಷರಾದ ಗೌಡೆಗೌಡ ,ತಾಲ್ಲೂಕು ಉಪಾಧ್ಯಕ್ಷ ಪಳನಿಸ್ವಾಮಿ , ಚಾಮರಾಜನಗರ ಸಂಘಟನೆಯ ಕಾರ್ಯದರ್ಶಿ ಮಹದೇವಪ್ರಸಾದ್ ,ವೆಂಕಟೇಶ್ , ರವಿನಾಯ್ಡುಹಾಗೂ ತಾಲ್ಲೂಕು ಮಹಿಳ ರೈತ ಸಂಘದ ಅಧ್ಯಕ್ಷೆಯವರಾದ ರಾಜಮ್ಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.


















