ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧ ಸಿಗಬೇಕು ಎಂದು ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಆರಂಭ.
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು : ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಮಾರ್ಚ್ 1 ರಿಂದ 7ರವರೆಗೆ ಆಚರಿಸುವ ಜನ ಔಷಧಿ ದಿವಸ್ ಸಪ್ತಾಹದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜನ ಔಷಧಿ ಕೇಂದ್ರದ ವ್ಯವಸ್ಥಾಪಕರಾದ ಆರ್ ಶ್ರೀಕಾಂತ್ ರವರು ಮಾತನಾಡಿ ರಾಷ್ಟ್ರ ಕಂಡ ಧೀಮಂತ ಪ್ರಧಾನಿ ಮೋದಿಜಿಯವರ ಆಶಯವಾದ ಈ ಯೋಜನೆಯು, ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಮತ್ತು ಸ್ವಾಸ್ಥ್ಯ ಸಮಾಜಕ್ಕೆ ಆರೋಗ್ಯವೇ ಜೀವನದ ಪ್ರಮುಖ ಮೂಲಾಧಾರವಾಗಿದೆ. 2008 ನವೆಂಬರ್ 25ರಂದು ಮೊದಲ ಜನ ಔಷಧಿ ಅಭಿಯಾನ ಪ್ರಾರಂಭವಾಯಿತು.ಪ್ರಾರಂಭವಾದ ಈ ಯೋಜನೆಯು 2016ರಲ್ಲಿ “ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನ(PMBJP)” ಎಂದು ಮರುನಾಮಕರಣಗೊಂಡು ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿತು . ಸತತವಾಗಿ 16 ವರ್ಷಗಳಿಂದ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಬಡವರಿಗೆ ಒದಗಿಸುತ್ತಿರುವ ಜನ ಔಷಧಿ ಕೇಂದ್ರಗಳ ಈ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಜಯಕುಮಾರ್, ಮಹೇಶ್, ಮಲ್ಲೇಶ್, ನಾಗೇಂದ್ರ ,ಸತೀಶ್ ಕುಮಾರ್, ಮತ್ತು ಪ್ರಸನ್ನ ಗುಪ್ತ ಇನ್ನು ಮುಂತಾದವರು ಹಾಜರಿದ್ದರು.


















