ವಿದ್ಯಾರ್ಥಿಗಳ ನಿಜವಾದ ಹೀರೋ ತಂದೆ, ತಾಯಿ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ವಿದ್ಯಾರ್ಥಿಗಳ ನಿಜವಾದ ಹೀರೋ ತಂದೆ, ತಾಯಿ, ಗುರುಗಳು ಆಗಿರಬೇಕು. ಇವರನ್ನೇ ಆದರ್ಶವಾಗಿಟ್ಟುಕೊಂಡು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು. ಕಠಿಣ ಪರಿಶ್ರಮ, ಓದಿನಲ್ಲಿ ನಿರಂತರತೆ ಇವು ಯಶಸ್ವಿನ ಮೆಟ್ಟಿಲುಗಳಾಗಿವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಿ ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂದು ವಾಣಜ್ಯ ತೆರಿಗೆ ಅಧಿಕಾರಿ ಸಂತೋಷ ಗೋಲಾಯಿ ಹೇಳಿದರು.
ಇಲ್ಲಿನ ಅಭ್ಯುದಯ ಇಂಗ್ಲೀಷ್ ಮೀಡಿಯಂ ಇಂಟರ್ನ್ಯಾಶನಲ್ ಸ್ಕೂಲ್ ಆವರಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ೪ನೇ ವರ್ಷದ ರಾಣ ಅಹಿಲ್ಯಾದೇವಿ ಹೋಳ್ಕರ್ ಕಲಾ ಉತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೂಡಗಿ ಪಿಯು ಕಾಲೇಜಿನ ಉಪನ್ಯಾಸಕ ಬಸವರಾಜ ಜಾಲವಾದಿ ಅವರು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ವಿದ್ಯೆ ನೀಡಿದ ಶಾಲೆಯನ್ನು ಮರೆಯಬಾರದು. ಮಕ್ಕಳಿಗೆ ತಾರತಮ್ಯ, ಭೇದಭಾವ ಕಲಿಸಬಾರದು. ಜಗತ್ತು ಜ್ಞಾನಿಗಳನ್ನು ಗೌರವಿಸುವುದರಿಂದ ಮಕ್ಕಳನ್ನು ಜ್ಞಾನಿಗಳನ್ನಾಗಿಸಬೇಕು. ಮಕ್ಕಳ ಮೋಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಬಾಲ್ಯದಲ್ಲೇ ಮದುವೆ ಮಾಡಬಾರದು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮದರಿಯವರು ಕಟ್ಟಿದ ರಾಣ ಅಹಿಲ್ಯಾದೇವಿ ಹೆಸರಿನ ಈ ಸಂಸ್ಥೆಯಲ್ಲಿ ಓದುವ ಮಕ್ಕಳು ಪುಣ್ಯವಂತರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್.ಮದರಿ ಅವರು ಮಾತನಾಡಿ, ೩೦೦ ವರ್ಷಗಳ ಹಿಂದೆ ರಾಣ ಯಾಗಿ ಆಳ್ವಿಕೆ ನಡೆಸಿದ್ದ ಅಹಿಲ್ಯಾದೇವಿ ಸತಿ ಪದ್ಧತಿ, ಹೆಣ್ಣುಮಕ್ಕಳಿಗೆ ವಿದ್ಯೆ ನಿಷೇಧ ಮುಂತಾದ ಅನಿಷ್ಠ ಪದ್ಧತಿ ವಿರೋಧಿಸಿದ್ದಳು. ೧೨ ಜ್ಯೋತಿರ್ಲಿಂಗಗಳನ್ನು ಅಭಿವೃದ್ಧಿಗೊಳಿಸಿದ್ದಳು. ಅವರ ಹೆಸರಿನಲ್ಲಿ ಕಲಾ ಉತ್ಸವ ಆಚರಿಸುತ್ತಿರುವುದು ಸಂತೋಷ ನೀಡಿದೆ. ನಮ್ಮ ಪಿಯುಸಿ ವಿಜ್ಞಾನ, ವಾಣ ಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಅವರ ಕರ್ಮಭೂಮಿ ಮಧ್ಯಪ್ರದೇಶದ ಇಂದೋರ್ಗೆ ಶೈಕ್ಷಣ ಕ ಪ್ರವಾಸ ಕರೆದೊಯ್ದು ಎಲ್ಲರಿಗೂ ಪರಿಚಯಿಸಿದ್ದು, ಜ್ಯೋತಿರ್ಲಿಂಗ ದರ್ಶನ ಮಾಡಿಸಿದ್ದು ಸಂಸ್ಥೆಯ ಕೊಡುಗೆಯಾಗಿದೆ ಎಂದರು.
ಸಾನಿಧ್ಯವಹಿಸಿದ್ದ ಹಾಲುಮತದ ಗುರುಗಳಾದ ಕೆಂಚರಾಯ ಮುತ್ಯಾ ಅವರು ಎಂ.ಎನ್.ಮದರಿ, ಶ್ರೀದೇವಿ ಮದರಿ ದಂಪತಿಯನ್ನು ಸಾಂಪ್ರದಾಯಿಕ ಕಂಬಳಿ ಹೊದೆಸಿ ಸನ್ಮಾನಿಸಿ ಮದರಿಯವರು ಹಿಂದುಳಿದ ವರ್ಗದವರ ಧ್ವನಿಯಾಗಲಿ ಎಂದು ಹರಸಿದರು.
ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಪಾಟೀಲ, ನಿರ್ದೇಶಕರಾದ ಎನ್.ಎಸ್.ಚಟ್ಟೇರ, ನಾಗಭೂಷಣ ನಾವದಗಿ, ರವಿ ಗೂಳಿ, ಪ್ರಭುದೇವ ಕಲಬುರ್ಗಿ, ಶ್ರೀಶೈಲ ಪೂಜಾರಿ, ವಿಜಯಲಕ್ಷಿö್ಮÃ ಬೂದಿಹಾಳಮಠ, ರಕ್ಷಿತಾ ಬಿದರಕುಂದಿ, ಹುಲ್ಲೂರ ಗ್ರಾಪಂ ಅಧ್ಯಕ್ಷೆ ನಯನಾ ಚವ್ಹಾಣ, ಹುಲ್ಲೂರ ಪಿಕೆಪಿಎಸ್ ಅಧ್ಯಕ್ಷ ಸುರೇಶ ಹಳೆಮನಿ, ಚಂದ್ರು ಕರೆಕಲ್, ನಾಲ್ವರು ಎಸ್ಎಸ್ಎಲ್ಸಿ ಟಾಪರ್ ವಿದ್ಯಾರ್ಥಿಗಳು ಇನ್ನಿತರರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಶ್ರೀದೇವಿ ಮದರಿ, ಕಿರಣ್ ಮದರಿ, ರವಿ ಜಗಲಿ ಇನ್ನಿತರರು ವೇದಿಕೆಯಲ್ಲಿದ್ದರು. ೯ನೇ ತರಗತಿಯ ವಿದ್ಯಾರ್ಥಿನಿ ದಾನೇಶ್ವರಿ ನಾಟೀಕಾರ ರಾಣ ಹೋಳ್ಕರ್ ಛದ್ಮವೇಷಧಾರಿಯಾಗಿ ಶಿವಲಿಂಗ ಹಿಡಿದು ವೇದಿಕೆಯ ಮಧ್ಯಭಾಗ ವಿರಾಜಮಾನಳಾಗಿದ್ದದ್ದು, ಆಕೆಯ ಅಕ್ಕಪಕ್ಕ ವಿದ್ಯಾರ್ಥಿಗಳು ಸಿಪಾಯಿಗಳಂತೆ ಭರ್ಚಿ ಹಿಡಿದು ನಿಂತಿದ್ದು ರಾಣ ಯ ಆಸ್ಥಾನ ನೆನಪಿಸಿ ವಿಶೇಷ ಗಮನ ಸೆಳೆಯಿತು.
ವಿದ್ಯಾರ್ಥಿನಿ ಸಂಗೀತಾ ಭರತನಾಟ್ಯದೊಂದಿಗೆ ಪ್ರಾರ್ಥಿಸಿದಳು. ಶಿಕ್ಷಕಿ ಆಸ್ಮಾ ಬಳಬಟ್ಟಿ ಸ್ವಾಗತಿಸಿದರು. ಶಿಕ್ಷಕರಾದ ಜ್ಯೋತಿ ಸಜ್ಜನ, ಸವಿತಾ ಪಲ್ಲೇದ ನಿರೂಪಿಸಿದರು. ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳು ರಾಣ ಅಹಲ್ಯಾದೇವಿ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನ ನೀಡಿದರು.
ಮುದ್ದೇಬಿಹಾಳ: ರಾಣ ಅಹಿಲ್ಯಾದೇವಿ ಹೋಳ್ಕರ್ ಕಲಾ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು. ಎಂ.ಎನ್.ಮದರಿ, ಶ್ರೀದೇವಿ ಮದರಿ, ಬಸವರಾಜ ಜಾಲವಾದಿ, ಸಂತೋಷ ಗೋಲಾಯಿ, ಕೆಂಚರಾಯ ಮುತ್ಯಾ, ಸುರೇಶ ಹಳೆಮನಿ, ಚಂದ್ರು ಕರೆಕಲ್, ನೈನಾ ರಾಠೋಡ, ರಕ್ಷಿತಾ ಬಿದರಕುಂದಿ ಇನ್ನಿತರರು ಇದ್ದಾರೆ.
ಮುದ್ದೇಬಿಹಾಳ: ೯ನೇ ತರಗತಿ ವಿದ್ಯಾರ್ಥಿನಿ ದಾನೇಶ್ವರಿ ನಾಟೀಕಾರ ರಾಣ ಅಹಿಲ್ಯಾದೇವಿ ಛದ್ಮವೇಷಧಾರಿಯಾಗಿ ವೇದಿಕೆಯ ಮಧ್ಯೆ ವಿರಾಜಮಾನಳಾಗಿ ಜನಾಕರ್ಷಿಸಿದಳು.



















