ರಾಜ್ಯಮಟ್ಟದ ವಿಶೇಷ ಆಯುಧ ವಚನಗಳ ಸಂಗ್ರಹ..! ಬರೆದ ವಚನಗಳು ಕಳುಹಿಸಿಲು ಮಾರ್ಚ್ 25 ಕೊನೆಯ ದಿನ
ಇಂಡಿ: ಪಟ್ಟಣದ ಬಸವ ಸಮಿತಿ ಸಹಯೋಗದಲ್ಲಿ ರಾಜ್ಯಮಟ್ಟದ ವಿಶೇಷ ಆಯುಧ ವಚನಗಳ ಸಂಗ್ರಹ ಹಾಗೂ ಅವುಗಳ ಭಾವಾರ್ಥ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ ಅಲಗೊಂಡ ತಿಳಿಸಿದರು.
ಗುರುವಾರ ಪಟ್ಟಣದ ಖಾಸಗಿ ಹೋಟೆಲ್ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು, 12ನೆಯ ಶತಮಾನದ ಶರಣರ ವಚನಗಳಲ್ಲಿ ಇಡೀ ಜೀವನದ ಸತ್ಯತೆ ಇದೆ, ನಾನು ಕೆಲವೊಂದಿಷ್ಟು ವಚನಗಳನ್ನು ಓದಿದ್ದೇನೆ, ಇನ್ನಷ್ಟು ವಚನಗಳನ್ನು ಓದುವ ಮೂಲಕ ಅದರ ಭಾವಾರ್ಥವನ್ನು ಅರಿಯುವ ಇಚ್ಛೆ ಹೊಂದಿದ್ದೇನೆ ಹೀಗಾಗಿ,
ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ, ರಾಜಯೋಗ, ದಾಸೋಹ, ಸತ್ಯ-ಪರಮ ಸತ್ಯ, ದೈವೀ ನಿಯಮ,ಆಚಾರ- ಅನಾಚಾರ, ಸ್ಥಿತಪ್ರಜ್ಞೆ, ಸಾಮಾಜಿಕ ಸಮಾನತೆ, ಶುದ್ಧ ಸಂಕಲ್ಪ, ವೈರಾಗ್ಯ, ಮೂಢನಂಬಿಕೆ ಹೀಗೆ ಮುಂತಾದವುಗಳ ಬಗ್ಗೆ ಶರಣರು ಹೇಳಿರುವ ವಚನಗಳನ್ನು ಸಂಗ್ರಹಿಸಿ, ವಿಭಾಗಿಸುವ ಸ್ಪರ್ಧೆ ಏರ್ಪಡಿಸಲು ಬಯಸಿದ್ದೇನೆ. ಒಬ್ಬರು ನೂರರಿಂದ 150 ವಚನಗಳನ್ನು ಮಾತ್ರ ಬರೆದು ಕಳುಹಿಸಬೇಕು, ಮಾರ್ಚ್ 25ರ ಒಳಗಾಗಿ ತಾವು ಬರೆದ ವಚನಗಳನ್ನು ಪಟ್ಟಣದ ಶಾಂತೇಶ ನಗರದ ಸಿ.ಬಿ.ತಾವರಖೇಡ ಶಿಕ್ಷಕರು ಬೀರಪ್ಪನಗರ ಇಂಡಿ 586209 ವಿಳಾಸಕ್ಕೆ ಕಳುಹಿಸಿಕೊಡಬೇಕು.