ಶತಾಯುಷಿ ಗಡೇಪ್ಪ ಕಲ್ಲಪ್ಪ ಕಲ್ಮನಿ ಇನ್ನಿಲ..!
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಶತಾಯುಷಿ ಗಡೇಪ್ಪ ಕಲ್ಲಪ್ಪ ಕಲ್ಮನಿ (೧೦೨) ಗುರುವಾರ ಮಧ್ಯಾಹ್ನ ನಿಧನರಾದರು.
ಮೃತರು ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾ ಕೇಂದ್ರದ ಶಿಕ್ಷಣ ಸಮೂಹ ಸಂಸ್ಥೆಯ ಗೌರವ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಏಳು ಜನ ಪುತ್ರರು, ಇರ್ವರೂ ಪುತ್ರಿಯರನ್ನು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ ೧೧ಘಂಟೆಗೆ ಗ್ರಾಮದ ಅವರ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದಿದೆ.
ಮೃತರ ಅಂತ್ಯಕ್ರಿಯೆಯಲ್ಲಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ರೊಡಗಿ ಅಭಿನವ ಶಿವಲಿಂಗೇಶ್ವರರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಣಮಂತ ಖಂಡೆಕರ, ಹಾಲ ಮತದ ಸಮಾಜದ ಮುಖಂಡ ಜಟ್ಟೇಪ್ಪ ರವಳಿ, ಶಂಕರಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ನಾಗಣಗೌಡ ಪಾಟೀಲ, ಬಸವರಾಜ ಸೋಲಾಪೂರ, ಬಿ.ಎಸ್.ಪಾಟೀಲ, ನೌಕರ ಸಂಘದ ಅಧ್ಯಕ್ಷರು, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಗ್ರಾಮದ ಮುಖಂಡರು ಭಾಗವಹಿಸಿ ಶೃದ್ಧಾಂಜಲಿ ಸಲ್ಲಿಸಿದರು.
ಇಂಡಿ: ಮೃತ ಗಡೇಪ್ಪ ಕಲ್ಮನಿ ಭಾವಚಿತ್ರ.



















