ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಜಾತ್ರೋತ್ಸವ
ಇಂಡಿ : ತಾಲೂಕಿನ ಬಂಥನಾಳದ ಗ್ರಾಮದಲ್ಲಿ ಶ್ರೀ ವೃಷಭಲಿಂಗೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಇದೇ ಫೆಬ್ರುವರಿ 26 ರಿಂದ ಮಾರ್ಚ 1ರ ವರೆಗೆ ಧಾರ್ಮಿಕ ಸಾಂಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆ. 26 ರಂದು ಬಂಥನಾಳ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಮಹಾ ಶಿವರಾತ್ರಿ ಯ ಅಂಗವಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
28 ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ. ಸಿಂದಗಿ ಶಾಸಕ ಅಶೋಕ ಮನಗೂಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಡಿ. ಪಾಟೀಲ ಭಾಗವಹಿಸಲಿದ್ದಾರೆ.
ತದನಂತರ ಇಂಡಿ ಹಾಗೂ ಸಿಂದಗಿ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಶಾರೀರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಕ್ಕೆ ಜಗದ್ಗುರು ಪೀಠದ ಪೂಜ್ಯರ ತುಲಾಭಾರ ಸೇವೆ ಇಂಗಳಗಿಯ ಪರಮಾನಂದ ಅಕ್ಕಿ, ಇಂಡಿಯ ಬೊರಮ್ಮ ಬೇನೂರ ಅವರಿಂದ ನೆರವೇರಲಿದೆ. ರಾತ್ರಿ 9ಕ್ಕೆ ಬಂಥನಾಳ ಪೂಜ್ಯರ ಅಮೃತ ಹಸ್ತದಿಂದ ಅಗ್ನಿ ಪುಟುವು ಕಾರ್ಯಕ್ರಮ ನೆರವೇರಲಿದೆ. 10ಕ್ಕೆ ಬಳಗಾನೂರಿನ ಆಧ್ಯಾತ್ಮಿಕ ಸಾಧಕ ಎಂ. ಎಂ. ಉಪ್ಪಾರ ಅವರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ. ಬಳಿಕ 10.30ಕ್ಕೆ ತಾಂಬಾ ಗ್ರಾಮದ ಶ್ರೀ ವೀರಭದ್ರೇಶ್ವರ ಭಜನಾ ಕಲಾ ತಂಡದವರಿಂದ ಶಿವ ಭಜನೆ ನಡೆಯಲಿದೆ.
ಮಾ. 1 ರಂದು 9.30ಕ್ಕೆ ರೆಬಿನಾಳದ ಪಲ್ಲಕ್ಕಿ ಆಗಮನವಾಗಲಿದೆ. 10 ಗಂಟೆಗೆ ಜಗದ್ಗುರು ಪೀಠದ ಪೂಜ್ಯರಿಂದ ಅಗ್ನಿ ಶಮನ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಲಿದೆ. ಬಳಿಕ ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರಿಂದ ದೀಕ್ಷಾ ಕಾರ್ಯಕ್ರಮ ಜರುಗಲಿದೆ. ನಂತರ ಸಂಜೆ 4 ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಸಾಹಿತ್ಯ ಚಿಂತನ ಕಾರ್ಯಕ್ರಮ ಜರುಗಲಿದೆ. ಬಂಥನಾಳದ ಶ್ರೀ ಡಾ. ವೃಷಭಲಿಗೇಶ್ವರ ಮಹಾಸ್ವಾಮೀಜಿ,ಹಿರೆನಾಗಾಂವ ಜಯಶಾಂತಲಿಂಗ ಮಹಾಸ್ವಾಮೀಜಿ, ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ ಹಾಗೂ ತಡವಲಗಾದ ಆಭಿನವ ರಾಚೋಟೆಶ್ವರ ಶಿವಾಚಾರ್ಯರು ಸಾನಿಧ್ಯವಹಿಸಲಿದ್ದಾರೆ. ರಾತ್ರಿ 10ಕ್ಕೆ ಜಯಸಿಂಹ ಅರ್ಕೆಸ್ಟ್ರಾ ಮೆಲೊಡಿಯಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಉತ್ಸವದ ಕಾಲಕ್ಕೆ ಇಲ್ಲಿನ ನಿತ್ಯ ದಾಸೋಹ ಕೇಂದ್ರವನ್ನು ಬ್ರಹತ್ ದಾಸೋಹದ ವ್ಯವಸ್ಥೆ ಕಲ್ಪಿಸಲಾಗವದು. ಈ ಎಂದು ಪ್ರಕಟಣೆ ತಿಳಿಸಿದೆ
ವೃಷಭಲಿಂಗೇಶ್ವರ ಮಹಾಸ್ವಾಮೀಜಿ