ಭೂಗರ್ಭದಲ್ಲೂ ಗುರುಭಕ್ತಿ ಮೆರೆದ ಸಂತ ಸಿದ್ಧಲಿಂಗ
ಇಂಡಿ: ಅದು ಅತಿಂಥಹ ಗೂಳಿಯಲ್ಲ. ಶಿಷ್ಯನನ್ನು ಪರೀಕ್ಷಿಸಿದ ಗೂಳಿ, ಶಿಷ್ಯನಿಂದ ಪರೀಕ್ಷೆಗೆ ಒಳಗಾದ ಗುರವಿನ ಗೂಳಿ, ಪರೀಕ್ಷೆಯಲ್ಲಿ ಪಾಸಾದ ಪವಾಡ ತೋರಿ ಬಲಾಢ್ಯವಾದ ಗುರುವಿನ ಗೂಳಿ ಲಿಂಗೈಕ್ಯವಾದರೂ ಶಿಷ್ಯ ತೋರಿದ ಗುರುಭಕ್ತಿ ಗುರುವಿನ ಗೂಳಿಗೆ ರಕ್ಷಣೆ ನೀಡಿದ್ದು ಎಂತದ್ಧು ಎಂದರೆ ಲೋಕ ಕಲ್ಯಾಣಕ್ಕಾಗಿ ತಪಸ್ಸುಗೈದ ರುದ್ರ ಭೂಮಿಯಲ್ಲಿ ಸುಮಾರು ೬ ರಿಂದ ೮ ಅಡಿ ಆಳದಲ್ಲಿ ವಿಷಜಂತೂ ಮುಟ್ಟದಂತೆ, ಮಣ ್ಣನ ಭಾರವೂ ಆಗದಂತೆ, ಗಟ್ಟಿಮುಟ್ಟಾದ ಕರಿ ಕಲ್ಲಿನ ಗಚ್ಚಿನ ಗೋಡೆ, ಮೇಲೆ ಕಲ್ಲಿನ ಛಾವಣ ಯ ಛತ್ ನಿರ್ಮಿಸಿ ಲಿಂಗೈಕ್ಯ ಗೂಳಿಗೆ ರಕ್ಷಾ ಕವಚ ನಿರ್ಮಿಸಿದ ಶಿಷ್ಯ ಕೂಗಳತೆಯ ದೂರದಲ್ಲಿ ತಾನೂ ಸಮಾಧಿಸ್ಥನಾಗಿ ಭೂಗರ್ಭದಲ್ಲೂ ಮೊದಲು ಗುರುವಿನ ದರ್ಶನ ನಂತರ ತನ್ನ ದರ್ಶನ ಎಂದು ಗುರುವಿನತ್ತ ಚಿತ್ತ ಹರಿಸಿ ಗುರುಭಕ್ತಿ ಮೆರೆದ ತಾಲ್ಲೂಕಿನ ಲಚ್ಯಾಣ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಕ್ಷೇತ್ರದತ್ತ ಈಗ ಭಕ್ತರ ಚಿತ್ತ ನೆಟ್ಟಿದೆ.
ಹೌದು, ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೆöÊ ಶ್ರೀ ಗುರುವೇ ನಮ:, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕತಿ, ಹರ ಮುನಿದರೆ ಗುರು ಕಾಯುತ್ತಾನೆ ಎನ್ನುವಂತೆ ಅಕ್ಷರಶ: ನಡೆ ನುಡಿಗಳಲ್ಲಿ ಗುರುವಿನ ನಾಮಸ್ಮಣೆ ಮಾಡಿದ ಕ್ಷೇತ್ರದ ಅಧಿಪತಿ ಶ್ರೀ ಸಿದ್ಧಲಿಂಗ ಮಹಾರಾಜರು ಕಾಯಾ, ವಾಚಾ, ಮನಸಾಪೂರ್ವಕವಾಗಿ ಗುರುಸೇವೆ ಮಾಡಿ ಗುರು ಕರುಣೆಯನ್ನು ಗಿಟ್ಟಿಸಿಕೊಂಡು ಸರ್ವಸ್ವನ್ನೆ ಗುರುವಿಗೆ ಧಾರೆ ಎರೆದ ಮಹಾ ಸಂನ್ಯಾಸಿ ಸಿದ್ಧಲಿಂಗ ಮಹಾರಾಜರ ಕ್ಷೇತ್ರದಲ್ಲಿ ಮತ್ತೊಂದು ಅಚ್ಚರಿ ಈಗ ಬೆಳಕಿಗೆ ಬಂದಿದೆ. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಈ ಭಾಗದ ಭಕ್ತರಿಗೆ ಭೂಗರ್ಭದಲ್ಲೂ ಬಂಥನಾಳದ ಗುರು ಶಂಕರಲಿAಗ ಮಹಾಶಿವಯೋಗಿಗಳ ಕರುಣೆಯ ಕಂದ ಶಿಷ್ಯ ಸಿದ್ಧಲಿಂಗನು ಗುರು ಶಂಕರಲಿAಗರ ಗೂಳಿಗೆ ಗುರುಭಕ್ತಿ ಸಮರ್ಪಿಸಿದ ಸಂಗತಿ ಶುಭ ಶುಕ್ರವಾರದಂದು ಜಗಜ್ಜಾಹಿರವಾಗಿದೆ.
ಪವಾಡ ಗೈದ ಗೂಳಿ: ಈ ಹಿಂದೆ ಗುರು ಶಂಕರಲಿAಗರು ನಾನು ಮರುಜನ್ಮದಲ್ಲಿ ನಿನ್ನ ಭೇಟಿಗೆ ಭರುತ್ತೇನೆ. ನೀನು ನನನ್ನು ಗುರುತಿಸಬೇಕು ಎಂದು ಶಿಷ್ಯ ಸಿದ್ಧಲಿಂಗನಿಗೆ ಹೇಳಿದ್ದರಂತೆ. ಒಮ್ಮೆ ಲಚ್ಯಾಣದಲ್ಲಿ ಆಕಳ ಕರು ಜನಿಸಿ ದಿನಗಳು ಕಳೆದರೂ ಹಾಲು ಕುಡಿಯದಿರುವದಕ್ಕೆ ಸಿದ್ಧಲಿಂಗರಿಗೆ ಗುರುವಿನ ವಾಣ ಯ ನೆನಪಾಗಿದೆಯಂತೆ ಆಗ ಸಿದ್ಧಲಿಂಗರು ನೀನು ಗುರು ಶಂಕರಲಿಂಗನೇ ಆಗಿದ್ದರೆ ಹಾಲು ಕುಡಿಯುತ್ತಿಯಾ ಎಂದು ಪರೀಕ್ಷಿಸಿದಾಗ ಆಗ ಕರು ಚಂಗನೆ ಹಾರಿ ತನ್ನ ತಾಯಿಯ ಹಾಲು ಕುಡಿಯಿತಂತೆ. ಗುರುವಿನ ದರ್ಶನ ತೋರಿದ ಕರುವನ್ನು ಪ್ರಾಣದಂತೆ ಪೊಷಿಸಿದ ಪರಿಣಾಮ ಬಲಾಡ್ಯ ಗೂಳಿಯಾಗಿ ಗುರುವಿನ ದರ್ಶನ ತೋರುತ್ತಾ ಮಠದಲ್ಲಿ ಸಂಚರಿಸಿ ಗ್ರಾಮಸ್ಥರು ನಿಬ್ಬೆರಗಾಗಿ ನೋಡುವಂತೆ ಮಾಡಿತ್ತು. ಸದಾಕಾಲ ಸಾಧು ಪುರುಷ ಸಿದ್ಧಲಿಂಗ ಜೊತೆಗೂಡಿ ಇದ್ದು ಸಿದ್ಧಲಿಂಗನ ಮನದ ಇಂಗಿತದAತೆ ಲಿಂಗೈಕ್ಯವಾಗುವ ವರೆಗೂ ಹಲ್ಲು ಹಚ್ಚಲಿಲ್ಲ. ಲಿಂಗೈಕ್ಯ ಗೂಳಿಗೂ ಶಿಷ್ಯ ಸಿದ್ಧಲಿಂಗ ತೋರಿದ ಗೌರವ, ಗುರು ಭಕ್ತಿ ಶತಮಾನಗಳ ನಂತರವೂ ಇಲ್ಲಿ ಅನುರಣ ಸುತ್ತಿದೆ. ಇಲ್ಲಿಯ ವರೆಗೆ ಭಕ್ತರು ಕೇವಲ ಮಾತುಗಳಿಂದ ಪವಾಡ ಕೇಳಿಸಿಕೊಳ್ಳುತ್ತಿದ್ದರೂ ಆದರೆ ಈಗ ಅದಕ್ಕೆ ಸಾಕ್ಷಾಧಾರಗಳು ಪುಷ್ಠಿಕೊಟ್ಟಿರುವದರಿಂದ ಈ ಭಕ್ತರು ಬಹಳ ಸಂತುಷ್ಠರಾಗಿದ್ದಾರೆ. ಈ ಸ್ಮಾರಕ ದರ್ಶನ ಪಡೆದ ಭಕ್ತರು ಗುರು ಕಾರುಣ್ಯ ಮೂರ್ತಿಯ ಗುರು – ಶಿಷ್ಯನ ಮಹಿಮೆ ಸ್ಥಳಿಯರಿಂದ ತಿಳಿದು ಧನ್ಯತೆಯ ಭಾವ ಅನುಭವಿಸುತ್ತಿದ್ದಾರೆ. ಇನ್ನಷ್ಟು ತಿಳಿಯಲು ಹಪಹಪಿಸುತ್ತಿದ್ದಾರೆ.
ಬರುವ ೨೦೨೭ರಲ್ಲಿ ಜರುಗಲಿರುವ ಭವ್ಯ ಸದ್ಗುರು ಸಿದ್ಧಲಿಂಗ ಮಹಾರಾಜ ಲಿಂಗೈಕ್ಯ ಶತಮಾನೋತ್ಸವ ನಿಮಿತ್ಯ ಮಠದಲ್ಲಿ ಪ್ರಸ್ತುತ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ಭಕ್ತರಿಗಾಗಿ ವೇಗರೂಪದಲ್ಲಿ ನಡೆದ ಕಟ್ಟಡ ಕಾಮಗಾರಿ ಕಾರ್ಯ ಕೈಗೊಂಡಾಗ ಅಚ್ಚರಿ ಕಾದಿತ್ತು. ಸಹಜವಾಗಿ ಮಠದ ಒಳಾಂಗಣದಲ್ಲಿ ಜೆಸಿಬಿ ವಾಹನ ಬಳಸಿ ಅಂದಾಜು ೬ ರಿಂದ ೮ ಅಡಿ ಆಳದ ಮಣ್ಣನ್ನು ಅಗೆದು ಟ್ಯಾಕ್ಟರ್ ಮೂಲಕ ಸಾಗಿಸುವ ಕಾರ್ಯ ಭರದಿಂದ ಸಾಗಿತ್ತು. ಜೆಸಿಬಿ ವಾಹನ ಚಾಲಕನಿಗೂ ಈ ಕುರಿತು ಮಾಹಿತಿ ಇರಲಿಲ್ಲ. ಅಲ್ಲಿನ ಭಕ್ತರು ನಿರೀಕ್ಷಿಸಿರಲಿಲ್ಲ ಭೂಗರ್ಭದಲ್ಲಿ ಭದ್ರವಾದ ಕಟ್ಟಡದಲ್ಲಿ ಲಿಂಗೈಕ್ಯ ಗೂಳಿ ಇದೆ ಎಂದು, ಇದನ್ನು ನೋಡಿದವರು ಯಾರು ಇಲ್ಲ, ಕೇಳಿದವರು ಯಾವ ಕುರುಹು ಇರಲಿಕ್ಕಿಲ್ಲ ಎಂದುಕೊAಡು ಸುಮ್ಮನಿದ್ದರು.
ನೋಡ ನೋಡುತ್ತಿದ್ದಂತೆ ಅಚ್ಚರಿ ಕಾದಿತ್ತು. ಅಲ್ಲಿದ್ದ ಭಕ್ತರೊಬ್ಬರು ಇಲ್ಲಿ ಗುಹೆ ಇದೆ ಎಂದು ಅದು ಲಿಂಗೈಕ್ಯ ಗುರುವಿನ ಗೂಳಿಯ ಗುಹೆ ಎಂದು ಅಂದಾಜಿಸಿದರು. ಈ ಸಂಗತಿ ತಿಳಿದ ಮಠದ ಸೇವಕರು ಕೆಲಸ ನಿಧಾಗತಿ ಕೈಗೊಂಡು ಲಿಂಗೈಕ್ಯ ಗೂಳಿಯ ಸ್ಥಳ ಪತ್ತೆ ಹಚ್ಚಿ, ಬಂಥನಾಳ ಪೂಜ್ಯರ ಸೂಚನೆಯಂತೆ ಗ್ರಾಮಸ್ಥರು ಈಗ ಈ ಸ್ಥಳದ ರಕ್ಷಣೆಗಾಗಿ ಮುಂದಾಗಿದ್ದಾರೆ. ಈ ಸುದ್ದಿ ತಿಳಿದ ಭಕ್ತರ ದಂಡು ಮಠದತ್ತ ಹೆಜ್ಜೆಹಾಕಿ ಲಿಂಗೈಕ್ಯ ಗೂಳಿಯ ಪುಣ್ಯ ದರ್ಶನ ಪಡೆಯಲು ಧಾವಿಸುತ್ತಿದ್ದಾರೆ. ಲಚ್ಯಾಣ ಮಠದ ಗುರುಪೀಠ ಬಂಥನಾಳ ಮಠದ ಪ್ರಸ್ತುತ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಇದೇ ಫೆ. ೨೩ರ ಭಾನುವಾರದಂದು ಭೇಟಿ ನೀಡಿ ಭೂಗರ್ಭದಲ್ಲಿನ ಲಿಂಗೈಕ್ಯ ಗೂಳಿಯ ಸ್ಮಾರಕ ಸ್ಥಳ ವೀಕ್ಷಣೆ ಮಾಡಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.