ಮುದ್ದೇಬಿಹಾಳ ;ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಸಮಾಜದ ಜ್ಞಾನವನ್ನು ಅರಿತವನು. ಸರ್ವಜ್ಞ ಕವಿಯು, ವಿದ್ಯೆ, ಕೃಷಿ ಹಾಗೂ ಜೀವನದ ಕುರಿತ ಆಳವನ್ನು ಅಳೆಯುವುದರ ಮೂಲಕ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ತ್ರಿಪದಿಗಳಲ್ಲಿ ಒಳ ಅರಿವು ಜಾಸ್ತಿ ಇದ್ದು, ಶ್ರೀಸಾಮಾನ್ಯರಿಗೂ ಅರ್ಥವಾಗುವಂತಿರುತ್ತದೆ. ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂಥ ಕೆಲಸವನ್ನು ಮಾಡಬೇಕು ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು ಅವರು ಗುರುವಾರ ತಾಲೂಕ ಆಡಳಿತದಿಂದ ಹಮ್ಮಿಕೊಂಡ ತ್ರಿಪದಿ ಕವಿ ಸರ್ವಜ್ಞರ ೫೦೫ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂಬಾರ ಸಮಾಜದ ತಾಲೂಕ ಅಧ್ಯಕ್ಷ ಹಾಗೂ ಕುಂಭ ಕಲಾ ನಿಗಮದ ನಿಕಟಪೂರ್ವ ನಿರ್ದೇಶಕ ಬಸಣ್ಣ ಕುಂಬಾರ ( ನಡಹಳ್ಳಿ) ಮಾತನಾಡಿ ಸರ್ವಜ್ಞ ತನ್ನ ವಚನದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾನೆ, ಅನುಭವಗಳಿಂದ ವಚನಗಳ ಮೂಲಕ ಲೋಕದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕವಿ ಸರ್ವಜ್ಞ. ಸಾಮಾಜಿಕ ತಾರತಮ್ಯಗಳಿಂದ ನರಳುತ್ತಿದ್ದ ಸಮಾಜದಲ್ಲಿ ಸಮಾನತೆ ಮೂಡಿಸಲು,
ಜನರಲ್ಲಿ ಬದಲಾವಣೆಗಳನ್ನು ತರಲು ಶಕ್ತರ ವಿರುದ್ಧ ವಚನ, ಕಾವ್ಯ, ಕವನಗಳ ಮೂಲಕ ಕ್ರಾಂತಿಯನ್ನು ಎಬ್ಬಿಸಿದ ಕ್ರಾಂತಿಕಾರಿ ಕವಿ ಸರ್ವಜ್ಞರಾಗಿದ್ದಾರೆ ಇಂದು ಕುಂಬಾರ ಸಮಾಜ ಸಂಘಟಿತವಾಗವೇಕು ಸಮಾಜ ಶೈಕ್ಷಣಿಕವಾಗಿ ಮುಂದೆ ಬರಲು ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದರು
ವಿಶೇಷ ಉಪನ್ಯಾಸ ನೀಡಿದ ಡಾ.ನಿಂಗರಾಜ ಚಕ್ರಸಾಲಿ ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ ಎಂದರು.
ಪಟ್ಟಣದ ಕುಂಬಾರ ಓಣಿಯ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಸಂತ ಕವಿ ಸರ್ವಜ್ಞ ರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಮಂಗಲವಾಧ್ಯಗಳೂಂದಿಗೆ ತಹಶಿಲ್ದಾರರ ಕಚೇರಿಯ ವರಗೆ ಮಾಡಲಾಯಿತು .
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಯು ಬಿ ಧರಿಕಾರ, ಶಿರಸ್ತೆದಾರ ಎಂ ಎ ಬಾಗೇವಾಡಿ,ಕುಂಬಾರ ಸಮಾಜದ ಅಂಬ್ರೇಶ ಕುಂಬಾರ, ಜಗದೀಶ್ ಕುಂಬಾರ, ನ್ಯಾಯವಾದಿ ಎಸ್ ಸಿ ಸುಗಂಧಿ, ಮಲ್ಲಪ್ಪ ಕುಂಬಾರ ,ಗುರುಪ್ಪ ಕುಂಬಾರ, ಮಲ್ಲು ಬ ಕುಂಬಾರ, ಮಹಾದೇವಪ್ಪ ಕುಂಬಾರ ನಾಲತವಾಡ, ಎನ್ ಎನ್ ಕುಂಬಾರ,ಧರ್ಮಣ್ಣ ಕುಂಬಾರ,ರಾಜು ಚಂದಪ್ಪ ಕುಂಬಾರ, ಸುಭಾಷ್ ಕುಂಬಾರ,ಮಹಾಂತೇಶ ಕುಂಬಾರ,ಪತ್ರಕರ್ತ ಬಸವರಾಜ ಈ ಕುಂಬಾರ( ಚವನಭಾವಿ),ಶಂಕರ ಕುಂಬಾರ, ಅಂಬಣ್ಣ ಕುಂಬಾರ, ರಾಮಣ್ಣ ಕುಂಬಾರ, ಚನ್ನಪ್ಪ ಕುಂಬಾರ, ಶೋಭಾ ಕಾಖಾಂಡಕಿ,ಶರಣಪ್ಪ ಕುಂಬಾರ,ಗೌರಮ್ಮ ಕುಂಬಾರ, ರವಿ ಕುಂಬಾರ,ಕೃಷ್ಣ ಕುಂಬಾರ ಸೇರಿದಂತೆ ಸಮಾಜದ ಭಾಂದವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು, ಸಿಆರ್ ಪಿ ಗುಂಡು ಚವ್ಹಾಣ ನಿರೂಪಿಸಿ ವಂದಿಸಿದರು.