ರಾಷ್ಟ್ರದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಅನನ್ಯ -ದಯಾನಂದ ಬಿರಾದಾರ
ಇಂಡಿ: ಪಿ ಎಂ ಇಂಟರ್ನ್ಶಿಪ್ ಯೋಜನೆಯು 21 ರಿಂದ 24 ವಯಸ್ಸಿನ ಯುವಕರಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಮತ್ತು ಅವರ ವೃತ್ತಿ ನಿರೀಕ್ಷೆಗಳನ್ನು ಹೆಚ್ಚಿಸಲು ಒಂದು ಅತ್ಯುತ್ತಮ ಅವಕಾಶವಾಗಿದೆ ಎಂದು ವಿಜಯಪುರದ ಬಿಜ್ಜರಗಿ ಮೋಟಾರ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ದಯಾನಂದ ಬಿರಾದಾರ ಹೇಳಿದರು.
ಮಂಗಳವಾರದಂದು ಪಟ್ಟಣದ ಸರಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲೆಯ ಉದ್ದಿಮೆದಾರರು ಮತ್ತು ತರಬೇತುದಾರರಿಗೆ ಹಮ್ಮಿಕೊಂಡ ಪಿ ಎಂ ಇಂಟರ್ನ್ಶಿಪ್ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಇಂಟರ್ನ್ಶಿಪ್ ಯೋಜನೆಯು ಉದ್ಯಮದ ಅನುಭವ, ಕೌಶಲ್ಯ ಅಭಿವೃದ್ಧಿ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಅವಕಾಶ ನೀಡುತ್ತದೆ. ರಚನಾತ್ಮಕ ಕಲಿಕಾ ವಾತಾವರಣದೊಂದಿಗೆ, ಇದು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಪರಿಪೂರ್ಣ ಅವಕಾಶವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಪಿ ವೈ ರಜನಿಕರ ಮಾತನಾಡಿ, ಇಂದಿನ ಯುವಕರು ವಿವಿಧ ವೃತ್ತಿ ಮತ್ತು ಉದ್ಯೋಗಾವಕಾಶಗಳಲ್ಲಿ ನಿಜ ಜೀವನದ ವ್ಯವಹಾರ ವಾತಾವರಣಕ್ಕೆ ಒಡ್ಡಿಕೊಳ್ಳಬೇಕು. ಈ ಯೋಜನೆಯು
ಯುವಕರಿಗೆ ನೈಜ ಪ್ರಪಂಚದ ವ್ಯಾಪಾರ ಪರಿಸರದಲ್ಲಿ ಅಮೂಲ್ಯವಾದ ಕೌಶಲ್ಯ ಮತ್ತು ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ವಿವಿಧ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎ ಕೆ ಚವ್ಹಾಣ, ಎಂ ಆರ್ ಸೂವಿಮಠ,ಪಿ ಬಿ ಉಪ್ಪಾರ, ಎಸ್ ಕೆ ಬಡಿಗೇರ,ಆರ್ ಎಸ್ ಪೊದ್ದಾರ,ಎಸ್ ಜಿ ಭಂಟನೂರ,ಎ ಜಿ ಗೌಡಗಾವಿ,ವೈ ಎಸ್ ಪೂಜಾರಿ,ಸಂತೋಷ ಇಂಗಳೆ ಹಾಗೂ
ಉಪನ್ಯಾಸಕರಾದ ರಮೇಶ ಮೇತ್ರಿ, ಸಂತೋಷ ಜಾಧವ, ಪ್ರೇಮಾನಂದ ದೇಸಾಯಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.


















