ಕೇಸಾಪೂರ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ೧೨ ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ.
ಮುದ್ದೇಬಿಹಾಳ :ತಾಲ್ಲೂಕಿನ ಕೇಸಾಪೂರ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ 12 ನಿರ್ದೇಶಕರು ಅವಿರೋಧ ಆಯ್ಕೆಯಾದರು ಪಟ್ಟಿ ಈ ರೀತಿ ಇದೆ.
ಚನ್ನಬಸಪ್ಪ ಸಂಗಪ್ಪ ಕುಸ್ತಿ , ಬಾಲಪ್ಪ ಭೀಮಪ್ಪ ತಳವಾರ,ಅಶೋಕ ಹಣಮಪ್ಪ ವಾಲಿಕಾರ, ಗುರುಸಿದ್ದಪ್ಪ ಗ್ಯಾನಪ್ಪ ಗೌಡರ, ಹಣಮಂತಪ್ಪ ಮಲ್ಲಪ್ಪ ಕಂಗಳ, ಭುವನೇಶ್ವರಿ ಬಸವರಾಜ ಪಡಶೆಟ್ಟಿ, ಜ್ಯೋತಿ ಶ್ರೀನಿವಾಸ ವಡ್ಡರ, ಜಗದೀಶ್. ಗು. ಪಂಪಣ್ಣನವರ,ಶರಣಪ್ಪ ಅ.ಗಂಗಾವತಿ, ಶರಣಪ್ಪ.ಯ.ವಡ್ಡರ, ಶಿದಪ್ಪ .ಹ ತಳವಾರ, ಗಿರಿಜಾ ಬ.ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿರೇಶ ಬಳಿಗಾರ ಘೋಷಣೆ ಮಾಡಿದ್ದಾರೆ.
ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ನಿರ್ದೇಶಕರಾದ ಸಿದ್ದಪ್ಪ ತಳವಾರ, ಜಗದೀಶ್ ಪಂಪಣ್ಣನವರ, ಶರಣಪ್ಪ ವಡ್ಡರ ನಮ್ಮ ಸಂಗಮೇಶ್ವರ ಪಿಕೆಪಿಎಸ್ 1999 ರಲ್ಲಿ ಸ್ಥಾಪಿತವಾಗಿದೆ ಅಲ್ಲಿಂದ ಇಲ್ಲಿಯವರೆಗೆ ಬರಲಾಗುತ್ತಿದೆ ಪಕ್ಷಾತೀತ ಜಾತ್ಯಾತೀತವಾಗಿ ಅವಿರೋಧವಾಗಿ ಆಯ್ಕೆಮಾಡಿಕೂಂಡು ಬರಲಾಗುತ್ತಿದೆ ಅತಿ ಕಡಿಮೆ ಅವಧಿಯಲ್ಲಿ ಕೇಸಾಪೂರ ಸಂಗಮೇಶ್ವರ ಪಿಕೆಪಿಎಸ್ ಆರ್ಥಿಕವಾಗಿ ಹೆಚ್ಚು ಲಾಭಾಂಶವನ್ನು ಪಡೆಯುತ್ತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಸೋಸಾಯಿಟಿಯಿಂದ ಸಿಗುವಂತಹ ಸೌಲಭ್ಯಗಳನ್ನು ನಮ್ಮ ಸಂಘದ ಸದಸ್ಯರಿಗೆ ಒದಗಿಸುತ್ತಿದೆ ರೈತರ ಅನುಕೂಲತೆ ಸದಾ ಮುಂದೆ ಇದೆ ಮತ್ತು ಸ್ವಂತ ಕಟ್ಟಡವನ್ನು ಹೊಂದಿದೆ ಹಾಗೂ ಯರಗಲ್ ನಲ್ಲಿ ಶಾಖೆಯನ್ನು ಮಾಡಲಾಗಿದೆ ಎಂದು ಅವಿರೋಧವಾಗಿ ಆಯ್ಕೆ ಮಾಡಿದ ಊರಿನ ಹಿರಿಯರಿಗೆ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು. 5 ವರ್ಷ ಅವಧಿಗೆ ಆಯ್ಕೆಯಾದ ನೂತನ ನಿರ್ದೇಶಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿದರು.
ಈ ವೇಳೆ ಸಂಗಮೇಶ್ವರ ಪಿಕೆಪಿಎಸ್ ನ ಮುಖ್ಯ ಕಾರ್ಯನಿರ್ವಾಹಕ ರಾಮಣ್ಣ ಖಾನಾಪುರ, ಸಿಬ್ಬಂದಿಗಳಾದ ಬಿ ಕೆ ಬಿರಾದಾರ, ಎಸ್ ಬಿ ಗೌಡರ, ಎಸ್ ಎಸ್ ಕುಸ್ತಿ, ಎಸ್ ಎಲ್ ಬಿರಾದಾರ, ಬಿ ಎಸ್ ಬಂಗಾರಗುಂಡ, ಬಿ ಬಿ ಪಡಶೆಟ್ಟಿ, ಮಹಾಂತೇಶ ಕಂಠಿ, ಗುಂಡಪ್ಪ ಬಿರಾದಾರ. ಉಪಸ್ಥಿತರಿದ್ದರು.
ಮುದ್ದೇಬಿಹಾಳ :ತಾಲ್ಲೂಕಿನ ಕೇಸಾಪೂರ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ 12 ನಿರ್ದೇಶಕರು ಅವಿರೋಧ ಆಯ್ಕೆಯಾದರು