ಅರಳುವ ಪ್ರತಿಭೆಗಳನ್ನು ಗುರುತಿಸಿ – ಆನಂದ. ಹುಣಸಗಿ
ಇಂಡಿ : 2025 ಮಕ್ಕಳ ಕಲಿಕಾ ಹಬ್ಬದ ಪ್ರಯುಕ್ತ ತಡವಲಗಾ ಕ್ಲಸ್ಟರದಲ್ಲಿ ಅತೀ ವಿಜೃಂಭಣೆಯಿಂದ ಜರುಗಿತು. ಎಪ್ ಎಲ್ ಎನ್ ಆಧಾರಿತ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಸ್ಪಷ್ಟ ಓದು ಶುದ್ಧ ಬರಹ ಸರಳ ಲೆಕ್ಕಾಚಾರದ ಸಾಮರ್ಥ್ಯ ಗುರುತಿಸುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ವಲಯದ ಶಿಕ್ಷಣ ಸಂಯೋಜಕ ಆನಂದ ಹುಣಸಗಿ ಅವರು ಹೇಳಿದರು..
ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ ಪಿ ಎಸ್ ಗೊಳ್ಳಗಿ ವಸ್ತಿ ಶಾಲೆಯಲ್ಲಿ ಹೇಳಿದರು.
ಈ ಒಂದು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದ ಗ್ರಾಮ ಪಂಚಾಯಿತ ಅಧ್ಯಕ್ಷ ಸುನಂದ ವಾಲಿಕಾರ್ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಶಿಕ್ಷಕ ರಮೇಶ. ರ.ಮುಂಜಣ್ಣಿ ಅವರು ಕಲಿಕಾ ಹಬ್ಬವು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಗುರುತಿಸುವ ಒಂದು ಉತ್ತಮ ಕಾರ್ಯಕ್ರಮ ವಾಗಿದೆ ಎಂದು ಹೇಳಿದರು.. ನಂತರ ಶ್ರೀ ಸುದೀಶ್ ಬಿರಾದಾರ್ ಶಿಕ್ಷಕರು ಮಕ್ಕಳಲ್ಲಿ ಭಾವಕೈತ್ಯ ಮೂಡಿಸುವ ಮಕ್ಕಳ ಶೈಕ್ಷಣಿಕ ಬಲವರ್ಧನ್ ಹಾಗೂ ಸಾಕ್ಷರತ ಮೂಡಿಸುವ ಹಬ್ಬ ಎಂದು ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿತಾಲೂಕಾ ಗ್ಯಾರಂಟಿ ಯೋಜನೆ ನಿರ್ದೇಶಕರು ಆದ ನಾಯ್ಕೋಡಿ ಹಾಗೂ ಎಸ್ ಡಿ ಎಂಸಿ ಅವರಾದ ಸುರೇಹಳ್ಳಿ, ಪ್ರಕಾಶ್. ರಾಥೋಡ್ ಸಿಆರ್ ಪಿ , ಶಾಲಾ ಮುಖ್ಯ ಗುರುಗಳಾದ ಡಿ ಜಿ ರಾಥೋಡ್, ಎಸ್ ಎಮ್ ವಂದಾಲ್, ಎಸ್ ಎಸ್ ಲಾಳಸಂಗಿ, ಎಮ್ ಯು ತೇಲಿ, ಅಶೋಕ್ ಚವಾಣ್, ಎಸ್. ನ. ಝೆಳಕಿ, ಮುತ್ತಗಿ ಸರ್,ಟಿ ಕೆ ಜಂಬಗಿ, ಶಿರಾಗನವರ, ಗಿಡಗ0ಟಿ, ರೊಳ್ಳಿ, ಅನಿತಾ, ಜೋಗುರ, ಹುಬ್ಬಳ್ಳಿ, ಬಿರಾದರ, ಡಂಗಿ, ರಾಥೋಡ್ ಹೀಗೆ ಅನೇಕ ಶಿಕ್ಷಕ ಶಿಕ್ಷಕಿಯರು ಮತ್ತು ಕ್ಲಸ್ಟರ್ ದ ಮಕ್ಕಳು ಪಾಲ್ಗೊಂಡಿದ್ದರು.
ಕಲಿಕಾ ಹಬ್ಬದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ವಿ ಈ ಜಾಡರ ಶಿಕ್ಷಕರು ನಿರೂಪಿಸಿದರು..