೭೬ನೇ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಜಾಗೃತಿ ಕಾರ್ಯಕ್ರಮ
ಸಂವಿಧಾನ ನಮ್ಮ ರಕ್ಷಾಕವಚ: ಅಪರ ಜಿಲ್ಲಾಧಿಕಾರಿ ಸೋಮಲಿಂಗ್
ವಿಜಯಪೂರ : ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ್ ಗೆಣ್ಣೂರ ತಿಳಿಸಿದರು.
ದಲಿತ ಸಂಘಟನೆಗಳ ಮಹಾ ಒಕ್ಕೊಟದ ಸಂಯುಕ್ತ ಆಶ್ರಯದಲ್ಲಿ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು ನಗರದ ಅಂಬೇಡ್ಕರ್ ವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ದಲಿತ ಸಂಘಟನೆಯಗಳ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿತು.
ಅಂಬೇಡ್ಕರ್ ಅವರು ಹೆಮ್ಮೆಯ ಸಂವಿಧಾನ ರಚಿಸಿಕೊಟ್ಟಿರುವ ಕಾರಣದಿಂದ ದೇಶದಲ್ಲಿ ಎಲ್ಲರೂ ತಲೆಎತ್ತಿಕೊಂಡು, ನೆಮ್ಮದಿಯಿಂದ ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ. ಸಂವಿಧಾನ ನಮ್ಮೆಲ್ಲರ ರಕ್ಷಕವಚ. ಸರ್ವರಿಗೂ ಸಮಾನತೆ ಇರುವ ಸಂವಿಧಾನ ಬಗ್ಗೆ ಮಾತನಾಡುವುದರಿಂದ ಒಳಿತಾಗುವುದಿಲ್ಲ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕಥೆ ಪುರಾಣಗಳನ್ನು ಕೇಳಿ ಟೈಮ್ ಕಳಿಯುವ ಇಗಿನ ಕಾಲದ ಯುವ ಪೀಳಿಗೆ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಬಾಗಿಯಾಗಿರುವುದು ಹೆಮ್ಮೆಯ ಸಂಗತಿ. ಭಾರತಿಯ ಸಂವಿಧಾನದ ಅಡಿಯಲ್ಲಿ ಎಲ್ಲಾ ಜಾತಿ ಧರ್ಮದವರು ಸಮಾನ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲಿಕ್ಕೆ ಅವಕಾಶ ಕಲ್ಪಿಸಿ ಕೋಡಲಾಗಿದೆ.
ಭಾರತೀಯ ಸಂವಿಧಾನವು ವಿಶ್ವದಲ್ಲೇ ಶ್ರೇಷ್ಠವಾದ ಲಿಖಿತ ಸಂವಿಧಾನವಾಗಿದೆ. ಇದರ ಹಿಂದಿನ ಶ್ರಮ ಯಾರಿಗೂ ಕಾಣದು ದೇಶ ವಿದೇಶಗಳನ್ನು ಸುತ್ತಿ ಎಲ್ಲಾ ದೇಶಗಳ ಧರ್ಮ ಜಾತಿ ಬದುಕುವ ರೀತಿ ಹೀಗೆ ಹತ್ತು ಹಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರಿಗೂ ಸಮಾನ ಹಕ್ಕು ನೀಡುವ ಮೂಲಕ ಭಾರತ ದೇಶದ ವಿಶ್ವವೆ ಮೆಚ್ಚುವಂತ ಸಂವಿಧಾನ ಬರೆದು ಕೊಟ್ಟು ತಮ್ಮ ಜೀವನದ ಹಂಗನ್ನು ತೋರದೆ ದೇಶದ ಅಭಿವೃದ್ಧಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದ ಏಕ ಮಾತ್ರ ಜೀವವೆ ಡಾ. ಅಂಬೇಡ್ಕರ್ ಅವರು, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದದ್ದೆ ಆದಲ್ಲಿ ದೇಶ ಪ್ರಭುದ್ದ ಭಾರತ ವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಭೋದಿ ಧಮ್ಮ ಬಂತೇಜಿ ವಿಜಯಪುರ ಇವರು ವಹಿಸಿಕೊಂಡಿದ್ದರು. ಪರಶುರಾಮ ಲಂಬು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ಇನ್ನೂ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ,ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠ ಅಧಿಕಾರಿಗಳಾದ,ಮಾರಿಹಾಳ ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿಗಳಾದ,ಬಿ,ಎಸ್ ರಾಠೋಡ,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ,ಪುಂಡಲೀಕ ಮಾನವರ ಛಲವಾದಿ ನೌಕರ ಸಂಘದ ರಾಜ್ಯಧ್ಯಕ್ಷರಾದ,ಚಿದಾನಂದ ಕಾಂಬಳೆ ,ಮಾನವ ಬಂದುತ್ವ ವೇದಿಕೆಯ ಮುಖಂಡರಾದ ,ಪ್ರಬುಗೌಡ ಪಾಟೀಲ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಯಮನಪ್ಪ ಗುಣಕಿ ನಿರೂಪಿಸಿ ವಂದಿಸಿದರು.


















