76ನೇ ಗಣರಾಜ್ಯೋತ್ಸವ ಸಂಭ್ರಮ: ಎಸ್ ಎಸ್ ಪ್ಯಾರಾ – ಮೆಡಿಕಲ್ ಕಾಲೇಜು
ಭಾರತೀಯರ ಪಾಲಿಗೆ ಹೆಮ್ಮೆಯ ದಿನ ಗಣರಾಜ್ಯೋತ್ಸವ : ಡಾ.ಜ್ಯೋತಿ
ಇಂಡಿ : ಭಾರತೀಯ ಪಾಲಿಗೆ ಜನವರಿ 26 ಹೆಮ್ಮೆಯ ದಿನವಾಗಿದ್ದು, ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತೇವೋ ಅಷ್ಟೇ ಸಂಭ್ರಮದಿಂದ ಈ ದಿನವನ್ನು ಆಚರಿಸುತ್ತೇವೆ. ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಾಗಿದ್ದು, ಜನವರಿ 26 ರಂದು ಈ ಐತಿಹಾಸಿಕ ಕ್ಷಣವನ್ನು ಆಚರಿಸುವ ಮೂಲಕ ನೆನಪಿಸಿಕೊಳ್ಳುತ್ತೇವೆ ಎಂದು ಡಾ. ಜ್ಯೋತಿ ಎಸ್ ರುದ್ರವಾಡಿ ಹೇಳಿದರು.
ಭಾನುವಾರ, ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಜರುಗಿದ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರೆವರಿಸಿ ಮಾತನಾಡಿದರು.
ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲೂ ಸಂಭ್ರಮ, ಸಡಗರದಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಮನುಷ್ಯ ಜೀವನಕ್ಕೆ ಗಾಳಿ, ಬೆಳಕು, ನೀರು ಎಷ್ಟು ಮುಖ್ಯವೂ..! ಸಂವಿಧಾನ ಅಷ್ಟೇ ಮುಖ್ಯ ಎಂದು ಹೇಳಿದರು. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಲ್ಲಿ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಭಾವನೆ ಮೂಡಿಸಬೇಕು. ಇದಲ್ಲದೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಮೂಡಿಸಬೇಕು ಎಂದು ಹೇಳಿದರು.
ಇನ್ನೂ ದವ್ಯ ಸಾನಿಧ್ಯ ಮಳಸಿದ್ದಯ್ಯ ಹಿರೇಮಠ ಮಾತನಾಡದ ಅವರು, ನಮ್ಮ ಸಂವಿಧಾನ ಜಾರಿಗೆ ಬಂದ ದಿನ ನಾವೆಲ್ಲಾ ಇಷ್ಟೊಂದು ಸ್ವಾತಂತ್ರ್ಯದ ಬದುಕು ಸಾಧಿಸುತ್ತಿದ್ದೇವೆ, ಕಾನೂನು ಮುಂದೆ ಎಲ್ಲರೂ ಸಮನಾಗಿದ್ದೇವೆ ಅದಕ್ಕೆ ಕಾರಣ ನಮ್ಮ ಸಂವಿಧಾನ. ಇಲ್ಲಿ ತಪ್ಪು ಮಾಡಿದರೆ ಶ್ರೀಮಂಮತನಾದರೂ ಶಿಕ್ಷೆ ಸಿಕ್ಕೆ ಸಿಗುತ್ತದೆ, ಎಲ್ಲರಿಗೂ ಒಂದೇ ಕಾನೂನು ಇರುವುದು, ಆದ್ದರಿಂದ ಈ ದಿನ ನಮಗೆ ತುಂಬಾನೇ ಸಡಗರದ ಹಬ್ಬವಾಗಿದೆ. ನಮ್ಮ ಬದುಕಿನಲ್ಲಿ ನಾವು ಧೈರ್ಯವಾಗಿ ಹೆಜ್ಜೆ ಇಡಲು ನಮ್ಮ ಸಂವಿಧಾನ ನಮ್ಮ ಧೈರ್ಯ.ಈ ದಿನವನ್ನು ಸಂಭ್ರಮದಿಂದ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಎಸ್ ಬಿ ಕೆಂಬೋಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರರು ಪುಷ್ಪಾ ಪೊದ್ದಾರ, ಶ್ರೀಶೈಲ ಹೂಗಾರ, ಶೇಡಜಿ ರಾಠೋಡ, ಜಗದೇವ ರಾಠೋಡ, ಮೋಹನ್ ರಾಠೋಡ, ಫಯಾಜ್ ಬಾಗವಾನ, ಸುನೀಲ ರಾಠೋಡ ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಸಾರವಾಡ ಸ್ವಾಗತಿಸಿದರೆ, ಶ್ವೇತಾ ಧೋತ್ರೆ ನಿರೂಪಿಸಿದರು.


















