ಫೆ. 4 ಕ್ರಾಂತಿ ವೀರ ಬ್ರಿಗೇಡ್ : ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ
ವಿಜಯಪುರ: ಫೆ – 4 ರಂದು ಅಧಿಕೃತವಾಗಿ ಕ್ರಾಂತಿವೀರ ಬ್ರಿಗೇಡ್ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬರಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಭಾನುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1008 ಸಾಧು-ಸಂತರ ಪಾದ ಪೂಜೆಯೊಂದಿಗೆ ಬ್ರಿಗೇಡ್ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ಕಣ್ಣೀರಿ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದ ಪುರಿ ಮಹಾ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ‘ನಡೆಯಲಿದೆ ಎಂದು ವಿವರಿಸಿದರು.
ಬಸವರಾಜ ಬಾಳಿಕಾಯಿ ಈ ಬ್ರಿಗೇಡ್ ರಾಜ್ಯಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಕೆ.ಇ. ಕಾಂತೇಶ, ಸಂಚಾಲಕರಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಎಂಜೀರಪ್ಪ, ಮುಕುಡಪ್ಪ ಅವರು ಕಾರ್ಯ ನಿರ್ವಹಿಸಲಿದ್ದು, ನಾನು ಸಹ ಸಂಚಾಲಕ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದೇನೆ ಎಂದರು. – ರಾಜ್ಯದಲ್ಲಿ ಸಾವಿರಾರು ಮಠಗಳಿವೆ. ಈ ಮಠ- ಮಂದಿರಗಳ ಪೂಜಾರಿಗಳು ಅನೇಕ ರೀತಿಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಅನೇಕ ಪಟ್ಟದ ಪೂಜಾರಿಗಳು ಬಡವರು, ಇಂದಿಗೂ ಗುಡಿಸಲಿನಲ್ಲಿಯೇ ವಾಸ ಮಾಡುವಂತಹ ಪರಿಸ್ಥಿತಿ ಇದೆ. ಸಕಲ ಸಮಾಜಗಳ ಮಠಾಧೀಶರ ಉದ್ಧಾರಕ್ಕಾಗಿ ದುಡಿಯುವುದು ಬ್ರಿಗೇಡ್ನ ಮೂಲ ಉದ್ದೇಶವಾಗಿದೆ ಎಂದರು. ಹಿಂದೂ ಸಮಾಜದ ಸರ್ವ ಸಮಸ್ಯೆಗಳಿಗೆ ಬ್ರಿಗೇಡ್ ಧ್ವನಿಯಾಗಲಿದೆ.


















