ತಳವಾರ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ : ಜಿಲ್ಲಾಧ್ಯಕ್ಷ ದುಂಡೇಶ
ಬಾಗಲಕೋಟ : ಕಾಂಗ್ರೇಸ್ ಪಕ್ಷದಲ್ಲಿ ಪಕ್ಷದ ಕಟ್ಟ ಕಾರ್ಯಕರ್ತರಾಗಿ ಹಗಲು-ಇರಳು ಶ್ರಮಿಸಿರುವ ತಳವಾರ ಸಮಾಜದ ಮುಖಂಡರಾದ ಸಣ್ಣಪ್ಪ ತಳವಾರ ಅವರನ್ನು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾ ಅಧ್ಯಕ್ಷ ಹುದ್ದೆ ನೀಡಿ, ಆ ವಾರದಲ್ಲಿಯೇ ಆ ಹುದ್ದೆಯಿಂದ ಏಕಾಏಕಿಯಾಗಿ ತೆಗಿದಿದ್ದು ಯಾವ ನ್ಯಾಯ..? ತಳವಾರ ಸಮಾಜಕ್ಕೆ ಅನ್ಯಾಯ ಹಾಗೂ ಅವಹೇಳನ ಮಾಡಿದ್ದು, ತೀವ್ರವಾಗಿ ತಳವಾರ ಸಮಾಜ ಖಂಡಿಸುತ್ತೆದೆ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ದುಂಡೇಶ ತಳವಾರ್ ಆಕ್ರೋಷ ವ್ಯಕ್ತಪಡಿಸಿ ಮಾತನಾಡಿದರು.
ಶನಿವಾರ ತಾಲ್ಲೂಕಿನ ಜಮಖಂಡಿ ನಂದಿಕೇಶ್ವರ ದೇವಸ್ಥಾನದಲ್ಲಿ, ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮೀತಿಯ ಆಶ್ರಯದಲ್ಲಿ ಜರುಗಿದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆ ಜೊತೆಯಲ್ಲಿ ಸಮಾಜದ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ನಮ್ಮ ಸಮಾಜದ ದೊಡ್ಡ ಪ್ರಮಾಣದಲ್ಲಿದ್ದರೂ ಇಂತಹ ಕೆಟ್ಟ ಪರಿಸ್ಥಿತಿ ಅನುಭವಿಸುವ ಗಂಭೀರ ಪರಿಸ್ಥಿತಿ ಇದೆ. ಇದನ್ನು ತಳವಾರ ಸಮಾಜ ಅರ್ಥ ಮಾಡಿಕೊಳ್ಳಬೇಕು. ಇನ್ನೂ ಇಡೀ ರಾಜ್ಯದಲ್ಲಿರುವ ೧೦ ಲಕ್ಷಕ್ಕಿಂತ ಹೆಚ್ಚಿರುವ ಈ ತಳವಾರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಂದು ಗೌರವದ ಸ್ಥಾನ ಸಿಗದೆಯಿರುವುದು ವಿಷಾಧನೀಯ, ಅದರಲ್ಲೂ ಬೆಳಗಾವಿ, ಬಾಗಲಕೋಟ, ದಾರವಾಡ, ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ಸಮುದಾಯದ ಓರ್ವರಿಗೂ ಸೂಕ್ತವಾದ ಶ್ರೇಣಿಯ ಹುದ್ದೆ ನೀಡದೆಯಿರುವುದು ಪಕ್ಷದ ಹಿರಿಯ ಮುಖಂಡರ ಮೇಲೆ ತಳವಾರ ಸಮುದಾಯವು ತೀವ್ರವಾಗಿ ಖಂಡಿಸುತ್ತೆವೆ. ಈ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರೀ ಸಣ್ಣಪ್ಪ ತಳವಾರ ಅವರನ್ನು ಮತ್ತೆ ಜಿಲ್ಲಾಧ್ಯಕ್ಷ ಹುದ್ದೆ ನೀಡಿ ಮತ್ತು ಈ ತಳವಾರ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.
ಇನ್ನೂ ತಳವಾರ ಸಮಾಜ ಮುಖ್ಯ ಭೂಮಿಕೆ ಬರಬೇಕಾದರೆ ಶಿಕ್ಷಣ ಹಾಗೂ ಸಂಘಟನೆಯ ಅತೀ ಮುಖ್ಯ. ಅದಕ್ಕೆ ಶಿಕ್ಷಣಕ್ಕೆ ಮೊಟ್ಟ ಮೊದಲ ಆಧ್ಯತೆ ನೀಡಿ ಎಂದು ಹೇಳಿದರು. ಇನ್ನೂ ತಳವಾರ ಸಮಾಜವನ್ನು ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ಈ ತಳವಾರ ಪ.ಪಂ ಸೇರ್ಪಡೆಯಾಗಿದ್ದು ಮರತಂತೆ ಕಾಣಿಸುತ್ತದೆ. ಇಲ್ಲಿಯವರೆಗೆ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುವ ಎಸಿ/ಎಸ್ಟಿ ಕುಂದು ಕೊರತೆ ಹಾಗೂ ದೌರ್ಜನ್ಯ ಸಭೆ ಸೇರಿದಂತೆ ಯಾವುದೇ ಸಭೆಗಳಿಗೆ ತಳವಾರ ಸಮುದಾಯದ ಜನರನ್ನು ಅಹ್ವಾನ ನೀಡದೆ ಇರುವುದು ವಿಷಾಧನೀಯ ಸಂಗತಿ. ಆ ಒಂದು ಕಾರಣಕ್ಕೆ ಜಿಲ್ಲೆ, ತಾಲ್ಲೂಕು ಸೇರಿದಂತೆ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುವುದು ಅತ್ಯಂತ ಅವಶ್ಯಕ. ಹಾಗಾಗಿ ಎಲ್ಲರೂ ಕೈ ಜೋಡಸಿ ಸಮುದಾಯದ ಶಕ್ತಿ ತೋರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಯಂಕಪ್ಪ ಗೋಪಾಲ್ನವರ್,
ಉಪಾಧ್ಯಕ್ಷ ಹೊಳಬಸಪ್ಪ ತಳವಾರ್,ಕಾರ್ಯದರ್ಶಿ ಸಚಿನ್ ಟಕ್ಕಳಕಿ, ಜಮಖಂಡಿ ತಾಲೂಕು ಅಧ್ಯಕ್ಷ ಈಶ್ವರ ಸಣದಿ, ಉಪಾಧ್ಯಕ್ಷ ಈಶ್ವರ್ ತಳವಾರ್ ಕಾರ್ಯದರ್ಶಿ ಕರೆಪ್ಪ ದಳವಾಯಿ, ವಿಟ್ಟಲ್ ತಳವಾರ್, ಬಾಗಪ್ಪ ತಳವಾರ್, ಕಲ್ಲಪ್ಪ ಹನಗಂಡಿ, ಶಂಕರ್ ಕುರನಿ, ಹಾಗೂ ಸರ್ವ ಸದಸ್ಯರು ಜೊತೆಯಲ್ಲಿ ಸಮುದಾಯದ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.


















