ಹೃದಯವಂತಿಕೆಯಿಂದ ಬದುಕುವದು ಮುಖ್ಯ – ಶಾಸಕ ಯಶವಂತರಾಯಗೌಡ
ಇಂಡಿ : ಹೃದಯವಂತಿಕೆಯಿAದ ನಮ್ಮ ಇಚ್ಛೆಗೆ ಅನುಗುಣವಾದ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಅದರಡಿ ಪ್ರಯತ್ನಿಸಿ ಯಶಸ್ಸು ಸಾಧಿಸಿ ಮಾದರಿ ವ್ಯಕ್ತಿಗಳಾಗಿ ಬದುಕಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದ ವಿವಿಧ ಚಟುವಟಿಕೆ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಇತಿಹಾಸ ನಿರ್ಮಾಣ ಮಾಡಲು ನಮ್ಮ ಪ್ರಯತ್ನ ಅವಶ್ಯಕ, ನಾಗರೀಕ ಸಮಾಜದ ಭಾಗವಾಗಿ ಸಮಾಜವಾದಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಪ್ರಾಚಾರ್ಯ ಎಸ್.ಎಂ.ಉಪ್ಪಾರ, ಸಂಗಮೇಶ ಹಿರೇಮಠ,ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಆರ್.ಎಚ್, ಡಾ. ವಿಜಯಮಹಾಂತೇಶ ದೇವರ, ರವಿಕುಮಾರ ಅರಳಿ,ಎಸ್.ಎಚ್.ಓಲೇಕಾರ ಮಾತನಾಡಿದರು.
ಪ್ರಶಾಂತ ಕಾಳೆ, ಡಾ.ಎಸ್.ಜೆ.ಮಾಡ್ಯಾಳ,ಎಸ್.ಕೆ.ಲಿಂಗದಳ್ಳಿ, ರವಿ ಕಲ್ಲೂರ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ ವೇದಿಕೆಯ ಮೇಲಿದ್ದರು.
ಮಹಾವಿದ್ಯಾಲಯಕ್ಕೆ ಹೊಸದಾಗಿ ನೇಮಕಗೊಂಡ ಮತ್ತು ವರ್ಗಾವಣೆಗೊಂಡ ಸಹಾಯಕ ಪ್ರಾದ್ಯಾಪಕರನ್ನು ನಂದಕುಮಾರ ಬಿರಾದಾರ ಸ್ವಾಗತಿಸಿದರು.
ಇಂಡಿ ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದ ವಿವಿಧ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.



















