ಇಂಡಿ| ಹಸ್ತಸ್ಪರ್ಷ ಹಾಗೂ ದೃಷ್ಠಿಯಿಂದ ತಮ್ಮ ಶಕ್ತಿಯನ್ನು ನರೇಂದ್ರನಿಗೆ ಧಾರೆ ಎರೆದರು : ಶ್ರೀಶೈಲ ಪೀಠದ ಜಗದ್ಗುರು
ಇಂಡಿ: ಕಲ್ಲೆಂತಹ ಕಲ್ಲು ಸಹ ಶಿಲ್ಪಿಯಿಂದ ಕೆತ್ತಲ್ಪಟ್ಟು ಗುರುವಿನ ಹಸ್ತ ಸ್ಪರ್ಶ ಹಾಗೂ ಮಂತ್ರಗಳಿಂದ ದೇವರ ಸ್ಥಾನವನ್ನು ಪಡೆದುಕೊಳ್ಳುತ್ತದೆ, ಅದಕ್ಕೆ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಅವರು ಬುಧವಾರ ಇಂಡಿ ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ, ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ, ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜೆಡೆಯ ಶಾಂತಲಿAಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸ್ವಾಮೀ ವಿವೇಕಾನಂದರು ಚಿಕ್ಕವರಿದ್ದ ಸಂದರ್ಭದಲ್ಲಿ ದೇವರಿಲ್ಲ ಎಂಬ ಬಗ್ಗೆ ವಾದ ಮಾಡುತ್ತಿದ್ದರು. ಅಲ್ಲದೆ ಹಲವು ಶರಣರು, ಬುರ್ಧಧಿವಂತರು, ಧರ್ಮಾಧಿಕಾರಿಗಳೊಂದಿಗೆ ವಾದ ಮಾಡಿ ದೇವರಿಲ್ಲ ಎಂಬುದರ ಕುರಿತು ಚರ್ಚೆ ನಡೆಸಿ ತಾವೇ ಗೆದೆಯುತ್ತಿದ್ದರು ಎಂದು ತಿಳಿಸಿದರು.
ಮುಂದೆ ಒಬ್ಬ ಶಿವಯೋಗಿಗಳೋಂದಿಗೆ ದೇವರಿಲ್ಲ ಎಂಬ ವಾದ ಮಾಡಿ ಗೆದ್ದರು. ಆದರೆ ಆ ಶಿವಯೋಗಿಗಳು, ನೀನು ದೇವರಿಲ್ಲ ಎಂದು ಚರ್ಚಿಸಿ ಗೆದ್ದಿರಬಹುದು ಆದರೆ ದೇವರಿಲ್ಲ ಎಂಬುದನ್ನು ನಾನು ಒಪ್ಪೊಲ್ಲ. ನೀನು ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸು ಎಂದು ಹೇಳಿದರು.
ಅವರು ಹೇಳುತ್ತಿದ್ದಂತೆ ಆಗಿನ ನರೇಂದ್ರ ರಾಮಕೃಷ್ಣರ ಮಠಕ್ಕೆ ಹೋಗಿ ಚರ್ಚಿಸಲು ಪ್ರಾರಂಭಿಸಿದರು. ಕೊನೆಗೆ ರಾಮಕೃಷ್ಣರು ಆತನನ್ನು ತಮ್ಮ ಹಸ್ತಸ್ಪರ್ಷ ಹಾಗೂ ದೃಷ್ಠಿಯಿಂದ ತಮ್ಮ ಶಕ್ತಿಯನ್ನು ನರೇಂದ್ರನಿಗೆ ಧಾರೆ ಎರೆದರು. ಆಗ ಮೂರು ದಿನಗಳ ಕಾಲ ನರೇಂದ್ರ ಧ್ಯಾನದಲ್ಲಿ ಮಗ್ನನಾಗಿದ್ದ ಮೂರು ದಿನಗಳ ನಂತರ ರಾಮಕೃಷ್ಣ ಪರಮಹಂಸರು ನರೇಂದ್ರನನ್ನು ಧ್ಯಾನದಿಂದ ಎಬ್ಬಿಸಿ ಫಲಾಹಾರ ಸೇವಿಸಲು ತಿಳಿಸಿ ತದನಂತರ ಕೇಳಿದರು ಈಗ ದೇವರಿದ್ದಾನೋ ಇಲ್ಲವೋ ಎಂದು, ಆಗ ನರೇಂದ್ರ ಸ್ವಾಮೀ ವಿವೇಕಾನಂದನಾಗಿ ಪರಿವರ್ತನೆಯಾಗಿದ್ದ ಅವರ ಮಾತಿಗೆ ದೇವರಿಲ್ಲದೇ ಜಗದಲ್ಲಿ ಏನೂ ಇಲ್ಲ ಎಂದು ರಾಮಕೃಷ್ಣರನ್ನು ಗುರುವಾಗಿ ಸ್ವೀಕರಿಸಿದ ಎಂದು ಉದಾಹರಣೆ ನೀಡಿ ಮಲಘಾಣದ ಜಡೆಯ ಶಾಂತಲಿAಗ ಶಿವಾಚಾರ್ಯರು ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ಧೀಕ್ಷೆ ನೀಡಿದ್ದು, ಆನಂದ ಮಹಾರಾಜರು ಸಹ ಸ್ವಾಮೀ ವಿವೇಕಾನಂದರAತೆ ಹೆಚ್ಚೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು.
ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಹಿರೂರದ ಜಯಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಉಗಾದಿ ಹಾಗೂ ದೀಪಾವಳಿಯ ಹಬ್ಬಗಳಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮೀಜಿಯ ದರ್ಶನ ಮಾಡಲು ಹೆಚ್ಚಿನ ಜನ ಇರುವುದರಿಂದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮೀಯೇ ನಿಮ್ಮ ಗ್ರಾಮದಲ್ಲಿಯೇ ಸ್ಥಾಪಿತವಾಗಿ ನಿಮಗೆ ದರ್ಶನ ನೀಡುತ್ತಿದ್ದಾನೆ. ಇದು ಮಾರ್ಸನಳ್ಳಿ ಗ್ರಾಮಸ್ಥರ ಸುದೈವವೇ ಸರಿ ಎಂದರು.
ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ಮದುವೆಯಾದ ನವ ಜೋಡಿಗಳು ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗಿ, ದೇಶಕ್ಕೆ, ಈ ನಾಡಿಗೆ ಸೇವೆಗೈಯುವ ಮಕ್ಕಳನ್ನು ಹೆತ್ತು ಸಮಾಜಕ್ಕೆ ಕೊಡಿ ಎಂದು ಶುಭ ಹಾರೈಸಿದರು.
ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು, ಕೆರೂಟಗಿಯ ಶಿವಬಸವ ಶಿವಾಚಾರ್ಯರು, ಆಲಮೇಲದ ಗುರಲಿಂಗ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಸಿಂದಗಿಯ ಸಂಗನಬಸವ ಮಹಾಸ್ವಾಮೀಜಿಗಳು ಸೇರಿದಂತೆ ಹಲವರು ಸಾನಿಧ್ಯವಹಿಸಿದ್ದರು.
ಮಾರ್ಸನಳ್ಳಿ ಗ್ರಾಮದ ಮಲ್ಲಿಕಾರ್ಜುನ ಆಶ್ರಮಕ್ಕೆ ರಾವುತಪ್ಪ ಮಹಾದೇವಪ್ಪ ವಾಲೀಕಾರ ದಂಪತಿಗಳು ಎರಡು ಎಕರೆ ಜಮೀನು ದಾನ ನೀಡಿದ್ದು ಶ್ಲಾಘನೀಯ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಧರ್ಮದ ಏಳ್ಗೆಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ನೀಡಿದ್ದಾರೆ. ಇಂತಹವರು ಇರುವುದರಿಂದಲೇ ಇನ್ನೂ ಧರ್ಮ ಪ್ರಸಾರ ಕಾರ್ಯ ನಡೆಯುತ್ತಿದೆ.
ಶ್ರೀಶೈಲ ಜಗದ್ಗುರುಗಳು. ಆಲಮೇಲದ ವೈದ್ಯ ಡಾ. ಸಂದೀಪ ಪಾಟೀಲ್ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಭೂದಾನ ಮಾಡಿದ ಶ್ರೀಮತಿ ಸುವರ್ಣ ಹಾಗೂ ಶ್ರೀ ರಾವುತಪ್ಪ ಮಹಾದೇವಪ್ಪ ವಾಲೀಕಾರ ಅವರಿಗೆ ಶ್ರೀಶೈಲ ಶ್ರೀಗಳು ಸತ್ಕರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಡಾ. ಸಂದೀಪ ಪಾಟೀಲ, ಮಲ್ಲು ಮೇತ್ರಿ, ಹಣಮಂತ ಜಮಾದಾರ, ಶ್ಯಾಮ ಮಸಳಿ, ಮಾಳಪ್ಪ ಪೂಜಾರಿ, ಅಲಿಸಾಬ ಗೌರ, ಹೊನ್ನಪ್ಪ ಸೋಂಪೂರ, ಅರವಿಂದ ಬಗಲಿ, ರುಕುಮ್ಪಟೇಲ್ ಪಾಸೋಡಿ, ರಮೇಶ ಕಲ್ಯಾಣ , ಪ್ರಭು ವಾಲೀಕಾರ, ವಿಠ್ಠಲಗೌಡ ಪಾಟೀಲ, ಸತೀಶ ಜಮಾದಾರ, ಸತೀಶ ಮಸಳಿ, ಪ್ರಭುಗೌಡ ಬಿರಾದಾರ, ದೌಲಮಲಿಕ್ ದೇವರಮನಿ, ವಿಠ್ಠಲ ಏಳಗಿ, ಬತ್ತುಸಾಹುಕಾರ ಬಸಗೊಂಡ, ಶ್ರೀಶೈಲ ಜಮಾದಾರ, ಮಾಳಪ್ಪ ಇಂಡಿ, ರಾಚಪ್ಪ ಬಗಲಿ, ಬಾಪುಗೌಡ ಪಾಟೀಲ, ವಿಠ್ಠಲ ವಾಲೀಕಾರ, ಸೋಮು ಜಮಾದಾರ, ಸುಭಾಸ ಮೇತ್ರಿ, ಸೇರಿದಂತೆ ಇನ್ನಿತರರು ಇದ್ದರು.
ಸಿದ್ದರಾಮ ಜಮಾದಾರ, ಎಸ್.ಎಸ್. ಕೋಳಿ, ಈರಣ್ಣ ಜಮಾದಾರ, ದ್ಯಾಮಗೊಂಡ ಜಮಾದಾರ, ಯಲ್ಲಾಲಿಂಗ ಜಮಾದಾರ, ಸಂಕು ಜಮಾದಾರ, ಮಹೇಶ ಚಾಂದಕವಟೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಇಂಡಿ: ಬುಧವಾರ ಇಂಡಿ ತಾಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ, ಶ್ರೀಶೈಲ ಮಲ್ಲಿಕಾರ್ಜುನ ಲಿಂಗ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ, ಹಾಗೂ ತಪೋನಿಧಿ ಅನುಷ್ಠಾನ ಮೂರ್ತಿ ಜೆಡೆಯ ಶಾಂತಲಿAಗ ಶಿವಾಚಾರ್ಯರಿಂದ ಶ್ರೀ ಆನಂದ ಮಹಾರಾಜರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಪಾವನ ಸಾನಿಧ್ಯ ವಹಿಸಿ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು.



















