ಸಾಮೂಹಿಕ ವಿವಾಹ ಬಡವರದಲ್ಲ ಭಾಗ್ಯವಂತರ ಮದುವೆ – ಕಾಶಿ ಶ್ರೀಗಳು
ಇಂಡಿ : ಪಂಚ ಪೀಠಾಧೀಪತಿಗಳ, ಬೇರೆ ರಾಜ್ಯದ ನಮ್ಮ ರಾಜ್ಯದ ಬೇರೆ ಜಿಲ್ಲೆಯ ಬೇರೆ ತಾಲೂಕಿನ ನಮ್ಮ ತಾಲೂಕಿನ ಪೂಜ್ಯರು ಹರ ಗುರುಚರಣರು ಸಾವಿರಾರು ಜನರ ನಡುವೆ ನಡೆಯುವ ಮದುವೆ ಬಡವರ ಮದುವೆ ಅಲ್ಲ ಭಾಗ್ಯವಂತರ ಮದುವೆ ಎಂದು ಕಾಶಿ ಪೀಠದ ಸಿಂಹಾಸನಾಧೀಶ್ವರ ೧೦೦೮ ಡಾ. ಚಂದ್ರಶೇಖರ ಶಿವಾಚಾರ್ಯರರು ಭಗವತ್ಪಾದಂಗಳ ಹೇಳಿದರು.
ಪಟ್ಟಣದ ಸದ್ಗುರು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ಮತ್ತು ಹಿರೇ ಇಂಡಿ ಹನುಮಾನ ದೇವಸ್ಥಾನ ಸಮಿತಿ ಮತ್ತು ಶ್ರೀ ಶಾಂತೇಶ್ವರ ಸಹಕಾರ ಸೌಹಾರ್ಧ ಸಂಯುಕ್ತ ಆಶ್ರಯದಲ್ಲಿ ನಡೆದ ಧರ್ಮ ಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮದುವೆ ಇಂದು ಎಲ್ಲ ಸಮಾಜದವರ ಸಾಮಾನ್ಯ ಮತ್ತು ಬಡ ಕುಟುಂಬಗಳ ಜಲ್ವಂತ ಸಮಸ್ಯೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಮಾಡುವದು ಕಷ್ಟ. ಹೀಗಾಗಿ ಕಲಿತಿರುವ ವಧು ವರರು ಯುವಕರು ಗೃಹಸ್ಥಾಶ್ರಮ ಪ್ರವೇಶಕ್ಕೆ ಸಾಮೂಹಿಕ ವಿವಾಹ ಸೂಕ್ತ ಎಂದರು.
ಇAದು ಅನೇಕ ಸಮುದಾಯಗಳು ತಮ್ಮ ತಮ್ಮ ಸಮಾಜದಲ್ಲಿ ಸಾಮೂಹಿಕ ವಿವಾಹ ಮಾಡುತ್ತಿದ್ದು ವೀರಶೈವ ಲಿಂಗಾಯತ ಸಮಾಜದವರು ಮಾತ್ರ ಎಲ್ಲ ಸಮುದಾಯ ಒಳಗೊಂಡು ಸಾಮೂಹಿಕ ಮಾಡುತ್ತಿದ್ದು ಎಲ್ಲ ಸಮುದಾಯದ ಯುವಕರು ತಮ್ಮ ಸಮಾಜದ ಇಲ್ಲವೆ ವೀರಶೈವ ಸಮಾಜದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಕೆಂದರು.
ಇಂಡಿ ಪಟ್ಟಣದ ಜನರು ಪ್ರಾಣಕ್ಕಿಂತಲೂ ಹೆಚ್ಚಿಗೆ ಪಂಚಾಚಾರ್ಯ ಜಗದ್ಗುರುಗಳನ್ನು ಪ್ರೀತಿಸುತ್ತಿದ್ದು ಯಾವತ್ತೂ ಇಂಡಿ ಪಟ್ಟಣಕ್ಕೆ ಪ್ರಥಮ ಆದ್ಯತೆ ನೀಡಿಯುವದಾಗಿ ತಿಳಿಸಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಯುವಕರು ದೇಶಕ್ಕಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಮತ್ತು ಸಂಸಾರಕ್ಕಾ ನಿಷ್ಠೆಯಿಂದ ಪ್ರಾಮಾಣ ಕತೆಯಿಂದ ಕೆಲಸ ಮಾಡುವ ಮಕ್ಕಳನ್ನು ಪಡೆಯಲು ಕೇಳಿಕೊಂಡರು. ಅಂತಹ ಸಂಸ್ಕಾರ ಮಕ್ಕಳಿಗೆ ನೀಡಲು ಹೇಳಿದರು.
ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರರು ಮಾತನಾಡಿ ಇಂದು ಮಠ ಮಾನ್ಯಗಳು ಸಾಮೂಹಿಕ ವಿವಾಹದಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರೀತಿ ಸಂಸ್ಕಾರ ಸಹಕಾರ ಸಹಬಾಳ್ವೆ ಆದ್ಯಾತ್ಮದ ಕಡೆಗೆ ಒಲವು ನೀಡುತ್ತಿದ್ದು ಅದಕ್ಕೆ ಪೂರಕ ಯುವಕರು ಸ್ಪಂದಿಸಬೇಕಾಗಿದೆ ಎಂದರು.
ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು ಮಾತನಾಡಿ ಮಹಾತ್ಮರು ತಪಸ್ವಿಗಳ ನಡುವೆ ನಡೆಯುವ ಮದುವೆ ಪುಣ್ಯವಂತರದು. ವಧು ವರರು ಒಳ್ಳೆಯ ಸಂಸಾರ ನಡೆಸಿ ಆನಂದದ ಜೀವನ ಸಾಗಿಸಲಿ ಎಂದು ಹಾರೈಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ಜಾವೇದ ಮೋಮಿನ, ಧನರಾಜ ಮುಜಗೊಂಡ, ಬಸವರಾಜ ಗೊರನಾಳ ಮಾತನಾಡಿದರು.
೧೨ ಜೊತೆಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯ ಮೇಲೆ ಗೋಳಸಾರದ ಅಭಿನವ ಪುಂಡಲಿAಗ ಶ್ರೀಗಳು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರರು, ಹೊಟಗಿಯ ಯೋಗಿರಾಜೇಂದ್ರ ಶಿವಾಚಾರ್ಯರರು, ಶಹಾಪುರದ ಸುಗುರೇಶ್ವರ ಶ್ರೀಗಳು, ಮೈಂದರಗಿ ಶ್ರೀಗಳು, ಅಥರ್ಗಾದ ಮುರಗೇಂದ್ರ , ಆರ್ಜುಣಗಿ ಜೈನಾಪುರದ ರೇಣುಕಾಚಾರ್ಯ ಶ್ರೀಗಳು, ಹಿರೇಬೇವನೂರದ ಗುರುತಾಯಿ ಅಮ್ಮನವರು, ಹಿಂಗಣ ಯ ಶಿವಮ್ಮತಾಯಿ,ರೋಡಗಿಯ ಶಿವಲೀಂಗೇಶ್ವರ ಶ್ರೀಗಳು, ಕಡಬಗಾಂವ ಮತ್ತು ಅಳ್ಳಗಿ ಶ್ರೀಗಳು, ದಾನಮ್ಮದೇವಿ ಪ್ರವಚನ ನೀಡಿದ ತಡವಲಗಾದ ವೇದಮೂರ್ತಿ ಶಿವಾನಂದ ಶಾಸ್ತಿçÃಗಳು ಸೇರಿದಂತೆ ಅನೇಕ ಪೂಜ್ಯರು, ರಮೇಶ ಗುತ್ತೆದಾರ, ಸತ್ತಾರ ಬಾಗವಾನ,ಶ್ರೀಕಾಂತ ಕುಡಿಗನೂರ, ಬಿ.ಎಂ.ಕಣ ್ಣ ಗುರುಗಳು,ಪ್ರಭುಗೌಡ ಪಾಟೀಲರು,ವಿ.ಎಚ್.ಬಿರಾದಾರ,ಅನೀಲ ಜಮಾದಾರ,ಬಾಳು ಮುಳಜಿ,ಸಂತೋಷ ಗವಳಿ,ಮಲ್ಲಿಕಾರ್ಜುನ ಕಿವಡೆ, ಭೀಮಾಶಂಕರ ಮೂರಮನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ,ಹಣಮಂತ ಹೊಟಗಿ, ಪ್ರದೀಪ ಮೂರಗುಂಡಿ,ದೇವೆAದ್ರ ಕುಂಬಾರ,ಸತೀಶ ಕುಂಬಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಶಾಂತೇಶ್ವರ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಕಾರ್ಯಕ್ರಮ ಉದ್ಘಾಟಿಸಿ ಕಾಶಿ ಶ್ರೀಗಳು ಮಾತನಾಡಿದರು.


















