ರೈತರ ಬೇಡಿಕೆ ಈಡೇರಿಸದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಉಗ್ರ ಹೋರಾಟ : ನಡಹಳ್ಳಿ
ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ, ವಿಜಯಪುರ ಜಿಲ್ಲೆ.
ಮುದ್ದೇಬಿಹಾಳ: ತೊಗರಿ ಬೆಳೆ ಹಾನಿಯ ದ್ರೋಣ್ ಸಮೀಕ್ಷೆ, ನಕಲಿ ಬೀಜ ಪೂರೈಸಿದ ಏಜನ್ಸಿ ತನಿಖೆ ಸೇರಿ ರೈತರ ೪ ಬೇಡಿಕೆ ಈಡೇರಿಸದಿದ್ದರೆ ಬೆಳಗಾವಿ ಅಧಿವೇಶನ ಸಂದರ್ಭ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಎಚ್ಚರಿಸಿದರು. ಬಿದರಕುಂದಿಯಿಂದ ಮುದ್ದೇಬಿಹಾಳವರೆಗೆ ತೊಗರಿ ಬೆಳಗಾರರೊಂದಿಗೆ ಚಕ್ಕಡಿ, ಟ್ರಾö್ಯಕ್ಟರ್ ಸಮೇತ ಬೃಹತ್ ಪ್ರತಿಭಟನೆ ನಂತರ ಕೃಷಿ ಇಲಾಖೆ ಕಚೇರಿಯಲ್ಲಿನ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಹಾನಿಯ ನೈಜ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಬೇಕು. ನನ್ನ ಅವಧಿಯಲ್ಲಿ ಸಚಿವರನ್ನು ಕರೆಸಿ, ವಾಸ್ತವ ಸಮೀಕ್ಷೆ ಮಾಡಿಸಿ ಕೋಟ್ಯಾಂತರ ರೂ ಪರಿಹಾರ ಕೊಡಿಸಿದ್ದೆ. ಈಗಿನ ಸಮಸ್ಯೆ ಹವಾಮಾನದಿಂದಾಗಿದ್ದರೆ ಸೂಕ್ತ ಪರಿಹಾರ ಕೊಡಬೇಕು. ನಕಲಿ ಬೀಜ ಪೂರೈಕೆದಾರರಿಂದಾಗಿದ್ದರೆ ಅವರಿಂದಲೇ ವಸೂಲಿ ಮಾಡಿ ಕೊಡಿಸಬೇಕು. ವಿಮೆ ಕಟ್ಟದಿರುವ ರೈತರನ್ನೂ ಪರಿಹಾರಕ್ಕೆ ಪರಿಗಣಿಸಬೇಕು. ರಾಜಕಾರಣ ಮಾಡಲು ಇಗ್ಯಾವುದೇ ಚುನಾವಣೆಯಿಲ್ಲ. ಹಾಗಾಗಿ ಈ ಪ್ರತಿಭಟನೆ ರಾಜಕಾರಣಕ್ಕಾಗಿ ಅಲ್ಲ. ರೈತರ ಸಮಸ್ಯೆಗೆ ಪಕ್ಷಾತೀತ ಸ್ಪಂಧನೆಯಾಗಿದೆ ಎಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಎಂ.ಎಸ್.ಪಾಟೀಲ, ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಕೆ.ಆರ್.ಬಿರಾದಾರ, ನಾಗಲಿಂಗಯ್ಯ ಮಠ, ಮುನ್ನಾಧಣಿ ನಾಡಗೌಡ, ಅಶ್ವಿನಿ ಪಟ್ಟಣಶೆಟ್ಟಿ, ಶಿವರಾಜ ಚಗಳೆ ಇನ್ನಿತರರು ಮಾತನಾಡಿ ರೈತರ ಕಷ್ಟ ಗೊತ್ತಿರುವ ನಡಹಳ್ಳಿಯವರಿಂದ ಮಾತ್ರ ಇಂಥ ಹೋರಾಟ, ಸ್ಪಂಧನೆ ಸಾಧ್ಯ. ರೈತರ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಕಳಪೆ ಬೀಜ ರೈತರಿಗೆ ಮರಣ ಶಾಸನವಾಗಿದೆ ಎಂದರು.
ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ರೈತ ಮೋರ್ಚಾ ಅಧ್ಯಕ್ಷ ಶಂಕರಗೌಡ ಶಿವಣಗಿ ಕಂದಗನೂರ, ರೈತ ಸಂಘದ ಅಧ್ಯಕ್ಷ ಅಯ್ಯಣ್ಣ ಬಿದರಕುಂದಿ, ಮುಖಂಡರಾದ ಗುರುನಾಥಗೌಡ ದೇಶಮುಖ ಕೆಸಾಪುರ, ಗುರುನಾಥ ಬಿರಾದಾರ, ಪ್ರೇಮಸಿಂಗ ಚವ್ಹಾಣ, ಚನಬಸಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ತಂಗಡಗಿ, ಗುರುಲಿಂಗಪ್ಪ ಸುಳ್ಳಳ್ಳಿ, ಚನ್ನಪ್ಪ ಕಂಠಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ ಬಲದಿನ್ನಿ, ಸುವರ್ಣಾ ಬಿರಾದಾರ, ರೇಖಾ ಕೊಂಡಗೂಳಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ಸುಭಾಷ ಕಾಳಗಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ತೊಗರಿ ಬೆಳೆಗಾರರು ಸೇರಿ ಅನೇಕರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಡಿ.೯ರವರೆಗೂ ಸರಣಿ ಹೋರಾಟ ನಡೆಸಲು ತೀರ್ಮಾನಿಸಲಾಗಿತ್ತು. ತಹಸೀಲ್ದಾರ್ರವರು ಜಿಲ್ಲಾಧಿಕಾರಿಯೊಂದಿಗೆ, ಸಹಾಯಕ ಕೃಷಿ ನಿರ್ದೇಶಕರು ಜಂಟಿ ಕೃಷಿ ನಿರ್ದೇಶಕರೊಂದಿಗೆ ಈ ಬಗ್ಗೆ ಮೋಬೈಲ್ ಮುಖಾಂತರ ಮಾತನಾಡಿ ಹೋರಾಟಗಾರರ ಬೇಡಿಕೆಗಳನ್ನು ಗಮನಕ್ಕೆ ತಂದರು. ಅವರು ಆ ಕಡೆಯಿಂದ ತಿಳಿಸಿದಂತೆ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಕೊಳ್ಳುವ ಭರವಸೆ ನೀಡಿದ್ದಾಗಿ ತಿಳಿಸಿದ್ದರಿಂದ ಸರಣಿ ಹೋರಾಟ ಕೈಬಿಡಲಾಯಿತು. ಸ್ಪಂಧನೆ ದೊರಕದಿದ್ದರೆ ಅಧಿವೇಶನ ಸಮಯದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಇದಕ್ಕೂ ಮುನ್ನ ಬಿದರಕುಂದಿಯ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೈತರು, ಮುಖಂಡರ ಸಭೆ ನಡೆಸಿ ಚರ್ಚಿಸಲಾಯಿತು. ಅಲ್ಲಿಂದ ಚಕ್ಕಡಿ, ಟ್ರಾö್ಯಕ್ಟರ್ ರ್ಯಾಲಿ ಮೂಲಕ ಪಟ್ಟಣ ಪ್ರವೇಶಿಸಿ ರೈತರಿಗೆ ನ್ಯಾಯದ ಘೋಷಣೆ ಹಾಕುತ್ತ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಾಯಿತು. ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ತೊಗರಿ ಬೆಳೆ ನಷ್ಟದ ಸಮೀಕ್ಷೆಯನ್ನು ದ್ರೋಣ್ ಮುಖಾಂತರ ನಡೆಸಿ ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡುವಂತೆ ಶಿಫಾರಸು ಮಾಡಬೇಕು. ವಿಮೆ ತುಂಬಿದವರ ಹೊಲಗಳಿಗೆ ಕೃಷಿ ಅಧಿಕಾರಿಗಳು, ವಿಮಾ ಕಂಪನಿಯರು ರೈತರೊಂದಿಗೆ ಜಂಟಿ ಸಮೀಕ್ಷೆ ನಡೆಸಿ ವಾಸ್ತವ ಹಾನಿಯ ಪರಿಹಾರ ಬಿಡುಗಡೆಗೊಳಿಸಬೇಕು. ರೈತ ಸಂಪರ್ಕ ಕೇಂದ್ರಗಳಿಂದ ವಿತರಿಸಿರುವ ಬೀಜಗಳ ನೈಜತೆ, ಕಳಪೆ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತ ಏಜೆನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ನಷ್ಟವನ್ನು ಅವರಿಂದಲೇ ಭರಿಸಬೇಕು. ವಿಮೆ ಮಾಡದಿರುವ ತೊಗರಿ ನಷ್ಟಕ್ಕೊಳಗಾದ ರೈತರಿಗೂ ಸರ್ಕಾರವೇ ಪರಿಹಾರ ನೀಡಬೇಕು ಎನ್ನುವ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಹಾಯಕ ಕೃಷಿ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಅವರಿಗೆ ಸಲ್ಲಿಸಲಾಯಿತು.
ಜೆಡಿ, ಡಿಸಿ ವಿರುದ್ಧ ಆಕ್ರೋಶ
ಜಂಟಿ ಕೃಷಿ ನಿದೇಶಕಿ ರೂಪಾ ಎಲ್ ಅವರು ತೊಗರಿ ಬೆಳೆ ಹಾನಿಗೆ ಹವಾಮಾನ ವೈಪರೀತ್ಯ ಕಾರಣವೆನ್ನುವ ಹೇಳಿಕೆ ನೀಡಿದ್ದನ್ನು ಉಗ್ರವಾಗಿ ಖಂಡಿಸಿದ ನಡಹಳ್ಳಿಯವರು ಸರ್ಟಿಫಿಕೇಟ್ ಕೊಡಲು ಇರ್ಯಾರು? ವಿಜ್ಞಾನಿಗಳು ಹೇಳಬೇಕು. ಜೆಡಿ ಅವರ ಹೇಳಿಕೆ ಏಜನ್ಸಿಯವರನ್ನು ರಕ್ಷಿಸುವಂತಿದೆ. ಇದೇ ವಿಚಾರವಾಗಿ ಲೋಕಾಯುಕ್ತರು ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಯವರು ಯಾವುದೇ ರೈತರ ಹೊಲಕ್ಕೆ ಭೇಟಿ ನೀಡಿ ಹಾನಿಯ ನೈಜತೆ ಪರಿಶೀಲಿಸಿಲ್ಲ. ಕಲಬುರ್ಗಿ ಜಿಲ್ಲೆಯಲ್ಲಿ ೭೭ ಕೋಟಿ ರೂ ವಿಮೆ ಪರಿಹಾರವನ್ನು ಅಲ್ಲಿನ ಡಿಸಿ ಬಿಡುಗಡೆ ಮಾಡಿದ್ದು ಈ ಡಿಸಿಗೆ ಮಾದರಿಯಾಗಬೇಕು ಎಂದು ಚಾಟಿ ಬೀಸಿದರು.
Photo : ಮುದ್ದೇಬಿಹಾಳ: ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಕೃಷಿ ಎಡಿ ಎಸ್.ಡಿ.ಭಾವಿಕಟ್ಟಿ ಅವರಿಗೆ ರೈತರು ಮನವಿ ಸಲ್ಲಿಸಿದರು. ಎ.ಎಸ್.ಪಾಟೀಲ ನಡಹಳ್ಳಿ, ಗುರುಲಿಂಗಪ್ಪ ಅಂಗಡಿ, ಮುನ್ನಾಧಣಿ ನಾಡಗೌಡ, ಗುರುನಾಥಧಣಿ ದೇಶಮುಖ, ಶಂಕರಗೌಡ ಶಿವಣಗಿ, ಜಗದೀಶ ಪಂಪಣ್ಣವರ್ ಇನ್ನಿತರರು ಇದ್ದಾರೆ.

Photo 2 ಮುದ್ದೇಬಿಹಾಳ: ತೊಗರಿ ಬೆಳೆ ನಾಶಕ್ಕೆ ಪರಿಹಾರ, ನಕಲಿ ಬೀಜ ಪೂರೈಕೆ ತನಿಖೆಗೆ ಆಗ್ರಹಿಸಿ ರೈತರು ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಚಕ್ಕಡಿ, ಟ್ರಾö್ಯಕ್ಟರ್ಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.



















