ದಂತ ವೈದ್ಯರಿಂದ ಬುಡಕಟ್ಟು ಶಾಲಾ ಮಕ್ಕಳಿಗೆ ಕಲಿಕಾ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣೆ
ಹನೂರು : ಚಾಮರಾಜನಗರ ಪಟ್ಟಣದ ಹೆಸರಾಂತ ದಂತ ವೈದ್ಯರಾದಂತಹ ಅನಿಲ್ ಕುಮಾರ್ ಶೆಟ್ಟಿ ರವರು, ಸಮಾಜ ಸೇವಕರಾದ ಗುರುಸ್ವಾಮಿ ,ಲೊಕ್ಕನಹಳ್ಳಿ ಜಯಪಾಲ್ ಮತ್ತು ಇವರುಗಳ ಸ್ನೇಹ ಬಳಗವು ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿಗೆ ಒಳಪಡುವ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿಗೆ ಸೇರಿದ ನೆಲ್ಲಿಕತ್ರಿ ಹಾಗು ಅತ್ತಿಕಾನೆ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಬುಡಕಟ್ಟು ಶಾಲಾ ಮಕ್ಕಳಿಗೆ ಕಲಿಕೆಗೆ ಬೇಕಾಗಿರುವ ಪುಸ್ತಕಗಳು ಪೆನ್ನು ಪೆನ್ಸಿಲ್ ಮುಂತಾದವುಗಳನ್ನು ಒಳಗೊಂಡಂತಹ ಕಲಿಕಾ ಸಾಮಗ್ರಿಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತಾಡಿದಂತಹ ದಂತ ವೈದ್ಯರಾದಂತಹ ಅನಿಲ್ ಕುಮಾರ್ ಶೆಟ್ಟಿ ರವರು ನಾವುಗಳು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈಗಿನ ಕಾಲಘಟ್ಟಗಳೇ ಬೇರೆ ಸರ್ಕಾರಗಳು ಹಾಗೂ ಕೆಲ ಸಂಘ-ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುಗಳನ್ನು ನೀಡುತ್ತಿವೆ . ಪಟ್ಟಣಗಳಲ್ಲಿ ವಾಸಿಸುವಂತಹ ಮಕ್ಕಳಿಗೆ ಕಲಿಕೆಗೆ ಬೇಕಾಗಿರುವ ಪುಸ್ತಕಗಳು ಪೆನ್ನು ಮುಂತಾದ ಕಲಿಕೆ ಸಾಮಗ್ರಿಗಳು ಹಾಗೂ ಆಟವಾಡಲು ಬೇಕಾಗಿರುವ ಕ್ರೀಡಾ ಸಾಮಗ್ರಿಗಳು ಬೇಕು ಎನ್ನುವ ಸಮಯಕ್ಕೆ ಸಿಗುತ್ತವೆ, ಆದರೆ ಓಡಾಡಲು ಒಂದು ಸಾರಿಗೆ ವ್ಯವಸ್ಥೆಯು ಇಲ್ಲದಂತಹ ಇಂತಹ ಹಾಡಿಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ಹೆಚ್ಚು ,ಇಂತಹ ಕಷ್ಟದ ಸಂದರ್ಭಗಳಲ್ಲೂ ತಮ್ಮ ಮಕ್ಕಳು ತಮ್ಮಂತಾಗದೆ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಒಳ್ಳೆ ಕೆಲಸಕ್ಕೆ ಹೋಗಲಿ ಎಂದು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವಂತಹ ಬುಡಕಟ್ಟು ಜನಾಂಗದವರಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ತಿಳಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬೇಕಾಗುವಂತಹ ಪೌಷ್ಟಿಕ ಆಹಾರಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲ್ಲಿನ ಶಾಲಾ ಶಿಕ್ಷಕರಾದಂತಹ ಹರೀಶ್ ,ವಿಜಯ್ ಕುಮಾರ್ ಮತ್ತಿತ್ತರ ಶಿಕ್ಷಕರು ಹಾಜರಿದ್ದರು.



















