ಪ್ರಶಂಸನೀಯ ಕಾರ್ಯಕ್ಕೆ ಆಶಾ ಕಾರ್ಯಕರ್ತೆ ಜ್ಯೋತಿ, ಶುಶ್ರೂಷಕಿ ಎಸ್ ಎ ಶೇಖ ಸಾಕ್ಷಿಯಾಗಿದ್ದಾರೆ..! ಯಾವುದಕ್ಕೆ ಗೊತ್ತಾ..?
ಇಂಡಿ : ಹೇರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಯ ಮಧ್ಯದಲ್ಲಿ ಖಾಸಗಿ ವಾಹನದಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ತಾಲ್ಲೂಕಿನ ನಾದ ಬಿಕೆ ಗ್ರಾಮದಿಂದ ತಾಲೂಕು ಸರಕಾರಿ ಆಸ್ಪತ್ರೆಗೆ ಬರುವ ಮುನ್ನವೇ ಸಾಲೋಟಗಿ ಗ್ರಾಮದ ಹತ್ತೀರ ಯಶಸ್ವಿ ಸುರಕ್ಷಿತ ಹೆರಿಗೆ ಕಾರ್ಯ ಮಾಡುವ ಮೂಲಕ ತಾಯಿ ಮಗುವಿನ ಜೀವ ಉಳಿಸಿದ್ದಕ್ಕೆ ಎಲ್ಲಿಲ್ಲದ ಪ್ರಶಂಸನೀಯ ಕಾರ್ಯಕ್ಕೆ ಆಶಾ ಕಾರ್ಯಕರ್ತೆ ಜ್ಯೋತಿ ಹಾಗೂ
ಶುಶ್ರೂಷಕಿ ಎಸ್ ಎ ಶೇಖ ಸಾಕ್ಷಿಯಾಗಿದ್ದಾರೆ.
ಆದರೆ ತುರ್ತು ಸಂದರ್ಭದಲ್ಲಿ 108 ಅಂಬುಲೆನ್ಸ್ ವಾಹನ ಸಿಗದೆ ಇರುವುದರಿಂದ ಖಾಸಗಿ ವಾಹನದಲ್ಲಿ ಇಂಡಿ ತಾಲೂಕು ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಒಂದು ವೇಳೆ ಅನೇಕ ಸಮಸ್ಯೆಗಳು ಕಂಡಾಗ ಆರೋಗ್ಯ ಶಿಕ್ಷಣ ಅಧಿಕಾರಿ ಎಮ್ ವಾಯ್ ಪೂಜಾರಿ ಅವರು ಅವಶ್ಯಕತೆ ಇರುವ ಮಾಹಿತಿ ಮತ್ತು ಸಲಹೆ ನೀಡಿ ಹೆರಿಗೆ ಕಾರ್ಯದಲ್ಲಿ ಯಶಸ್ವಿಯಾದರು.
ತದನಂತರ ತಾಲೂಕು ಸರಕಾರಿ ಕರೆತಂದಾಗ ಚಿಕ್ಕ ಮಕ್ಕಳ ತಜ್ಞ ಡಾ|| ವಿಪುಲ್ ಕೋಳೆಕರ, ಡಾ|| ಪ್ರಶಾಂತ ಧೂಮಗೊಂಡ , ಶುಶ್ರಿಕೆ ವಿಜಯಲಕ್ಷ್ಮಿ ಹಾದಿಮನಿ ತಪಾಸಣೆ ಮಾಡಿ ಮಗುವಿನ ತೂಕ 1:50 ಕೆಜಿ ಗ್ರಾಂ ಇದ್ದದ್ದು ಕಂಡು ಬಂದ ಹಿನ್ನೆಲೆ ಮಗುವಿಗೆ ಸುರಕ್ಷತೆಗಾಗಿ ನಿಗಾ ಘಟಕದಲ್ಲಿ ಇಟ್ಟಿದ್ದು ಮಗು ಮತ್ತು ತಾಯಿ ಆರಾಮವಾಗಿದ್ದು ಅಪಾಯವಿಲ್ಲ ಎಂದು ಡಾ|| ವಿಪುಲ್ ಕೋಳೆಕರ ತಿಳಿಸಿದ್ದಾರೆ.
ವಾಹನದಲ್ಲಿಯೇ ಹೆರಿಗೆ ಮಾನವೀಯತೆ ಮೆರೆದ ಆಶಾ ಕಾರ್ಯಕರ್ತೆಯರು




















