ಭೀಮಾ ನದಿಗೆ ಒಂದು ಲಕ್ಷ ೪೦ ಸಾವಿರ ಕ್ಯುಸೆಕ್ ನೀರು
ಇಂಡಿ : ತಾಲೂಕು ಮತ್ತು ಚಡಚಣ, ಆಲಮೇಲ,ಸಿಂದಗಿ ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಬುಧವಾರ ಸಂಜೆ ೪ ಗಂಟೆಗೆ ಒಂದು ಲಕ್ಷ ೪೦ ಸಾವಿರ ಕ್ಯುಸೆಕ ನೀರು ಹರಿಯ ಬಿಡಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ. ಮಹಾರಾಷ್ಟçದ ಉಜನಿ ಜಲಾಶಯದಿಂದ ೯೦ ಸಾವಿರ ಮತ್ತು ವೀರಭಟಕರ ಜಲಾಶಯದಿಂದ ಭೀಮಾ ನದಿಗೆ ೫೦ ಸಾವಿರ ನೀರು ಬಿಡಲಾಗಿದೆ ಎಂದರು.
ಇದೇ ವೇಳೆ ಇಂದೆ ವೀರಭಟಕರ ಜಲಾಶಯದಿಂದ ಇನ್ನು ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ.
ಈಗಾಗಲೇ ಇಂದು ಎಲ್ಲ ಬ್ಯಾರೇಜುಗಳಿಗೆ ಭೇಟಿ ನೀಡಿದ್ದು ಎಲ್ಲ ಕರ್ನಾಟಕದ ನಾಲ್ಕು ಮತ್ತು ಮಹಾರಾಷ್ಟçದ ನಾಲ್ಕು ಬ್ಯಾರೇಜುಗಳ ಮೇಲಿಂದ ನೀರು ಹೋಗುತ್ತಿದ್ದು ರೈತರು ಕರ್ನಾಟಕ ಕಡೆಯಿಂದ ಬ್ಯಾರೇಜದ ಮೇಲಿಂದ ಹೋಗುವ ಅಥವಾ ವಾಹನ ತೊಳೆಯುವ ಅಥವಾ ಯಾವದೇ ರೀತಿಯ ಚಟುವಟಿಕೆ ಮಾಡದಂತೆ ಎಚ್ಚರಿಕೆ ವಹಿಸ ಬೇಕೆಂದು ಗದ್ಯಾಳ ತಿಳಿಸಿದ್ದಾರೆ.
ಮಹಾರಾಷ್ಟçದ ಭೀಮಾ ನದಿ ಪಾತ್ರದಲ್ಲಿ ಮಳೆ ಹೆಚ್ಚಾದ ನಿಮಿತ್ಯ ಈ ನೀರು ಹರಿವ ಬಿಡಲಾಗಿದೆ ಎಂದು ಗದ್ಯಾಳ ತಿಳಿಸಿದ್ದಾರೆ.