ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬುಜಗಜೀವನರಾಮ ಪುಣ್ಯತಿಥಿ ಆಚರಣೆ..
ಇಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಾ|| ಬಾಬುಜಗಜೀವನರಾಮರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ|| ಬಾಬುಜಗಜೀವನರಾಮರವರ ಜೀವನವು ಹಲವಾರು ಆಯಾಮಗಳ ವ್ಯಕ್ತಿತ್ವವನ್ನು ಹೊಂದಿರುವವರಾಗಿದ್ದು, ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ ಡಾ|| ಬಾಬುಜಗಜೀವನರಾಮರವರು ಸುಮಾರು ೪೦ ವರ್ಷಗಳ ಕಾಲ ಸಂಸತ್ತಿನಲ್ಲಿ ಹಲವಾರು ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಮತ್ತು ಅವರ ವಿಚಾರಗಳ ಕುರಿತು ಸಂಶೋಧನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ಇವರ ತತ್ವಗಳನ್ನು ಪ್ರಸಾರ ಮಾಡಲು ಭಾರತದಲ್ಲಿ ಕೃಷಿಯ ಮೂಲಾಧಾರವಾಗಿದೆ. ಈ ದೃಷ್ಠಿಯಿಂದ ಡಾ|| ಬಾಬುಜಗಜೀವನರಾಮರವರು ದೇಶದ ಭೀಕರ ಬರಗಾಲದ ಕ್ಷಾಮದ ಪರಸ್ಥಿತಿಯಲ್ಲಿ ಕೈಗೊಂಡ ದೇಶದ ಆಹಾರ ಕೊರತೆಯನ್ನು ನೀಗಿಸಿ ಸುಸ್ಥೀರ ಅಭಿವೃದ್ಧಿ ಸಹಕಾರವಾಯಿತು ಎಂದು ಕಾಂಗ್ರೆಸ್ ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಸ ಕಾಲೆಬಾಗ, ಡಾ. ಗಂಗಾಧರ ಸಂಭಣ್ಣಿ, ಮಹಾದೇವ ಜಾಧವ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ಲಾಲಸಾಬ ಕೊರಬು, ಜಮೀರಹ್ಮದ ಬಕ್ಷಿ, ರಿಯಾಜ ನದಾಫ, ತಾಜುದ್ದೀನ ಖಲೀಫಾ, ಫಿರೋಜ ಶೇಖ, ಬಾಬು ಯಾಳವಾರ, ಗಿರೀಶ ಇಟ್ಟಂಗಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ವಸಂತ ಹೊನಮೊಡೆ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಕಾಂಗ್ರೆಸ್ ಸಮೀತಿ, ವಿಜಯಪುರ.


















