ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯಲ್ಲಿ ಸಾಂಕ್ರಾಮಿಕ ಹಾಗೂ ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸಲು ಹೊಸ ಸಂಶೋದನೆ..!
ವಿಜಯಪುರ, ಜು. 06: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಕೇಂದ್ರ ಆಯುಷ್ ಇಲಾಖೆಯ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಆರ್. ಎಸ್. ಮುಧೋಳ ಮತ್ತು ಕೇಂದ್ರ ಆಯುಷ ವಿಭಾಗದ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಹಾನಿರ್ದೇಶಕ ಡಾ. ಸುಭಾಶ ಕೌಶಿಕ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಈ ಒಡಂಬಡಿಕೆಯಿಂದಾಗಿ ವಿವಿ ಮತ್ತು ಪರಿಷತ್ತಿನ ನಡುವೆ ಪರಸ್ಪರ ಸಹಯೋಗದಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದ ನಾನಾ ವಿಭಾಗಗಳಲ್ಲಿ ಸಮಗ್ರ ಚಟುವಟಿಕೆ ನಡೆಸಲು ಮತ್ತು ನಾನಾ ಸಾಂಕ್ರಾಮಿಕ ಹಾಗೂ ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸಲು ಹೊಸ ಸಂಶೋದನೆ ಕೈಗೊಳ್ಳಲು, ವಿಚಾರ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಲಿದೆ.
ಈ ಒಡಂಬಡಿಕೆ ಸಂದರ್ಭದಲ್ಲಿ ವಿವಿ ಸಮಕುಲಾಧಿಪತಿ ಡಾ. ಆರ್. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವಿವಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ನಿರ್ದೇಶಕ ಡಾ. ಎಂ. ಎಂ.ಪಾಟೀಲ, ಗೌರವಾನ್ವಿತ ಪೀಠದ ಪ್ರಾಧ್ಯಾಪಕ ಡಾ. ಕುಸಾಲ ಕೆ. ದಾಸ, ಕೇಂದ್ರ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ವಿಜ್ಞಾನಿ ಡಾ. ದೇವದತ್ತ ನಾಯಕ, ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಎಸ್. ವಿ. ಪಾಟೀಲ, ಐಕ್ಯೂಎಸಿ ನಿರ್ದೇಶಕಿ ಡಾ. ಲತಾ ಮುಳ್ಳೂರ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೊಡಲ್ ಅಧಿಕಾರಿ, ಡಾ. ಈಶ್ವರ ಬಾಗೋಜಿ, ಡಾ. ಚಂದ್ರಕಾ ದೊಡ್ಡಿಹಾಳ, ಚಂದ್ರಮೌಳಿ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿ- ಕೇಂದ್ರ ಹೋಮಿಯೋಪಥಿ ಸಂಶೋಧನೆ ಪರಿಷತ್ತು ಒಡಂಬಡಿಕೆ : ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿ ಮತ್ತು ಕೇಂದ್ರ ಆಯುಷ್ ವಿಭಾಗದ ಹೋಮಿಯೋಪಥಿ ಸಂಶೋಧನೆ ಪರಿಷತ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮತ್ತು ಪರಿಷತ್ತಿನ ಮಹಾನಿರ್ದೇಶಕ ಡಾ. ಸುಭಾಶ ಕೌಶಿಕ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಪ್ರಿನ್ಸಿಪಾಲ ಡಾ. ಅರವಿಂದ ಕುಲಕರ್ಣಿ, ರಜಿಸ್ಟ್ರಾರ್ ಡಾ. ಅರ್. ವಿ. ಕುಲಕರ್ಣಿ, ಎಸ್. ವಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


















