ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ..!
ವಿಜಯಪುರ – ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ. ಅವು ಜಗ ಕಿಕ್ಕಿದ ವಿಧಿ. ನಿನ್ನ ಒಡವೆ ಎಂಬುದು ಜ್ಞಾನರತ್ನ. ಅಂತಪ್ಪ ದಿವ್ಯ ರತ್ನಗಳು ಕೆಡಗುಡದೇ ಆ ರತ್ನವು ನೀನು ಅಲಂಕರಿಸಿಯಾದಡೆ. ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ. ಜಗತ್ತು ಕಂಡ ದಾರ್ಶನಿಕ ಯಾವುದನ್ನು ತಿರಸ್ಕರಿಸದೆ ಯಾವುದನ್ನು ಪುರಸ್ಕರಿಸದೆ ನಿಶ್ಚಿಂತೆಯಾಗಿ ನಿರಾಮಯವಾಗಿ ಬದುಕಿದೆಂತ ಅಲ್ಲಮಪ್ರಭು ಅವರ ವಚನದಂತೆ. ಸಂಪತ್ ಭರಿತವಾದ ಫಲವತ್ತಾದ ಭೂಮಿಯನ್ನು ಹೊಂದಿದ ಹೊನ್ನುಟಗಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ನಿಮಿತ್ಯವಾಗಿ ಐದು ದಿನಗಳ ದೇವಿ ಪುರಾಣ, ಪ್ರವಚನ, ಅನ್ನಪ್ರಸಾದ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದು. ದೇವಿ ಪುರಾಣವನ್ನು ಖ್ಯಾತ ಪ್ರವಚನಕಾರಾದ ಪರಮಪೂಜ್ಯ ಬಾಬುರಾವ್ ಮಹಾರಾಜರು ಐದು ದಿನಗಳ ಕಾಲ ದೇವಿಯ ಮಹಾತ್ಮೆಯನ್ನು ಹೇಳಿ ದೇವಿ ಭಕ್ತರಲ್ಲಿ ಪ್ರಸನ್ನತೆ ಮೂಡಿಸಿದರು.
ಈ ಮೌಲಿಕ ಕಾರ್ಯಕ್ರಮದಲ್ಲಿ ಹೊನ್ನುಟಗಿ ಗ್ರಾಮದ ಮಾಜಿ ವೀರಯೋಧ ಸುಬೇದಾರ್ ಮೇಜರ್ ಅಪ್ಪಾಸಾಹೇಬ್ ಹೋಳಿನ ಸುಪುತ್ರಿ ಡಾ. ಶ್ವೇತಾ ಹೋಳಿನ ಎಂ ಬಿ ಬಿ ಎಸ್ .ಎಮ್ ಡಿ. ಚಿಕ್ಕ ಮಕ್ಕಳ ತಜ್ಞರು. ಇವರ ಸಾಧನೆಗಾಗಿ ಊರಿನ ಗಣ್ಯಮಾನ್ಯರು ಗ್ರಾಮ ದೇವತೆ ದುರ್ಗಾದೇವಿ ಸನ್ನಿಧಾನದಲ್ಲಿ ಸನ್ಮಾನಿಸಲಾಯಿತು. ದುರ್ಗಾದೇವಿಯ ಪೂಜಾರಿಗಳು ಆದ ಮಲ್ಲಪ್ಪ ಸಂಕದ ಮತ್ತು ಸತೀಶ್ ಹೋಳಿನ ಪ್ರಕಾಶ್ ಪರನಾಕರ, ವಕೀಲರಾದ ಉಮೇಶ್ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು