ಇಂಡಿ : ನಿಂಬೆನಾಡಿನ ಬಬಲಾದ ಗ್ರಾಮದ ವಿಶ್ವಜ್ಞಾನ ಗ್ರಂಥಾಲಯದಲ್ಲಿ ಸ್ವಾತಂತ್ರ್ಶ ಹೋರಾಟಗಾರ ನೇತಾಜಿ ಸುಭಾಷಚಂದ್ರ ಬೋಸ್ರವರ 125ನೇ ಜಯಂತೋತ್ಸವ ಸರಳವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಮಾತನಾಡಿ, ನೇತಾಜಿ ಸುಭಾಷಚಂದ್ರ ಬೋಸ್ ರವರು ಅಪ್ರತಿಮ ಸ್ವಾತಂತ್ರ್ಶ ಚಳುವಳಿಯ ಹೋರಾಟಗಾರˌ ಭಾರತಮಾತೆಯ ಹೆಮ್ಮೆಯ ವೀರ ಪುತ್ರˌ ಎಂದರು. ಭಾರತ ದೇಶ ವಿಭಜನೆಯನ್ನು ಖಂಡಿಸಿದ ವ್ಶಕ್ತಿ ಐತಿಹಾಸಿಕ 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇಡಿ ದೇಶದ ಜನತೆ ಒರ್ವ ಮನುಷ್ಶನಂತೆ ಸಿಡಿದೆದ್ದರು. ಈ ಸಂದರ್ಭದಲ್ಲಿ ದೇಶದ ಜನರಿಗೆ ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ ತಂದು ಕೊಡುವೆ ಅಂತ ಕರೆ ನೀಡಿ ಬ್ರಿಟಿಷರ ವಿರುದ್ದ ರಕ್ತದಾನ ಚಳುವಳಿ ಆರಂಬಿಸಿ ಹೋರಾಟ ಮಾಡಿದ್ದರು ಎಂದರು.
ಈ ಸಂದರ್ಭದಲ್ಲಿˌ ಕುಮಾರ ಸುರಗಳ್ಳಿˌ ಅನಿಲ ದಶವಂತ, ಸಿದ್ದು ಪೂಜಾರಿˌ ವಿಠೋಬಾ ದಶವಂತ ಬಂಗಾರೆಪ್ಪ ದಶವಂತ ಸಂಗೀತಾ ದಶವಂತ ˌ ಮತ್ತು ಗ್ರಾಮದ ಮುಖಂಡರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.



















