ಇಂಡಿ : ರಾಜ ಋಷಿ ಭಗೀರಥ ಮಹರ್ಷಿ ಕಠಿಣ ತಪಸ್ಸನ್ನ ಮಾಡಿ ಗಂಗೆಯನ್ನು ದೇವಲೋಕದಿಂದ ಭೂಲೋಕಕ್ಕೆ ತಂದು ಸಕಲ ಜೀವರಾಶಿಗಳಿಗೆ ನೀರಿನ ದಾಹವನ್ನ ತೀರಿಸಿರುವಂತಹ ಶ್ರೇಷ್ಠ ಸಂತ ಮಹಾನ್ ಮಾನವತಾವಾದಿ ಭಗೀರಥ ಮಹರ್ಷಿ ಜಯಂತಿಯನ್ನು ಮೇ 14 ಗಂಗಾ ಸಪ್ತಮಿ ದಿನದಂದು ಸರ್ಕಾರದ ಆದೇಶ ಮೇರೆಗೆ ಸರಳ ಮತ್ತು ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತದೆ ಎಂದು ಭಗೀರಥ ಮಹರ್ಷಿ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶ ಕರಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಎಲ್ಲಾ ವರ್ಗದ ಜನರ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಕನಕ ದಾಸರ ಜಯಂತಿ, ವಾಲ್ಮೀಕಿ ಮಹರ್ಷಿ ಜಯಂತಿ, ಛತ್ರಪತಿ ಶಿವಾಜಿಮಹಾರಾಜರ ಜಯಂತಿ ಹಾಗೂ ವಚನಕಾರರ ಜಯಂತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲಾಗುತ್ತದೆ.ಅದರಂತೆ
ರಾಜ್ಯದಲ್ಲಿ ಸುಮಾರು 45 ಲಕ್ಷಕ್ಕೂ ಹೆಚ್ಚು ಉಪ್ಪಾರ ಸಮಾಜ ಬಾಂಧವರು ಇದ್ದು, ರಾಜ್ಯದ ಚಾಮರಾಜನಗರದಿಂದ – ಬೀದರ್ ವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಉಪ್ಪಾರ ಸಮುದಾಯದ ಜನ ವಾಸಿಸುತ್ತಿದ್ದಾರೆ. ಈ ಸಮಾಜಕ್ಕೆ ಭಗೀರಥ ಮಹರ್ಷಿ ಕುಲ ಪುರುಷರಾಗಿದ್ದು, ಪ್ರತಿ ವರ್ಷ ಗಂಗಾ ಸಪ್ತಮಿ ದಿನದಂದು ಶ್ರೀ ಭಗೀರಥ ಜಯಂತಿಯನ್ನು ಆಚರಿಸಲಾಗುತ್ತಿದ್ದು. ಅದರಂತೆ ರಾಜ್ಯ ಸರಕಾರವು ಮೇ 14 ರಂದು ಗಂಗಾಸಪ್ತಮಿ ದಿನದೆಂದು ಭಗೀರಥ ಮಹರ್ಷಿ ಜಯಂತಿಯನ್ನು ಎಲ್ಲಾ ಸರಕಾರಿ ಕಛೇರಿಗಳಲ್ಲೂ ಆಚರಿಸಲು ಆದೇಶ ನೀಡಿದೆ. ಹಾಗಾಗಿ ಇಂಡಿ ತಾಲೂಕಿನ ಎಲ್ಲಾ ಸರಕಾರಿ ಕಛೇರಿಯಲ್ಲೂ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲು ಮನವಿ ಮಾಡಿಕೊಂಡು, ಇನ್ನೂ ಸಮಾಜವತಿಯಿಂದಲೂ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.