ಅಫಜಲಪುರ: ೧೨ನೇ ಶತಮಾನದಲ್ಲಿ ಬಹು ದೊಡ್ಡ ಕ್ರಾಂತಿಕಾರಿ ವಚನಕಾರರು. ನೇರ ನುಡಿಯ ದಿಟ್ಟ ನಿಜಶರಣ. ಗೊಡ್ಡು ಸಂಪ್ರದಾಯವನ್ನ ಕಿತ್ತೆಸೆಯಿರಿ, ಎಂದು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಶರಣರಲ್ಲಿ ಶ್ರೇಷ್ಟ ಬಚನಕಾರಾಗಿ ಹೊರ ಹೊಮ್ಮಿದವರು ಅವರೇ ಅಂಬಿಗರ ಚೌಡಯ್ಯ. ತಾಲೂಕಿನ ದುದ್ದಣಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ೯೦೨ ನೇ ಜಯಂತೋತ್ಸವ ಕಾರ್ಯಕ್ರಮನ್ನು ಗ್ರಾಮದ ಯುವಕರ ಬಳಗದ ವತಿಯಿಂದ ತಾಲೂಕಿನ ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಗಾಟನೆಯನ್ನ ಜೆಡಿಎಸ್ ಮುಖಂಡರಾದ ಶಿವುಕುಮಾರ ನಾಟಿಕಾರ ರವರು ನೆರವೇರಿಸಿದರು

ಅಂಬಿಗರ ಚೌಡಯ್ಯ ನವರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ, ಪೂಜೆಯನ್ನ ಮಂಜುನಾಥ ನಾಯಕೋಡಿ ರವರು ಮಾಡಿದರು ಹಾಗೂ ಧ್ವಜಾರೋಹಣವನ್ನ ದಿಗಂಬರ ಕರಜಗಿ ಅವರು ನೆರವೇರಿಸಿದರು. ಈ ವೇಳೆ ಶಿವಕುಮಾರ ನಾಟಿಕಾರ ಮಾತನಾಡಿ ಸಮಾಜದಲ್ಲಿ ಅರ್ಥವಿಲ್ಲದ ಆಚರಣೆಗಳು ಗೊಡ್ಡು ಸಂಪ್ರದಾಯಗಳು ಕಿತ್ತು ಎಸೆಯಬೇಕು ಸಮಾಜ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನ ನೀಡಬೇಕು ಅಂಬಿಗರ ಚೌಡಯ್ಯನವರನ್ನ ನಮ್ಮ ಸಮಾಜಕ್ಕೆ ಗುರುತಿಸಿದವರು ನಮ್ಮ ನೆಚ್ಚಿನ ನಾಯಕ ದಿ.ವಿಠಲ್ ಹೇರೂರ ರವರ ಮುಖ್ಯ ಕನಸು. ಸಮಾಜದ ಯುವಕರು ಶಿಕ್ಷಣದಲ್ಲಿ ಹೆಚ್ಚಾಗಬೇಕು. ಸಮಾಜ ಬಹಳಷ್ಟು ಬಲಿಷ್ಠ ಪಡಿಸಬೇಕು. ಸಮಾಜವನ್ನ ಎಸ್ಟಿ ಸೆರ್ಪಡೆ ಮಾಡಿಸಬೇಕು. ವಿಠಲ್ ಹೇರೂರ ಅವರ ಎಲ್ಲ ಕನಸುಗಳನ್ನ ನಾವು ನೀವೆಲ್ಲರೂ ಸೇರಿಕೊಂಡು ನನಸಾಗಿಸೋಣ ಎಂದರು.
ಈ ಸಂದರ್ಭದಲ್ಲಿ ನೀಲಕಂಠ ಜಮಾದಾರ,ಸಿದ್ದು ಅಮರಗೊಂಡ ,ಶಂಕರ ಜಮಾದಾರ ಖಾಜಪ್ಪ ಜಮಾದಾರ ಅಮೃತ ನಂದೂರ ಲಕ್ಷ್ಮಣ ಜಮಾದಾರ ಗುಂಡಪ್ಪ ಯಮಗಾರ ಶೇಖರ ಜಮಾದಾರ ಸಂತೋಷ ಜಮಾದಾರ ಪ್ರಕಾಶ ಜಮಾದಾರ ಭೀಮಣ್ಣ ಜಮಾದಾರ ಆಕಾಶ ಜಮಾದಾರ ಸಚಿನ ಜಮಾದಾರ
ಲಕ್ಷ್ಮಣ ಹರಿಜನ್ ಸಿದ್ದಪ್ಪಗೌಡ ಪಾಟೀಲ ಶಿವಣ್ಢ ಗೌರ ಶಂಕರ ಕರನಾಳ ಶ್ರೀಶೈಲ ಗೌರ ಚಂದ್ರಶೇಖರ್ ಪಾಟೀಲ್ ಅನೀಲ ಜಮಾದಾರ ಶಾಂತು ಜಮಾದಾರ ತುಕಾರಾಮ ಜಮಾದಾರ ಮಲಕು ಗೌರ ಅಂಬಣ್ಣ ಪ್ಯಾಟಿ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.



















