ರಾಯಚೂರು: ನಗರಸಭೆ ಸಾಮಾನ್ಯ ಸಭೆ ಅಜೆಂಡ್ ಮತ್ತು ಕಳೆದ ಸಭೆ ನಡಾವಳಿ ಸಿದ್ಧತೆಗೆ ಸಂಬಂಧಿಸಿ ಅಧ್ಯಕ್ಷರಾದ ಇ. ವಿನಯ್ ಕುಮಾರ ಮತ್ತು ಆಯುಕ್ತರಾದ ಕೆ. ಮುನಿಸ್ವಾಮಿ ಅವರ ಮಧ್ಯೆ ಭಾರೀ ಜಟಾಪಟಿ ನಡೆದ ಸಂಗತಿ ಬೆಳಕಿಗೆ ಬಂದಿದೆ.
ಜನೆವರಿ ಕೊನೆ ವಾರ ಸಾಮಾನ್ಯಸಭೆ ಕರೆಯಲು ಸಿದ್ಧತೆ ನಡೆದಿದೆ. ಈ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆ ನಡಾವಳಿ ಮಂಡನೆ ಬಗ್ಗೆ ಅಧ್ಯಕ್ಷರು ಮತ್ತು ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯ ತಲೆ ಎತ್ತಿರುವುದೆ ಜಾಟಾಪಟಿಗೆ ಕಾರಣ ಎಂದು ಹೇಳಲಾಗಿದೆ. ನಗರಸಭೆಯಲ್ಲಿ ಪ್ರಸಕ್ತ ಚುನಾಯಿತ ಸಮಿತಿ ಅಧಿಕಾರಿಕ್ಕೆ ಬರುವ ಪೂರ್ವ ಕೈಗೊಳ್ಳಲಾಗಿದೆ ಎಂದು ಹೇಳಲಾದ ಕಾಮಗಾರಿಗಳ ಕಡತಗಳಿಗೆ ಬಿಲ್ ಪಾವತಿ ವಿಷಯ ಮುಂದಿನ ಸಭೆ ನಿರ್ವಹಣೆ ಅತಂತ್ರಕ್ಕೆ ಸಿಕ್ಕುವಂತೆ ಮಾಡಿದೆ.
೨೦೨೧ ಸೆಪ್ಟಂಬರ್ ೩೦ ರಂದು ನಡೆದ ಸಾಮಾನ್ಯ ಸಭೆ ಅನೇಕ ವಿಚಿತ್ರ ತಿರುವುಗಳ ನಂತರ ಕೋರಮ್ ಸೇರಿ ಸಭೆ ನಿರ್ವಹಿಸಲಾಗಿತ್ತು. ಈ ಹಿಂದಿನ ಸಭೆಯಲ್ಲಿ ತಿರಸ್ಕಾರಗೊಂಡಿದ್ದ ೨೨೮ ಕಾಮಾಗಾರಿ ಕಡತಗಳನ್ನು ಸೆಪ್ಟಂಬರ್ ೩೦ ಸಭೆ ಮತ್ತೆ ಅಜೆಂಡದಲ್ಲಿ ಸೇರಿಸಿ ಬಜೆಪಿ ಸದಸ್ಯರ ಗೈರು ಮಧ್ಯೆ ಎಲ್ಲ ಅಜೆಂಡಗಳಿಗೆ ಒಪ್ಪಿಗೆ ಪಡೆಯಲಾಗಿತ್ತು. ಈ ಹಿಂದಿ ಸಭೆಯಲ್ಲಿ ೨೨೮ ಕಡತಗಳಿಗೆ ಅನುಮೋದಸಲು ನಿರಾಕರಿಸಿ ಕಾಂಗ್ರೆಸ್ ಸದಸ್ಯರು ಸೆ. ೩೦ ಸಭೆಯಲ್ಲಿ ಪಾಸ್ ಪಾಸ್ ಎಂದು ಅನುಮೋದಿಸಿದ್ದರು.
ಆದರೆ, ಬಿಜೆಪಿ, ಮತ್ತು ಜಾ.ದಳ ಪಕ್ಷದ ಉಮಾ ಜಾಲ್ದಾರ್, ಲಲಿತಾ ಕಡಗೋಳ ಅಂಜಿನಯ್ಯ ಹಾಗೂ ಗಾಯಿತ್ರಿ ಹರಿಶನಾಡ ಗೌಡ ಆವರು ಈ ಕಾಮಾಗರಿ ಕಡತಗಳು ಬೋಗಸ್ ಆಗಿವೆ. ಇವುಗಳಿಗೆ ಬಿಲ್ ಪಾವತಿಸದಿರಲು ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ನಿರ್ದೇಶಕರಿಗೆ ದೂರು ನೀಡಿದ್ದರು. ಈ ಬಗ್ಗೆ ಈಗಾಗಲೆ ಪೌರಾಡಳಿತ ನಿರ್ದೇಶನಾಲಯದಿಂದ ತನಿಖೆಗೆ ಅದೇಶಿಸಲಾಗದೆ. ತನಿಖಾ ಹಂತದಲ್ಲಿರುವ. ೨೨೮ ಕಡತಗಳಿಗೆ ಬಲ್ ಪಾವತಿ ನಡವಳಿಯನ್ನು ಮುಂದಿನ ಸಭೆ ದೃಢಿಕರಣಕ್ಕೆ ಮಂಡಿಸುವ ವಿಷಯದಲ್ಲಿ ಅಧ್ಯಕ್ಷರು ಮತ್ತು ಆಯುಕ್ತ ಮಧ್ಯೆ ಭಾರಿ ತಿಕ್ಕಾಟ ನಡೆದಿದೆ.
ಸೆ.೩೦ ಸಭೆಯಲ್ಲಿ ೨೨೮ ಕಡತಗಳಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿದ್ದರೂ, ಮುಂದಿನ ಸಭೆಯಲ್ಲಿ ನಡಾವಳಿ ದೃಢಿಕರಣಕ್ಕೆ ಇವುಗಳನ್ನು ಮಂಡಿಸುವುದು ಕಾನೂನಿನನ್ವಯ ಕಾನೂನು ಬಾಹಿರ. ಇದನ್ನು ತಡೆ ಹಡಿಯುವಂತೆ ಬಿಜೆಪಿ ಸದಸ್ಯರು ಮತ್ತು ದೂರುದಾರರಾದ ಉಮಾ ಜಲ್ದಾರ್ ಮತ್ತು ಸಂಗಡಿಗರ ಒತ್ತಡ ಸಾಮಾನ್ಯ ಸಭೆ ದಿನಾಂಕ ನಿಗದಿಗೆ ಅಡ್ಡಿಯಾಗಿದೆ. ಏತನ್ಮಧ್ಯೆ ಜ.೧೫ ರಂದು ೨೨೮ ವಿವಾದಿತ ಕಡತಗಳ ಬಗ್ಗೆ ಜಿಲ್ಲಾಧಿಕಾರಿಗಳಗೆ ಮತ್ತೊಂದು ದೂರು ನೀಡಿ, ಇದರಲ್ಲಿ ಶೇ ೯೦ ರಷ್ಟು ಬೋಗಸ್ ಬಿಲ್ಗಳಿದ್ದು, ನಡಾವಳಿ ಅನುಮೋದನೆ ಮೂಲಕ ನಗರಸಭೆ ಹಣ ಕೊಳ್ಳೆ ಹೊಡೆಯುವ ಸಂಚು ರೂಪಿಸಿದ್ದಾರೆ, ಕಾರಣ ಕಳೆದ ಸಭೆಯ ಈ ವಿಷಯವನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮುಂದಿನ ಸಭೆಗೆ ಸಂಬಂಧಿಸಿ ನಗರಸಭೆ ಅಧ್ಯಕ್ಷರಾದ ಇ.ವಿನಯ್ ಕುಮಾರ ಅವರು ಸಿದ್ಧ ಪಡಿಸಿದ ನಡಾವಳಿಯಲ್ಲಿ ೨೨೮ ಕಡತಗಳ ಬಗ್ಗೆ ಸೇರಿಸಲಾಗಿದೆ. ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಲು ಆಯುಕ್ತರು ಸಿದ್ಧರಿಲ್ಲ. ಇದು ಇಬ್ಬರ ಮಧ್ಯೆ ಜಾಟಾಪಟಿಗೆ ಕಾರಣವಾಗಿದೆ. ಈ ವಿಷಯ ಸೇರ್ಪಡೆ ಚರ್ಚೆ ಉಭಯ ಮಧ್ಯೆ ಭಾರಿ ತಿಕ್ಕಾಟ ಉಂಟು ಮಾಡಿದೆ. ಪರಸ್ಪರ ಮಧ್ಯೆ ಎಚ್ಚರಿಕೆ ನೀಡುವ ಹಂತಕ್ಕು ಹೋಗಿದೆ ಎಂದು ಹೇಳಲಾಗಿದೆ.
ಇದೊಂದೆ ವಿಷಯ ಕಳೆದ ನಾಲ್ಕು ತಿಂಗಳಿಂದ ಸಭೆ ನಡೆಯದಂತ ಪರಿಸ್ಥಿತಿಗೆ ಕಾರಣವಾಗಿದೆ. ೨೨೮ ಕಡಗಳ ನಡಾವಳಿ ಸೇರ್ಪಡೆ ವಿಷಯ ಒಂದೆಡೆ ಅಧ್ಯಕ್ಷರು ಮತ್ತು ಆಯುಕ್ತರ ಮಧ್ಯೆ ಯುದ್ಧಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಸಮರದ ರೂಪ ಪಡೆದಿದೆ. ಇ.ವಿನಯ್ಕುಮಾರ ಅವರ ಬೆಂಬಲಿ ಕಾಂಗ್ರೆಸ್ ಮುಖಂಡರು ೨೨೮ ಕಡತಗಳಿಗೆ ಸಂಬಂಧಿಸಿ ತೀವ್ರ ಆಕ್ಷೇಪ ವ್ಯಕ್ತ ಪಡಿಸುತ್ತಿರುವ ಜಾಲ್ದಾರ್ವರನ್ನು ತಡೆಯುವಂತೆ ಪ್ರಭಾವ ಭೀರಲು ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ಬಳಿಗೆ ತೆರಳಿದ ಸಂಗತಿಯೂ ನಗರಸಭೆ ಸದಸ್ಯರ ಮಧ್ಯೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಒಟ್ಟಾರೆಯಾಗಿ ೨೨೮ ಬೋಗಸ್ ಕಡತಗಳ ಬಿಲ್ ಪಾವತಿ ಪ್ರಕರಣ ಈಗ ನಗರಸಭೆಯಲ್ಲಿ ಏಕಕಾಲಕ್ಕೆ ಒಂದೆಡೆ ಅಧಿಕಾರಿಗಳ ಮತ್ತು ವಿರೋಧ ಪಕ್ಷದ ಮುಖಂಡರ ಮಧ್ಯೆ ರಣಾಂಗ ಕೇಂದ್ರವಾಗಿ ಮುಂದಿನ ಸಭೆಯಲ್ಲಿ ಈ ನಡಾವಳಿಯನ್ನು ಮಂಡಿಸುವಂತೆ ಮಾಡುಯವಲ್ಲಿ ಅಧ್ಯಕ್ಷ ಇ.ವಿನಯ್ ಕುಮಾರ ಯಾವ ತಂತ್ರ ಹೂಡುತ್ತಾರೆ ಎನ್ನುವ ಕುತೂಹಲ ಎಲ್ಲನ್ನು ಕಾಡುವಂತೆ ಮಾಡಿದೆ..



















