ಬೆಲೆಬಾಳುವ ವಸ್ತ್ರಾಭರಣಗಳು ಇತರೆ ಕಾಗದ ಪತ್ರಗಳ ದಾಖಲೆಗಳು ಹಾನಿ..!
ಇಂಡಿ : ದೇವರ ಜಗುಲಿಯ ಮೇಲಿನ ಉರಿಯುವ ದೀಪವು ಆಕಸ್ಮಿಕವಾಗಿ ಜಗುಲಿಯಿಂದ ಕೆಳಗೆ ಬಿದ್ದಿರುವ ಪರಿಣಾಮ ಗುಡಿಸಲಿಗೆ ಬೆಂಕಿ ತಗುಲಿ ಅಪಾರ ಹಾನಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ವಾಲಿಕಾರ ಎಂಬುವರ ತೋಟದ ವಸ್ತಿಯಲ್ಲಿರುವ ಗುಡಿಸಲಿಗೆ ಬೆಂಕಿ ತಗುಲಿದೆ. ಗುಡಿಸಲಿನಲ್ಲಿರುವ ಐದು ಲಕ್ಷ ಹಣ, ಎರಡು ತೊಲೆ ಬಂಗಾರು, ಒಂದು ಚೀಲ ಮೆಣಸಿನಕಾಯಿ, ಬಂಗಾರದ ಗುಳದಾರಿ, ಬೆಲೆಬಾಳುವ ವಸ್ತ್ರಾಭರಣಗಳು ಇತರೆ ಕಾಗದ ಪತ್ರಗಳ ದಾಖಲೆಗಳು ಹಾನಿ ಆಗಿದ್ದಾವೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.