ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ : ಸಂತೆ ಬಂದ
ಇಂಡಿ : ತಾಲೂಕಿನಲ್ಲಿ ದನಕರುಗಳಿಗೆ ಅಲ್ಲಲ್ಲಿ ಸ್ವಲ್ಪ
ಪ್ರಮಾಣದಲ್ಲಿ ಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು ರೈತರು ಜಾಗೃತಿಯಿಂದ ಇರಲು ಮುಖ್ಯ ಪಶು ವೈದ್ಯಾಧಿಕಾರಿ ರಾಜಕುಮಾರ ಅಡಕಿ ಮತ್ತು ತಹಸೀಲ್ದಾರ ಬಿ.ಎಸ್.ಕಡಕಬಾವಿ ತಿಳಿಸಿದ್ದಾರೆ.
ಮನುಷ್ಯನಿಗೆ ಕೊರೊನಾ ಬಂದ ರೀತಿಯಲ್ಲಿ
ಪ್ರಾಣಿಗಳಿಗೆ ಗಂಟುರೋಗ ಬರುತ್ತಿದೆ. ಅದಕ್ಕೆ
ಔಷಧಿ ಇಲ್ಲ. ಆದರೂ ಈ ಹಿಂದೆ ಚರ್ಮ ಗಂಟುರೋಗ
ಕಾಣಿಸಿಕೊಂಡಾಗ ಲಸಿಕೆ ನೀಡಲಾಗಿದ್ದು ಸಧ್ಯ
ಹೆಚ್ಚಾಗುವ ಸಾದ್ಯತೆ ಕಡಿಮೆ. ಚರ್ಮ ಗಂಟುರೋಗ ಬಂದ ಜಾನುವಾರುಗಳಿಗೆ ಮೈ ಮೇಲೆ ಗುಳ್ಳೆಗಳಾಗಿ ನಂತರ ಗಂಟುಗಳಾಗುತ್ತವೆ. ಒಡೆಯುವ
ಸ್ಥಿತಿಯಲ್ಲಿರುವಾಗ ಜಾನುವಾರುಗಳು ಸಾಯಬಹುದು.
ಚರ್ಮ ಗಂಟು ರೋಗ ಬಂದ ಜಾನುವಾರುಗಳ
ದೇಹದ ಉಷ್ಣತೆ ಹೆಚ್ಚಾಗುತ್ತದೆ. ಜಾನುವಾರುಗಳು
ಮೇವು ತಿನ್ನುವದಿಲ್ಲ. ಅಥವಾ ಕಡಿಮೆ ತಿನ್ನುತ್ತವೆ.
ನೀರು ಕುಡಿಯುವದಿಲ್ಲ. ಇದರಿಂದ ಜಾನುವಾರುಗಳು ಸಾವನ್ನೊಪ್ಪಬಹುದು. ಅತಿಯಾದ ಜ್ವರ ಜ್ವರ ಪ್ರಾರಂಭವಾದಾಗ 48 ಗಂಟೆಗಳಲ್ಲಿ ದೇಹದ ಬಹುತೇಕ ಭಾಗಗಳಲ್ಲಿ 1 ರಿಂದ 2 ಸೆ.ಮಿ ಗಾತ್ರದ ಗಂತಿ ಅಥವಾ
ಹದ್ದುಗಳೇಳುತ್ತವೆ. ಕೀಲುಗಳಲ್ಲಿ ಬಾವು ಮತ್ತು ಊತ ಬಾವಿನಿಂದಾಗಿ ಹಸು 24 ರಿಂದ 48 ಗಂಟೆ ಮಲಗಲು ಸಾದ್ಯವಾಗುವದಿಲ್ಲ ಎಂದು ರಾಜಕುಮಾರ ಅಡಕಿ ತಿಳಿಸಿದ್ದಾರೆ.
ಇದು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ
ಬರುವ ರೋಗ. ಬಿಸಿಲಿಗೆ ರೋಗ ಹೆಚ್ಚಾಗುತ್ತದೆ.
ಕಾರಣ ಮನ್ನಚ್ಚರಿಕೆಗಾಗಿ ಜಿಲ್ಲಾಧಿಕಾರಿಗಳು ಸಂತೆ
ಬಂದು ಮಾಡಲು ತಿಳಿಸಿದ್ದಾರೆ. ಚರ್ಮ ಗಂಟು ರೋಗ ಬಂದ ತಕ್ಷಣ ರೈತರು ಪಟ್ಟಣದ ಅಥವಾ ಸಮೀಪ ಪಶು ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದು. ಮತ್ತು ಜಾನುವಾರುಗಳನ್ನು ರೋಗದಿಂದ ಮುಕ್ತ ಮಾಡಬಹುದು ಎಂದು ಅಡಕಿ ತಿಳಿಸಿದ್ದಾರೆ.