ದೇಶವೇ ಸಂಭ್ರಮಿಸುವ ಹಬ್ಬ : ಶ್ರೀನಿವಾಸ ರೂಗಿ..
ಇಂಡಿ : ಶಾಂತಿ ಸುವ್ಯವಸ್ಥಿತ ರಾಷ್ಟ್ರ ಅಂದ್ರೆ, ಅದು ನಮ್ಮ ಭವ್ಯ ಭಾರತ ರಾಷ್ಟ್ರ. ಅದಕ್ಕೆ ಕಾರಣವೇ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ತಳವಾರ (ರೂಗಿ) ಹೇಳಿದರು.
ತಾಲ್ಲೂಕಿನ ಹಿರೇರೂಗಿ- ಗ್ರಾಮದಲ್ಲಿ ಪ್ರತಿಷ್ಠಿತ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ೭೪ ನೇ ಗಣರಾಜ್ಯೋತ್ಸವ ನಿಮತ್ಯ ಡಾ.ಬಿ ಆರ್ ಅಂಬೇಡ್ಕರ್ & ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ೭೪ ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಧ್ವಜಾರೋಹಣ ಪ್ರಗತಿ ಪರ ರೈತ ಜೆಟ್ಟಪ್ಪ ಮೂಲಿಮನಿ ನೆರಿವೆರಿಸಿದರು. ತದನಂತರ ಮಾತಾನಾಡಿದ ಅವರು, ತಾಲ್ಲೂಕು ಜಿಲ್ಲೆ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಥಸಂಚಲನ ಕಾಣಿಸುತ್ತದೆ. ಆದರೆ ಇಂತಹ ಗ್ರಾಮೀಣ ಭಾಗದ ಶಾಲೆಯಲ್ಲಿಯೂ ಅಚ್ಚುಕಟ್ಟಾಗಿ ಶಿಸ್ತು ಬದ್ದವಾಗಿ ವಿಧ್ಯಾರ್ಥಿಗಳು ಪಥಸಂಚನ ಮಾಡಿದ್ದು ಸಂತಸ ಮೂಡಿಸಿದೆ ಎಂದರು.
ಇನ್ನೂ ಶಾಲೆಯಲ್ಲಿ ದೇಶ ಭಕ್ತಿ ಮೆರೆಯುವ ನಾಟಕ, ನೃತ್ಯ, ಹಾಡುಗಳು ಇನ್ನೂ ಹಲವಾರು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಗ್ರಾ.ಪ.ಮಾಜಿ ಅಧ್ಯಕ್ಷ ಜೆಟ್ಟಪ್ಪ ,ಮರಡಿ ಹಾಲಿ ಗ್ರಾ.ಪ ಸದಸ್ಯ ಭೀಮಣ್ಣ ಜೇವೂರ,
ಅಖಂಡ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಭೀಮಣ್ಣ ಉಪ್ಪಾರ, ಸಂಜೀವ ಕುಮಾರ್ ರೂಗಿ ಹಾಗೂ ಇನ್ನೂ ಅನೇಕ ಮುಖಂಡರು, ಪಾಲಕರು ಉಪಸ್ಥಿತರಿದ್ದರು.