ಟಾಸ್ಕ್ ಪೋರ್ಸ ಸಭೆ: ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಿ : ಅಬೀದ್ ಗದ್ಯಾಳ
ಇಂಡಿ: ತಾಲೂಕಿನ 22 ಗ್ರಾ.ಪಂ ನ 25 ಗ್ರಾಮಗಳಿಗೆ ಪ್ರತಿದಿನ 50 ಟ್ಯಾಂಕರ ಮೂಲಕ ಪ್ರತಿದಿನ 106 ಟ್ರೀಪ್ ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
ಅವರು ಗುರುವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ
ತಹಸೀಲ್ದಾರ ಸಬಾಭವನದಲ್ಲಿ ಟಾಸ್ಕ ಫೋರ್ಸ
ಸಮಿತಿಯಿಂದ ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮಳೆಗಾಲದಲ್ಲಿ ಸಮರ್ಪಕ ಕೊರತೆಯ, ಕೊರತೆಯಿಂದ ಈಗ ಬರಗಾಲ ಬಿದ್ದಿದ್ದು ನೀರಿನ ದುಸ್ತರವಾಗುತ್ತಿದೆ. ನೀರಿನ ಬಗ್ಗೆ ತಾತ್ಸಾರ ಬೇಡ. ಹಿರೇಬೇವನೂರ, ಅಥರ್ಗಾ ಮತ್ತು ಹೋರ್ತಿ ಸೇರಿದಂತೆ ತಾಲೂಕಿನಲ್ಲಿರುವ ವಸತಿಗಳಿಗೆ ಬೇಡಿಕೆಯ ಅನುಗುಣವಾಗಿ ನೀರನ್ನು
ಪೂರೈಸಲಾಗುತ್ತಿದೆ. ನೀರು ಪೂರೈಸುವ ಆಪ್
ಬಳಸಬೇಕು. ಕಿ.ಮಿ ತಿಳಿಸಬೇಕು. ಅಂದರೆ ಮಾತ್ರ
ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಟ್ಯಾಂಕರಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜನ್ಸಿ ಜಿ.ಪಿ.ಎಸ್ ನಲ್ಲಿ ಗುರುತಿಸಬೇಕು. ಮತ್ತು ಮುಂದಿನ ದಿನಗಳಲ್ಲಿ ಟ್ಯಾಂಕರ್ ಆಪ್ ಉಪಯೋಗಿಸುವ ಕುರಿತು ಮಾಹಿತಿ ನೀಡಿದರು.
ಅಧಿಕ್ಷಕ ಅಭಿಯಂತರ ಕೆಬಿಜೆಎನ್ ಎಲ್ ರಾಂಪೂರದ ಮನೋಜಕುಮಾರ ಗಡಬಳ್ಳಿ ಮಾತನಾಡಿ ನಾರಾಯಣಪುರ ಜಲಾಶಯದಲ್ಲಿ ಕುಡಿಯುವ ನೀರಿನ ಕುರಿತು ನೀರು ಇದೆ. ಅಧಿಕಾರಿಗಳು ಒಂದು ವಾರ ಮುಂಚಿತವಾಗಿ ತಿಳಿಸಿದರೆ ಬೇಡಿಕೆ ಅನುಗುಣವಾಗಿ ಕುಡಿಯುವ ನೀರಿಗೆ ಪೂರೈಸಲಾಗುವದು. ಈಗಾಗಲೇ ಹಂಜಗಿ ಕೆರೆಯಲ್ಲಿ 4 ಮೀ, ಸಂಗೋಗಿ, ಅರ್ಜನಾಳ
ಕೆರೆಯಲ್ಲಿ ಶೇ 50 ರಷ್ಟು, ಲೋಣಿ ಕೆರೆಯಲ್ಲಿ
ಶೇ 75 ರಷ್ಟು ನೀರಿದೆ ಮತ್ತು ನೀರು ಮಾರ್ಚ 31 ರ
ವರೆಗೆ ಕುಡಿಯಲು ಸಾಕಾಗುತ್ತದೆ. ಕಂದಾಯ
ಗ್ರಾಮಗಳಲ್ಲಿ ಬಹುಹಳ್ಳಿ ಯೋಜನೆ ಅಡಿ ನೀರು
ಪೂರೈಕೆ ಯಾಗುತ್ತಿದೆ ಎಂದರು.
ತಹಸೀಲ್ದಾರ ಮಂಜುಳಾ ನಾಯಕ, ಇಒ ಬಾಬು
ರಾಠೋಡ, ಎಸ್.ಆರ್.ರುದ್ರವಾಡಿ, ಟಿ.ಎಸ್.ಅಲಗೂರ, ಪಿಡಿಒ ಸಿ.ಜಿ.ಪಾರೆ, ಬಸವರಾಜ ಬಿರಾದಾರ ಮಾತನಾಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಮಹಾದೇವಪ್ಪ
ಏವೂರ, ಹೆಸ್ಕಾಂನ ಎಸ್.ಆರ್.ಮೆಂಡೆಗಾರ,
ತೋಟಗಾರಿಕೆಯ ಎಚ್.ಎಸ್.ಪಾಟೀಲ, ಪಶು ಇಲಾಖೆಯ ಬಿ.ಎಚ್. ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮತ್ತಿತತರರಿದ್ದರು.
ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಟಾಸ್ಕ ಫೋರ್ಸ ಸಮಿತಿಯ ಅಧಿಕಾರಿಗಳ ಸಭೆಯಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.