ಕಲಬುರ್ಗಿ: ಏನು ಅರಿಯದ ಮುಗ್ಧ ಮನಸ್ಸಿನ ಅಪ್ರಾಪ್ತ ಬಾಲಕಿಯ ಮೇಲೆ ಕ್ರೂರತೆ ಮೆರೆದಿದ್ದು, ಅತ್ಯಾಚಾರಗೈದಿದ್ದು ಇಡೀ ಮಾನವ ಕುಲ ತಲೆ ತಗ್ಗಿಸುವಂತಾಗಿದೆ. ಇದು ಕರ್ನಾಟಕದಲ್ಲಿ ಪದೆ ಪದೇ ಇಂತಹ ಘಟನೆ ನಡೆಯುತ್ತಿದ್ದಿದ್ದು ನಾಚಿಕೆ ಸಂಗತಿ. ಈ ಕೂಡಲೇ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಶೀಘ್ರ ಉಗ್ರ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿ, ಇಲ್ಲಿನ ಜನ ಬೆಂಬಲ ವೇದಿಕೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಢಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಆಳಂದ ತಾಲ್ಲೂಕಿನ ದೇವಂತಗಿ ಗ್ರಾಮದ ಪ್ರೀತಿ ಪರಮೇಶ್ವರ್ ನಾಯಿಕೋಡೆ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಾವಿಗೆ ಬಿಸಾಕಿದ್ದ ಕಿಡಗೆಡಿಗಳಿಗೆ, ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇದೇ ಕಳೆದ 7 ತಿಂಗಳು ಹಿಂದೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಪವಿತ್ರ ಪೂಜಾರಿ ಎಂಬ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈಗ ಆ ಘಟನೆ ಮರೆಯುವ ಮುನ್ನ ಮತ್ತೇ ಕೆಟ್ಟ ದುರಳರಿಂದ ಅತ್ಯಾಚಾರ ನಡೆದಿದೆ. ಇನ್ನೂ ಕೊಡಲೇ ಸರ್ಕಾರ ಪ್ರೀತಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಧನ ಸಹಾಯ, ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಜನ ಬೆಂಬಲ ವೇದಿಕೆ ತಾಲೂಕ ಘಟಕ ಅಫಜಲಪುರ ವತಿಯಿಂದ ಮಾನ್ಯ ದಂಡಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಉಮೇಶ ಅಂದೋಡಗಿ, ಉಪಾಧ್ಯಕ್ಷ ಸಾಗರ್ ಸಂಗೋಳ್ಳಗಿ, ಬಡದಾಳ ವಲಯ ಅಧ್ಯಕ್ಷ ಮಲ್ಲಿಕಾರ್ಜುನ ದುತ್ತರಗಾಂವ, ತಾಲೂಕ ವಿದ್ಯಾರ್ಥಿ ಘಟಕದ ಸಂಚಾಲಕ ಕಿರಣ್ಣ ಪಾಟೀಲ್ , ಸಿದ್ದು ಪೂಜಾರಿ ಮಂಗಳೂರು, ಶ್ರೀಶೈಲ ಗೌರ, ಸಿದ್ದು ದುದ್ದಗಿ, ಭಾಗೇಶ ಪೂಜಾರಿ, ಮತ್ತು ಇನ್ನಿತ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.