ವಿಜಯಪುರ : ನಗರದ ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಹತ್ಯೆಗೆ ಟ್ವಿಸ್ಟ್ ಸಿಕ್ಕಿದೆ. ಆ ದಿನ ಪಕ್ಕಾ ಪ್ಲ್ಯಾನ್ ಮಾಡಿ ಆತನನ್ನು ಭೀಕರ ಹತ್ಯೆ ಮಾಡಲಾಗಿದೆ. ಹೌದು.. ಇಬ್ರಾಹಿಮಪುರ ಗೇಟಿನ ಹತ್ತಿರ ಇರುವ ಬಾರ್ವೊಂದರಲ್ಲಿ ಮದ್ಯ ಖರೀದಿ, ಕನಕದಾಸ ಬಡಾವಣೆಯ ಬಳಿಯಲ್ಲಿರುವ ಸ್ಥಳದಲ್ಲಿಯೇ ಮಸ್ತ್ ಮದ್ಯದ ಪಾರ್ಟಿ ಮಾಡಿದ್ದಾರೆ. ತದನಂತರ ಆತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಉನ್ನತ ಪೊಲೀಸ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಕೊಲೆಯಾದ ಸ್ಥಳದಲ್ಲಿ ಮದ್ಯ ಪೌಚ್ಗಳು ಪತ್ತೆಯಾಗಿವೆ. ಅದರಿಂದ ಮದ್ಯ ಎಲ್ಲಿ ಖರೀದಿಸಲಾಗಿದೆ ಎಂದಜ ಮಾಹಿತಿ ಸಿಕ್ಕಿದೆ. ಮದ್ಯದ ಪೌಚ್ಗಳಿಂದ ಆರೋಪಿಗಳ ಪತ್ತೆಗೆ ಪೊಲೀಸ ಬೇಟೆ ಆರಂಭಿಸಿದ್ದಾರೆ ಎನ್ನಲಾಗಿದೆ.