ಭ್ರೂಣ ಹತ್ಯೆ ಅಕ್ಷ್ಯಮ ಅಪರಾಧ : ಸಚಿವ ಎಮ್.ಬಿ ಪಾಟಿಲ
ವಿಜಯಪುರ : ಭ್ರೂಣ ಹತ್ಯೆ ಅಕ್ಷ್ಯಮ ಅಪರಾಧ ಎಂದು ಸಚಿವ ಎಂಬಿ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಇದೊಂದು ಹೀನಾಯ ಕೆಲಸ ಆಗಿದೆ. ಲಿಂಗ ಪತ್ತೆ ಮಾಡುವುದು ಅಪರಾಧ. ಅದಕ್ಕಾಗಿ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಗಂಡು, ಹೆಣ್ಣು ಮಧ್ಯೆ ತಾರತಮ್ಯ ಇರಬಾರದು. ಹೆಣ್ಣು ಲಕ್ಷ್ಮಿ ಇದ್ದಂಗೆ, ಗಂಡು ಮಕ್ಕಳಕ್ಕಿಂತ ಹೆಣ್ಣು ಮಕ್ಕಳು ಒಳ್ಳೆಯದು. ಕೊನೆಯ ಕಾಲದಲ್ಲಿ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಾರೆ. ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಗೆಲವು ಪಕ್ಕಾ. ಆದ್ರೂ ನಾಲ್ಕನೆ ಪ್ರಯತ್ನ ಮಾಡುತ್ತೇವೆ. ಆದ್ರೇ, ಮೂರು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಪಕ್ಕಾ ಎಂದು ಸಚಿವ ಪಾಟೀಲ ಹೇಳಿದರು.