ಪೆ-2 ರಂದು ಕೊರವಂಜಿ ಅದ್ದೂರಿ ಜಾತ್ರಾ ಮಹೋತ್ಸವ
ಇಂಡಿ : ತಾಲ್ಲೂಕಿನ ಸುಕ್ಷೇತ್ರ ಅಹಿರಸಂಗ ಮತ್ತು ಲಚ್ಯಾಣ ಗ್ರಾಮದ ಕೊರವಂಜಿ ಜಾತ್ರಾ ಮಹೋತ್ಸವ ಪೆಬ್ರವರಿ – 2 ರಂದು ಜರುಗಲಿದ್ದು ಶಾಸಕ ಯಶವಂತರಾಯಗೌಡ ಪಾಟೀಲ್ ಉದ್ಘಾಟನೆ ಗೊಳಿಸಿಲಿದ್ದಾರೆ. ಕುದರಿ ಗೋಡಿಹಾಳ, ನಾಯ್ಕೊಡಿ ವಸ್ತಿಯ ಮದ್ಯದಲ್ಲಿ ಲಚ್ಯಾಣದಿಂದ ಇಂಡಿಯ ರಸ್ತೆಯ, ಅಹಿರಸಂಗ ಹಾಗೂ ಆಳೂರ ಗೇಟ್ ಹತ್ತೀರುವ ಇರುವ ಕೊರವಂಜಿದೇವಿ ಜಾತ್ರಾ ಮಹೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಗೆ ಜಾತ್ರಾ ಕಮಿಟಿ ಆಡಳಿತ ಮಂಡಳಿ ಅವರು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಕೊರವಂಜಿದೇವಿಗೆ ಪಂಚಾಮೃತ್ ಅಭಿಷೇಕ, ಉಡಿ ತುಂಬುವ,ಮುತೈದರಿಂದ ಅಂಬಲಿ ಬಿಂದಗಿ ಕಾರ್ಯಕ್ರಮ ಜರಗುವುದು. ನಂತರ ೧೦೦೧ ಮುತೈದೇಯರಿಗೆ ಉಡಿ ತುಂಬುವ ಕಾರ್ಯಕ್ರಮ ಪೂಜ್ಯ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಬಂಥನಾಳ, ಶ್ರೀ ಷ ಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರರು ತಡವಲಗಾ, ಶ್ರೀ ಷ.ಬ್ರ ಮಲ್ಲಿಕಾರ್ಜುನ ಶಿವಾಚಾರ್ಯರರು ಅವರಿಂದ ಜರುಗುವುದು. ಬೆಳಿಗ್ಗೆ ೧೦ ಘಂಟೆಗೆ ಸುಮಿತ್ರಾ ಮುಗಳಿಹಾಳ
ಮಾಳಿಂಗರಾಯ ಗಾಯನ ಸಂಘ, ಸವದತ್ತಿ ತಾಲೂಕು, ಬೆಳಗಾಂವಿ ಜಿಲ್ಲೆ ಹಾಗೂ ಅಭಿನವ ಸಿದ್ದರತ್ನ ಮಡಗೊಂಡ ಮಹಾರಾಜರು ಶ್ರೀ ಗುರು ಅಮೋಘಸಿದ್ದ ಗಾಯನ ಸಂಘ ಬಸವನ ಸಂಗೊಳಗಿ, ಅಕ್ಕಲಕೋಟ ತಾಲೂಕು, ಸೊಲ್ಲಾಪುರ ಜಿಲ್ಲೆ ಇವರಿಂದ ಸುಪ್ರಸಿದ್ಧ ಡೊಳ್ಳಿನ ಪದ ಜರಗುವುದು ಎಂದು ತಿಳಿಸಿದರು.
ದಿವ್ಯ ಸಾನಿಧ್ಯೆ ಡಾ.ವೃಷಭಲಿಂಗ ಮಹಾಶೀವಯೋಗಿಗಳು ಬಂಥನಾಳ ಹಾಗೂ ಲಚ್ಯಾಣ, ಸಾನಿಧ್ಯೆ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಡವಲಗಾ ಹಾಗೂ ಉದ್ಘಾಟಕರಾಗಿ ಶಾಸಕ ಯಶವಂತರಾಯಗೌಡ ಪಾಟೀಲ, ಅಧ್ಯಕ್ಷತೆ ಎಮ್ ಆರ್ ಪಾಟೀಲ್, ಮುಖ್ಯ ಅತಿಥಿ ಹಸನಸಾಬ್ ಶೇಖ ಭಾಗವಹಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊರಂಜಿದೇವಿಯ ಆಶೀರ್ವಾದ ಪಡೆಯಬೇಕು ಎಂದು ರೇವಣಸಿದ್ದ ಹತ್ತಳ್ಳಿ ಮಾಹಿತಿ ನೀಡಿದರು.